ಬೆಂಗಳೂರು ವಿವಿಗೆ ಮನಮೋಹನ ಸಿಂಗ್ ಹೆಸರಿಡಲು ವಿರೋಧ; ಇಮ್ಮಡಿ ಪುಲಿಕೇಶಿ ಹೆಸರಿಡಲು ಒತ್ತಾಯ!

Published : Mar 07, 2025, 02:40 PM ISTUpdated : Mar 07, 2025, 03:14 PM IST
ಬೆಂಗಳೂರು ವಿವಿಗೆ ಮನಮೋಹನ ಸಿಂಗ್ ಹೆಸರಿಡಲು ವಿರೋಧ; ಇಮ್ಮಡಿ ಪುಲಿಕೇಶಿ ಹೆಸರಿಡಲು ಒತ್ತಾಯ!

ಸಾರಾಂಶ

ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಮನಮೋಹನ್ ಸಿಂಗ್ ವಿವಿ ಎಂದು ಮರುನಾಮಕರಣ ಮಾಡಲು ಸರ್ಕಾರ ಮುಂದಾಗಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇಮ್ಮಡಿ ಪುಲಿಕೇಶಿ ಹೆಸರಿಡುವಂತೆ ಒತ್ತಾಯ ಕೇಳಿಬಂದಿದೆ.

ಬೆಂಗಳೂರು (ಮಾ.07): ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡುಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಮನಮೋಹನ್ ಸಿಂಗ್ ಹೆಸರಿನ ಬದಲು ಇಮ್ಮಡಿ ಪುಲಿಕೇಶಿ ಎಂದು ಹೆಸರಿಡುವಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆರಂಭವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತ ಶಿಕ್ಷಣ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾ ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗುವುದು. ಈ ವಿಶ್ವವಿದ್ಯಾಲಯವನ್ನು ದೇಶದಲ್ಲಿ ಮಾದರಿಯನ್ನಾಗಿಸುವ ಉದ್ದೇಶದಿಂದ, ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಹಾಗೂ ಸರ್ಕಾರಿ ಆರ್‌.ಸಿ. ಕಾಲೇಜುಗಳನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಆದರೆ, ಬೆಂಗಳೂರು ವಿಶ್ವವಿದ್ಯಾಲಯದ 'ಮನಮೋಹನ್ ಸಿಂಗ್ ವಿಶ್ವವಿದ್ಯಾಲಯ' ಎಂದು ಮರುನಾಮಕರಣ ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಸಮಸ್ತ ಕನ್ನಡಿಗರ ವಿರೋಧವಿದೆ. ಅದಕ್ಕೆ 'ಇಮ್ಮಡಿ ಪುಲಿಕೇಶಿ ವಿಶ್ವವಿದ್ಯಾಲಯ' ಎಂದು ನಾಮಕರಣ ಮಾಡುವಂತೆ ಈ‌ ಮೂಲಕ ನಾವು ಒತ್ತಾಯಿಸುತ್ತಿದ್ದೇವೆ ಎಂದು ಸಮಾಜಿಕ ಜಾಲತಾಣದಲ್ಲಿ ಪ್ರವೀಣ್ ಕುಮಾರ್ ಮಾವಿನ ಕಾಡು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Karnataka Budget 2025: ರಾಜ್ಯಕ್ಕೆ 500 ಹೊಸ ಪಬ್ಲಿಕ್ ಶಾಲೆ; ಅತಿಥಿ ಶಿಕ್ಷಕರಿಗೆ 2 ಸಾವಿರ, ಬಿಸಿಯೂಟ ತಯಾರಕರಿಗೆ 1000 ಹೆಚ್ಚಳ

ಇವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ನೆಟ್ಟಿಗರೊಬ್ಬರು ಮನಮೋಹನ್ ಸಿಂಗ್ ಅವರ ಹೆಸರಿನ ಬದಲಾಗಿ ಬೆಂಗಳೂರು ವಿಶ್ವವವಿದ್ಯಾಲಯ ಎಂದೇ ಉಳಿದುಕೊಂಡರೂ ಉತ್ತಮ... ಇವುಗಳು ಹೀಗೇ ಬಿಟ್ಟರೆ ಘಂಡಿ ಕುಟುಂಬದ ಕೈಗೊಂಬೆಯಿಂದ ಹಿಡಿದು ನಾಯಿಮರಿಯ ಹೆಸರನ್ನೂ ಎಲ್ಲದಕ್ಕೂ ನಾಮಕರಣ ಮಾಡಿಬಿಡುತ್ತಾರೆ. ಪುಣ್ಯಕ್ಕೆ ಟಿಪ್ಪು, ಔರಂಗಜೇಬ, ಅಕ್ಬರ...ಇವರುಗಳ ಹೆಸರು ಇಡಲು ಪ್ರಸ್ತಾವನೆ ಮಾಡಿಲ್ಲ' ಎಂದು ಟೀಕೆ ಮಾಡಿದ್ದಾರೆ.

ಮತ್ತೊಬ್ಬರು, ಜಗಜ್ಯೋತಿ ಬಸವೇಶ್ವರ ವಿಶ್ವವಿದ್ಯಾಲಯ ಎಂದು ಮಾಡಿ. ನಮ್ಮ ಸಹ ಮತ ಇದೆ ಎಂದಿದ್ದಾರೆ. ಇನ್ನೊಬ್ಬರು ಬಾಲಗಂಗಾಧರನಾಥ ಸ್ವಾಮಿ ವಿಶ್ವವಿದ್ಯಾಲಯ ಎಂದಾದರೂ ನಾಮಕರಣ ಮಾಡಿ ಎಂದು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ