ಸರ್ಕಾರದ ಅವಧಿ ಬಗ್ಗೆ ಈ ಮುಖಂಡ ಹೇಳಿದ ಭವಿಷ್ಯವೇನು?

By Web DeskFirst Published Jan 29, 2019, 12:30 PM IST
Highlights

ಸದ್ಯ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿದೆ. ಇದೇ ಸಂದರ್ಭದಲ್ಲಿ ಮುಖಂಡರೋರ್ವರು ಸರ್ಕಾರದ ಅವಧಿ ಬಗ್ಗೆ ಭವಿಷ್ಯ ನುಡಿದಿದ್ದು ಬಜೆಟ್ ಒಳಗೆ ಪತನವಾಗುತ್ತದೆ ಎಂದಿದ್ದಾರೆ.

ಬೆಳಗಾವಿ: ಸರ್ಕಾರ ಪತನವಾಗುವುದು ಖಚಿತ ಎಂದು ಪದೇ ಪದೆ ಹೇಳುತ್ತಿದ್ದ ಮಾಜಿ ಸಚಿವ, ಶಾಸಕ ಉಮೇಶ ಕತ್ತಿ ಇದೀಗ ಮತ್ತೆ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ.

ಸೋಮವಾರ ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್‌ ಅಧಿವೇಶನ ಪೂರ್ವದಲ್ಲಿಯೇ ರಾಜ್ಯ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿ ಕೆಡುವುದಿಲ್ಲ. 

ಬಜೆಟ್‌ ಅಧಿವೇಶನದ ಮೊದಲು ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂದ ಅವರು, ಸಿಎಂ ಎಚ್‌.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡುತ್ತೇನೆ ಎನ್ನುವುದು ಇದಕ್ಕೆ ನಿರ್ದಶನವಾಗಿದೆ ಎಂದರು.

click me!