
ಬೆಂಗಳೂರು(ಮಾ.30): ರಾಜ್ಯದಲ್ಲಿ ಕೊರೋನಾ ಸೋಂಕು ರಣ ಕೇಕೆ ಹಾಕಿದ್ದು, ಸೋಮವಾರ ಒಂದೇ ದಿನ 16 ಮಂದಿಯನ್ನು ಬಲಿ ಪಡೆದಿದೆ. ಮೂರೂವರೆ ತಿಂಗಳ ಬಳಿಕ ರಾಜ್ಯದಲ್ಲಿ ಒಂದೇ ದಿನ ಇಷ್ಟೊಂದು ಮಂದಿ ಸೋಂಕಿಗೆ ಬಲಿಯಾಗುತ್ತಿರುವುದು ಇದೇ ಮೊದಲು.
ಡಿ.11ರಂದು 16 ಮಂದಿ ಸಾವಿಗೀಡಾದ ಬಳಿಕ ಮೃತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದರೆ ಈಗ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ನಡುವೆ, ರಾಜ್ಯದಲ್ಲಿ ಸೋಮವಾರ 2,792 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಭಾನುವಾರ ಐದೂವರೆ ತಿಂಗಳ ಬಳಿಕ 3000 ಪ್ರಕರಣ ವರದಿಯಾಗಿದ್ದವು. ಅದಕ್ಕೆ ಹೋಲಿಸಿದರೆ ಸೋಮವಾರ ಸೋಂಕು ಕಡಿಮೆಯಾಗಿದೆ.
ಕಳೆದ ಆರು ದಿನಗಳಿಗೆ ಹೋಲಿಸಿದರೆ ಪರೀಕ್ಷೆ ಪ್ರಮಾಣದಲ್ಲಿ ಸುಮಾರು 20 ಸಾವಿರ ಕಡಿಮೆಯಾಗಿದೆ. ಇದು ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಲು ಕಾರಣವಾಗಿದೆ.
ದೇಶದಲ್ಲಿ 68020 ಕೇಸ್: 5.5 ತಿಂಗಳಲ್ಲೇ ಗರಿಷ್ಠ
ದೇಶದಲ್ಲಿ ಕೊರೋನಾ ಪ್ರಕರಣಗಳ ಸ್ಫೋಟ ಮುಂದುವರಿದಿದ್ದು, ಸೋಮವಾರ 68020 ಕೇಸುಗಳು ಪತ್ತೆಯಾಗಿವೆ. ಒಂದೇ ದಿನ ಇಷ್ಟುಪ್ರಕರಣ ದೃಢಪಡುತ್ತಿರುವುದು ಐದೂವರೆ ತಿಂಗಳ ಬಳಿಕ ಇದೇ ಮೊದಲು. ಇದೇ ವೇಳೆ, 291 ಮಂದಿ ಸಾವಿಗೀಡಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ