ಕೊರೋನಾ : ರಾಜ್ಯದಲ್ಲಿ ಈಗೇಲ್ಲಿಗೆ ತಲುಪಿದೆ ಮಹಾಮಾರಿ ಹಂತ?

By Kannadaprabha NewsFirst Published Sep 21, 2020, 7:56 AM IST
Highlights

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಮುಂದುವರಿದಿದೆ. ಜನರ ಬದುಕು ಇದರ ಜೊತೆ ಜೊತೆಯಲ್ಲೇ ಸಾಗುತ್ತಿದೆ. ಕೊರೋನಾ ಎತ್ತ ಸಾಗುತ್ತಿದೆ..?

ಬೆಂಗಳೂರು (ಸೆ.21): ರಾಜ್ಯದಲ್ಲಿ ಭಾನುವಾರ ಹೊಸದಾಗಿ 8,445 ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, 8,611 ಮಂದಿ ಗುಣಮುಖರಾಗಿದ್ದಾರೆ. ಇದೇ ದಿನ 101 ಮಂದಿ ಮೃತಪಟ್ಟಿದ್ದು ಈವರೆಗೆ ಸಾವಿಗೀಡಾದವರ ಸಂಖ್ಯೆ ಸಂಖ್ಯೆ 8 ಸಾವಿ​ರದ ಸಂಖ್ಯೆ ದಾಟಿ 8023ಕ್ಕೆ ಏರಿದೆ.

ಸೆಪ್ಟೆಂಬರ್‌ 11ರಂದು ಸಾವಿನ ಸಂಖ್ಯೆ 7 ಸಾವಿರ ದಾಟಿತ್ತು. ಆ ನಂತ​ರದ 10 ದಿನ​ದಲ್ಲಿ 1000 ಸೋಂಕಿ​ತರು ಸಾವ​ನ್ನ​ಪ್ಪಿ​ದ್ದಾ​ರೆ.

ಈ ನಡುವೆ, 8,611 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗುವುದರೊಂದಿಗೆ ಈವರೆಗೆ 4.13 ಲಕ್ಷ ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿನ ಗುಣಮುಖರ ಸಂಖ್ಯೆ ರಾಷ್ಟ್ರೀಯ ಸರಾಸರಿ ಶೇ.79.68ಕ್ಕಿಂತ ಕಡಿಮೆಯಿದೆ.

8,191 ಮಂದಿಗೆ ಕೊರೋನಾ ಸೋಂಕು ತಗುಲುವುದರೊಂದಿಗೆ ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 5.19 ಲಕ್ಷ ತಲುಪಿದೆ. ಇದರಲ್ಲಿ 98,043 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 811 ಮಂದಿ ರಾಜ್ಯದ ವಿವಿಧ ಕೋವಿಡ್‌ ಅಸ್ಪತ್ರೆಗಳಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ರಾಜ್ಯದಲ್ಲಿ 60,477 ಕೊರೋನಾ ಪರೀಕ್ಷೆಗಳು ನಡೆದಿದ್ದು ಈವರೆಗೆ ಒಟ್ಟು 42.4 ಲಕ್ಷ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದೆ.

ಕೊರೋನಾದಿಂದ ಗುಣಮುಖ ಆದವರ ಅಧ್ಯಯನಕ್ಕೆ ಸಮಿತಿ ರಚನೆ: ಸುಧಾ​ಕ​ರ್‌ .

ಬೆಂಗ​ಳೂ​ರಲ್ಲೇ ಅಧಿ​ಕ: ಬೆಂಗಳೂರು ನಗರದಲ್ಲಿ 32, ಮೈಸೂರಿನಲ್ಲಿ ಒಂದು ವರ್ಷದ ಹೆಣ್ಣು ಮಗು ಸೇರಿದಂತೆ 12, ಬಳ್ಳಾರಿ 8, ಬೆಳಗಾವಿ, ದಕ್ಷಿಣ ಕನ್ನಡ, ಹಾಸನ, ಶಿವಮೊಗ್ಗ ತಲಾ 6, ಕೊಪ್ಪಳ, ಗದಗ ತಲಾ 4, ಉತ್ತರ ಕನ್ನಡ, ಹಾವೇರಿ, ತಲಾ 2, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಮಂಡ್ಯ, ರಾಯಚೂರು, ತುಮಕೂರು, ವಿಜಯಪುರ ಜಿಲ್ಲೆಯಲ್ಲಿ ತಲಾ ಒಬ್ಬರು ಕೊರೋನಾದಿಂದ ಮೃತಪಟ್ಟಿದ್ದಾರೆ.

ಬೆಂಗಳೂರು ನಗರದಲ್ಲಿ 3322, ಮೈಸೂರು 481, ದಕ್ಷಿಣ ಕನ್ನಡ 380, ಕೊಪ್ಪಳ 337, ಧಾರವಾಡ 305, ಬಳ್ಳಾರಿ 298 ಉಡುಪಿ ಮತ್ತು ಶಿವಮೊಗ್ಗ 295, ಹಾಸನ 277, ಚಿತ್ರದುರ್ಗ 254, ತುಮಕೂರು 244, ಬೆಂಗಳೂರು ಗ್ರಾಮಾಂತರ 179, ಮಂಡ್ಯ 165, ಬೆಳಗಾವಿ 151, ಕಲಬುರಗಿ 136, ದಾವಣಗೆರೆ 130, ಚಿಕ್ಕಮಗಳೂರು 129, ಯಾದಗಿರಿ 116, ಉತ್ತರ ಕನ್ನಡ 108, ಕೋಲಾರ 105, ಬಾಗಲಕೋಟೆ 90, ಚಿಕ್ಕಬಳ್ಳಾಪುರ ಮತ್ತು ವಿಜಯಪುರ 81, ಬೀದರ್‌ 77, ಗದಗ 75, ಚಾಮರಾಜನಗರ 69, ರಾಮನಗರ 57, ಹಾವೇರಿ 44 ಹಾಗೂ ಕೊಡಗು ಜಿಲ್ಲೆಯಲ್ಲಿ 32 ಹೊಸ ಕೋವಿಡ್‌ ಪ್ರಕರಣಗಳು ದೃಢ ಪಟ್ಟಿವೆ.

click me!