
ಬೆಂಗಳೂರು (ಜ.24): ನಾನು ರಾಮಭಕ್ತ ಅಲ್ಲ, ಬುದ್ಧ, ಬಸವ ತತ್ವ, ಸಂವಿಧಾನದ ಭಕ್ತ, ಮುಖ್ಯಮಂತ್ರಿಗಳು ಆಯೋಧ್ಯೆಗೆ ಆಹ್ವಾನಿಸಿದರೆ ಹೋಗುತ್ತೇನೆ, ಆದರೆ ಭಕ್ತನಾಗಿ ಅಲ್ಲ, ಅಲ್ಲಿಯ ಸಂಸ್ಕೃತಿ, ಪದ್ಧತಿ ತಿಳಿದುಕೊಳ್ಳಲು ಹೋಗುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನಾಗೇ ಯಾವುದೇ ದೇವಸ್ಥಾನಕ್ಕೂ ಹೋಗುವುದಿಲ್ಲ, ನೀವು (ಮಾಧ್ಯಮದವರು) ಕರೆದರೆ ಖಂಡಿತವಾಗಿ ಆಯೋಧ್ಯೆಗೆ ಬರುತ್ತೇನೆ. ಯಾರೂ ಹೇಳದೇ ಇದ್ದರೂ ಹೃಷಿಕೇಶ, ಬನಾರಸ್, ಅಜ್ಮೀರ್ ದರ್ಗಾ ಮುಂತಾದ ಕಡೆ ಹೋಗಿದ್ದೇನೆ, ಯಾರೇ ಕರೆದರೂ ದೇವಸ್ಥಾನಗಳಿಗೂ ಹೋಗುತ್ತೇನೆ, ಅವರ ತತ್ವ, ಪದ್ಧತಿ, ಸಂಸ್ಕೃತಿ ತಿಳಿದುಕೊಳ್ಳಬೇಕೆಂಬ ಕಾರಣಕ್ಕೆ ತೆರಳುತ್ತೇನೆ’ ಎಂದರು. ಶ್ರೀರಾಮನ ಬಗ್ಗೆ ಎಷ್ಟೊಂದು ಮಾತನಾಡುವ ಬಿಜೆಪಿಗರಿಗೆ ಹನುಮಾನ್ ಚಾಲೀಸಾ, ರಾಮಾಯಣ, ಮಹಾಭಾರತ ಗೊತ್ತಿದೆಯೇ ಎಂದು ಇದೇ ವೇಳೆ ಪ್ರಶ್ನಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ ಸಿಎಂ ಸಿದ್ದರಾಮಯ್ಯ: ನೂರಾರು ನೌಕರರ ವಜಾ!
ಪ್ರಶ್ನಿಸಿದ ಅವರು, ಅಪೂರ್ಣವಾಗಿರುವ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಬಾರದು ಎಂದು ಶಂಕರಾಚಾರ್ಯ ಪೀಠದ ಸ್ವಾಮಿಗಳು ಕೇಳಿದ್ದಾರೆ. ಸಾಧು-ಸಂತರು ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಹೇಳಿದ್ದಾರೆ. ಈ ಮಾತನ್ನು ಕಾಂಗ್ರೆಸ್ನವರು ಕೇಳಿಲ್ಲ. ಹಾಗಾಗಿ ಬಿಜೆಪಿಯವರು ಈ ಬಗ್ಗೆ ಪ್ರಶ್ನಿಸಿದವರಿಗೆ ಉತ್ತರ ಕೊಡಬೇಕೇ ಹೊರತು ನಮಗೆ ಅಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ