ಕಡೂರು ಬಸ್ ನಿಲ್ದಾಣದಲ್ಲಿ ಅರೆನಗ್ನವಾಗಿ ವಿದೇಶಿ ಪ್ರಜೆ ಹುಚ್ಚಾಟ; ಹಿಡಿಯಲು ಓಡೋಡಿ ಪೊಲೀಸರೇ ಸುಸ್ತು!

Published : May 10, 2024, 09:18 PM IST
ಕಡೂರು ಬಸ್ ನಿಲ್ದಾಣದಲ್ಲಿ ಅರೆನಗ್ನವಾಗಿ ವಿದೇಶಿ ಪ್ರಜೆ ಹುಚ್ಚಾಟ; ಹಿಡಿಯಲು ಓಡೋಡಿ ಪೊಲೀಸರೇ ಸುಸ್ತು!

ಸಾರಾಂಶ

ವಿದೇಶಿ ಪ್ರಜೆಯೊಬ್ಬ ಬಸ್‌ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಅರೆನಗ್ನವಾಗಿ ಓಡಾಡಿ ಹುಚ್ಚಾಟ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಚಿಕ್ಕಮಗಳೂರು (ಮೇ.10): ವಿದೇಶಿ ಪ್ರಜೆಯೊಬ್ಬ ಬಸ್‌ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಅರೆನಗ್ನವಾಗಿ ಓಡಾಡಿ ಹುಚ್ಚಾಟ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಅಬ್ರಾಡ್ ಪ್ರಜೆಯಾಗಿರುವ ವ್ಯಕ್ತಿ. ಮೈಮೇಲಿನ ಬಟ್ಟೆ ಕಳಚಿ, ಸೊಂಟಕ್ಕೆ ಪ್ಲಾಸ್ಟಿಕ್ ಚೀಲ ಸುತ್ತಿಕೊಂಡು ಹುಚ್ಚನಂತೆ ವರ್ತಿಸಿದ್ದಾನೆ. ಬಸ್‌ ನಿಲ್ದಾಣ, ಕಡೂರು ಪಟ್ಟಣವೆಲ್ಲ ಓಡಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಇದು ಪೊಲೀಸರ ಗಮನಕ್ಕೆ ಬಂದ ವಿದೇಶಿ ಪ್ರಜೆಯನ್ನು ಹಿಡಿಯಲು ಬಂದಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡಿದ್ದಾನೆ. ಬಸ್ ನಿಲ್ದಾಣದ ಸುತ್ತಲು ಪೊಲೀಸರನ್ನೇ ಮಟಮಟ ಮಧ್ಯಾಹ್ನದಲ್ಲಿ ಓಡಾಡಿಸಿ ಹುಚ್ಚಾಟ ಮಾಡಿದ್ದಾನೆ. ಅವನನ್ನು ಹಿಡಿಯಲು ಹಿಂದೆ ಓಡಿ ಓಡಿ ಸುಸ್ತಾದ ಪೊಲೀಸರು. ಕೊನೆಗೂ ಹರಸಾಹಸ ಪಟ್ಟು ಹಿಡಿದ ಪೊಲೀಸರು. ಪರ್ಷಿಯನ್ ಮಾತನಾಡುತ್ತಿದ್ದು ಇದು ಪೊಲೀಸರಿಗೆ ಅರ್ಥವಾಗದ ಹಿನ್ನೆಲೆ ಕಡೂರು ಪೊಲೀಸರು ಆತನಿಗೆ ಊಟ ಮಾಡಿಸಿ, ಬಟ್ಟೆ ಕೊಡಿಸಿ ಬೆಂಗಳೂರು ಟ್ರೈನ್ ಹತ್ತಿಸಿ ಕೊನೆಗೂ ಅಲ್ಲಿಂದ ಸಾಗಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ