ಋತುಮತಿಯೊಂದಿಗೆ ಫಸ್ಟ್ ಟೈಂ ಸೆಕ್ಸ್‌ಗೆ ₹20 ಲಕ್ಷ ಡಿಮ್ಯಾಂಡ್ ಕೇಸ್; ಪೋಷಕರ ಹುಡುಕಾಟದ್ದೇ ದೊಡ್ಡ ಸವಾಲು!

Published : Sep 30, 2025, 07:42 PM IST
mysuru child trafficking case

ಸಾರಾಂಶ

ಬೆಂಗಳೂರಿನಲ್ಲಿ 6ನೇ ತರಗತಿ ವಿದ್ಯಾರ್ಥಿನಿಯನ್ನು ವಾಟ್ಸಾಪ್ ಗ್ರೂಪ್ ಮೂಲಕ ಮಾರಾಟಕ್ಕಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಮೂಢನಂಬಿಕೆಯ ಹೆಸರಿನಲ್ಲಿ 20 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ಈ ಜಾಲದ ಹಿಂದಿನ ದೊಡ್ಡ ಮಾಫಿಯಾದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು(ಸೆ.30): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 6ನೇ ತರಗತಿ ವಿದ್ಯಾರ್ಥಿನಿಯನ್ನು ವಾಟ್ಸಾಪ್ ಗ್ರೂಪ್ ಮೂಲಕ ಮಾರಾಟಕ್ಕಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಬಂಧಿತರಾದ ಆರೋಪಿ ಶೋಭಾ ಮತ್ತು ತುಳಸಿಕುಮಾರ್ ಅವರ ಹೇಳಿಕೆಗಳನ್ನು ಕೇಂದ್ರವಾಗಿಟ್ಟುಕೊಂಡು ಬಾಲಕಿಯ ನಿಜವಾದ ಪೋಷಕರನ್ನು ಪತ್ತೆಹಚ್ಚುವ ಪ್ರಯತ್ನ ನಡೆಸಿದ್ದಾರೆ. ನಾಪತ್ತೆಯಾದ ಮಕ್ಕಳ ಪ್ರಕರಣಗಳೊಂದಿಗೆ ಈ ವಿದ್ಯಾರ್ಥಿನಿಯ ಮಾಹಿತಿಯನ್ನು ತಾಳೆ ಹಾಕಿ ನೋಡಲಾಗುತ್ತಿದೆ.

ಫಸ್ಟ್ ಟೈಂ ಸೆಕ್ಸ್‌ಗೆ ₹20 ಲಕ್ಷ ಡಿಮ್ಯಾಂಡ್!

ಈ ಪ್ರಕರಣವು ಕೇವಲ ಬಾಲಕಿ ಮಾರಾಟದ ವಿಷಯವಾಗಿರದೆ, ರಾಜ್ಯದ ಕೆಲವು ಭಾಗಗಳಲ್ಲಿರುವ ಅಪಾಯಕಾರಿ ಮೂಢನಂಬಿಕೆ ಮತ್ತು ಬಾಲ್ಯ ವೇಶ್ಯಾವಾಟಿಕೆ ಜಾಲದ ಬಗ್ಗೆ ಬೆಳಕು ಚೆಲ್ಲಿದೆ. ಋತುಮತಿಯಾದ ಬಾಲಕಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್, 'ಋತುಮತಿಯಾದ ಬಾಲಕಿಯರೊಂದಿಗೆ ಲೈಂಗಿಕ ಸಂಪರ್ಕ ನಡೆಸಿದರೆ ಪುರುಷನ ಮಾನಸಿಕ ಕಾಯಿಲೆಗಳು ಗುಣವಾಗುತ್ತವೆ ಮತ್ತು ಲೈಂಗಿಕ ಶಕ್ತಿ ಹೆಚ್ಚುತ್ತದೆ' ಎಂಬ ಸುಳ್ಳು ಪ್ರಚಾರ ಮಾಡುತ್ತಿತ್ತು. ಮಾನಸಿಕ ಸಮಸ್ಯೆ ಇರುವ ಶ್ರೀಮಂತ ಪುರುಷರನ್ನು ಪತ್ತೆಹಚ್ಚಿ, ಅವರೊಂದಿಗೆ ಸಂಪರ್ಕ ಬೆಳೆಸುತ್ತಿದ್ದ ಆರೋಪಿ ಶೋಭಾ, ಮೊದಲ ಬಾರಿಯ ಲೈಂಗಿಕ ಸಂಪರ್ಕಕ್ಕಾಗಿ (First Time) ಬಾಲಕಿಗೆ 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಳು.

ಆರೋಪಿಗಳ ಗೊಂದಲದ ಹೇಳಿಕೆಗಳಿಂದ ತನಿಖೆಗೆ ತೊಡಕು

  • ಬಂಧಿತ ಆರೋಪಿ ಶೋಭಾ ತನ್ನ ಹೇಳಿಕೆಗಳನ್ನು ಪದೇ ಪದೇ ಬದಲಾಯಿಸುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ.
  • 1. ಮೊದಲು, 12 ವರ್ಷದ ಬಾಲಕಿ ತನ್ನ ಮಗಳು ಎಂದು ಹೇಳಿಕೆ ನೀಡಿದ್ದಳು.
  • 2. ನಂತರ, ಆಕೆ ತನ್ನ ಸಹೋದರನ ಮಗಳು ಎಂದು ಮಾತು ಬದಲಾಯಿಸಿದಳು.
  • 3. ಮತ್ತೆ ವಿಚಾರಣೆ ನಡೆಸಿದಾಗ, ಆಕೆಯನ್ನು ದತ್ತು ಪಡೆದಿರುವುದಾಗಿ ಹೇಳಿದ್ದಾಳೆ.

ಈ ಗೊಂದಲಕಾರಿ ಹೇಳಿಕೆಗಳಿಂದಾಗಿ ಮಗುವಿನ ಗುರುತು ಮತ್ತು ಮೂಲವನ್ನು ಪತ್ತೆಹಚ್ಚಲು ಪೊಲೀಸರು ಹೆಚ್ಚಿನ ಪ್ರಯತ್ನ ಹಾಕಬೇಕಾಗಿದೆ. ಮಗುವಿನ ತಂದೆಯ ಚಿಕಿತ್ಸೆಗಾಗಿ ಹಣ ಬೇಕು, ತಮಗೆ ಯಾವುದೇ ಕಮಿಷನ್ ಇಲ್ಲ ಎಂದು ಶೋಭಾ ಹೇಳಿದ್ದಾಳೆ ಎಂದು ಗ್ರಾಹಕರ ಸೋಗಿನಲ್ಲಿ ಸಂಪರ್ಕಿಸಿದ್ದ 'ಒಡನಾಡಿ ಸೇವಾ ಸಂಸ್ಥೆ' ಕಾರ್ಯಕರ್ತರು ತಿಳಿಸಿದ್ದಾರೆ. ಈ ಹಣದ ಉದ್ದೇಶದ ಕುರಿತು ಇರುವ ಅನುಮಾನಗಳನ್ನು ನಿವಾರಿಸಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಾಟ್ಸಾಪ್ ಗ್ರೂಪ್ ಮೇಲೆ ತೀವ್ರ ನಿಗಾ:

ಈ ಸಂಪೂರ್ಣ ಜಾಲದ ಮೂಲವನ್ನು ಪತ್ತೆಹಚ್ಚಲು ವಿಜಯನಗರ ಪೊಲೀಸರು ವಾಟ್ಸಾಪ್ ಗ್ರೂಪ್ ಅನ್ನು ಕೇಂದ್ರೀಕರಿಸಿ ತನಿಖೆ ನಡೆಸುತ್ತಿದ್ದಾರೆ. ಮಗುವಿನ ಕುರಿತು ಆಸಕ್ತಿ ತೋರಿಸಿ ಸಂಪರ್ಕಿಸಿದವರು ಯಾರು, ಮತ್ತು ಅವರೊಂದಿಗೆ ಆರೋಪಿಗಳು ನಡೆಸಿರುವ ಸಂಭಾಷಣೆಯ ವಿವರಗಳನ್ನು ಕಲೆ ಹಾಕಲಾಗುತ್ತಿದೆ. ಶೋಭಾ ಮತ್ತು ಆಕೆಯ ಸಂಗಾತಿ ತುಳಸಿಕುಮಾರ್ ಅವರು ಇದೇ ರೀತಿ ಈ ಹಿಂದೆ ಬೇರೆ ಮಕ್ಕಳನ್ನು ಮಾರಾಟ ಮಾಡಿರುವ ಅಥವಾ ಬಾಲ್ಯ ವೇಶ್ಯಾವಾಟಿಕೆ ಜಾಲದಲ್ಲಿ ಸಕ್ರಿಯರಾಗಿದ್ದಾರೆಯೇ ಎಂಬ ಅನುಮಾನಗಳ ಬಗ್ಗೆಯೂ ಕಠಿಣ ವಿಚಾರಣೆ ಮುಂದುವರಿದಿದೆ.

ಪ್ರಸ್ತುತ, ರಕ್ಷಿಸಲಾದ 6ನೇ ತರಗತಿ ವಿದ್ಯಾರ್ಥಿನಿಯನ್ನು ಮಕ್ಕಳ ಕಲ್ಯಾಣ ಸಮಿತಿ ನಿರ್ದೇಶನದಂತೆ ಮಕ್ಕಳ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ. ಈ ಜಾಲದ ಹಿಂದೆ ದೊಡ್ಡ ಮಾಫಿಯಾದ ಕೈವಾಡವಿರುವ ಸಾಧ್ಯತೆಗಳಿದ್ದು, ತನಿಖೆ ಮುಂದುವರಿದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ