Bengaluru crime: ಹಾರ್ನ್‌ ಮಾಡಿದ್ದಕ್ಕೆ ಪುಂಡಾಟಿಕೆ, ಮೂವರು ಕಿಡಿಗೇಡಿಗಳ ಬಂಧನ

Published : Jul 15, 2023, 07:05 AM IST
Bengaluru crime: ಹಾರ್ನ್‌ ಮಾಡಿದ್ದಕ್ಕೆ ಪುಂಡಾಟಿಕೆ,  ಮೂವರು ಕಿಡಿಗೇಡಿಗಳ ಬಂಧನ

ಸಾರಾಂಶ

 ರಸ್ತೆಯಲ್ಲಿ ಹೋಗುವಾಗ ದಾರಿ ಬಿಡುವಂತೆ ಹಾರನ್‌ ಮಾಡಿದ್ದಕ್ಕೆ ಸಾಫ್‌್ಟವೇರ್‌ ಉದ್ಯೋಗಿಯೊಬ್ಬರನ್ನು ಅಡ್ಡಗಟ್ಟಿಪುಂಡಾಟಿಕೆ ನಡೆಸಿದ್ದ ಮೂವರು ಕಿಡಿಗೇಡಿಗಳನ್ನು ವರ್ತೂರು ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬೆಂಗಳೂರು (ಜು.15) :  ರಸ್ತೆಯಲ್ಲಿ ಹೋಗುವಾಗ ದಾರಿ ಬಿಡುವಂತೆ ಹಾರನ್‌ ಮಾಡಿದ್ದಕ್ಕೆ ಸಾಫ್‌್ಟವೇರ್‌ ಉದ್ಯೋಗಿಯೊಬ್ಬರನ್ನು ಅಡ್ಡಗಟ್ಟಿಪುಂಡಾಟಿಕೆ ನಡೆಸಿದ್ದ ಮೂವರು ಕಿಡಿಗೇಡಿಗಳನ್ನು ವರ್ತೂರು ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಸರ್ಜಾಪುರ ರಸ್ತೆಯ ದೊಮ್ಮಸಂದ್ರದ ರವೀಂದ್ರ, ಕೇಶವ ಹಾಗೂ ಗಣೇಶ ಬಂಧಿತರಾಗಿದ್ದು, ಗುಂಜೂರು ಸಮೀಪದ ಡಿಎಸ್‌ಆರ್‌ ರಿವೇರಾ ರಸ್ತೆಯಲ್ಲಿ ಸಾಫ್‌್ಟವೇರ್‌ ಉದ್ಯೋಗಿ ಅಶೋಕ್‌ ಅವರನ್ನು ಗುರುವಾರ ಮಧ್ಯಾಹ್ನ ಅಡ್ಡಗಟ್ಟಿಆರೋಪಿಗಳು ದುಂಡಾವರ್ತನೆ ತೋರಿಸಿದ್ದರು. ಈ ಬಗ್ಗೆ ಟ್ವೀಟರ್‌ನಲ್ಲಿ ಪೊಲೀಸರಿಗೆ ಟೆಕ್ಕಿ ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ವರ್ತೂರು ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ಗೃಹಜ್ಯೋತಿ ಎಫೆಕ್ಟ್: ಕರೆಂಟ್ ಬಿಲ್ ಕೊಡಲು ಹೋದ ಬೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ

ಸರ್ಜಾಪುರ ರಸ್ತೆಯ ಸಾಫ್‌್ಟವೇರ್‌ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಅಶೋಕ್‌ ಅವರು, ತಮ್ಮ ಕುಟುಂಬದ ಜತೆ ವರ್ತೂರಿನಲ್ಲಿ ನೆಲೆಸಿದ್ದಾರೆ. ಎಂದಿನಂತೆ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಡಿಎಸ್‌ಆರ್‌ ರಿವೇರಾ ಹೊಸ ರಸ್ತೆಯಲ್ಲಿ ಅವರು ಮನೆಗೆ ಮರಳುತ್ತಿದ್ದರು. ಆಗ ಗುಂಜೂರು ಸಮೀಪ ಕಾರಿನ ಮುಂದೆ ಸ್ಕೂಟರ್‌ಗಳಲ್ಲಿ ಬಂದ ಆರೋಪಿಗಳಿಗೆ ದಾರಿ ಬಿಡುವಂತೆ ಅಶೋಕ್‌ ಹಾರನ್‌ ಮಾಡಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಆರೋಪಿಗಳು, ಕಾರಿನ ಮುಂದೆ ಸ್ಕೂಟರ್‌ ನಿಲ್ಲಿಸಿ ಗಲಾಟೆ ಶುರು ಮಾಡಿದ್ದಾರೆ. ಕೂಡಲೇ ಕಾರನ್ನು ರಿವರ್ಸ್‌ ತೆಗೆದುಕೊಂಡು ಅಶೋಕ್‌ ಪರಾರಿಯಾಗಿದ್ದರು. ಈ ಘಟನೆ ವಿಡಿಯೋವು ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿ ಆಧರಿಸಿ ಪೊಲೀಸರಿಗೆ ಅಶೋಕ್‌ ದೂರು ಸಲ್ಲಿಸಿದರು. ಈ ಬಂಧಿತ ಆರೋಪಿಗಳು ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು: ನಗರದಲ್ಲಿ 1000ಕ್ಕೂ ಅಧಿಕ ಅಪಾಯಕಾರಿ ಮರ ಪತ್ತೆ!
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ