ವಿಸಿ ನಾಲೆ ಬಳಿ ಮತ್ತೊಂದು ಅಪಘಾತ: ಮುಗ್ಧ ಜೀವ ಬಲಿ

Published : Dec 20, 2018, 08:56 AM IST
ವಿಸಿ ನಾಲೆ ಬಳಿ ಮತ್ತೊಂದು ಅಪಘಾತ: ಮುಗ್ಧ ಜೀವ ಬಲಿ

ಸಾರಾಂಶ

33 ಮಂದಿಯನ್ನು ಬಲಿ ಪಡೆದ ಮಂಡ್ಯ ಜಿಲ್ಲೆಯ ವಿ.ಸಿ.ನಾಲೆ, ಮತ್ತೊಂದು ಬಲಿ ಪಡೆದಿದೆ. 

ಪಾಂಡವಪುರ[ಡಿ.20]: ಎರಡು ದುರ್ಘಟನೆಯಲ್ಲಿ 33 ಮಂದಿಯನ್ನು ಬಲಿ ಪಡೆದ ಮಂಡ್ಯ ಜಿಲ್ಲೆಯ ವಿ.ಸಿ.ನಾಲೆ, ಮತ್ತೊಂದು ಬಲಿ ಪಡೆದಿದೆ. ಭತ್ತ ತುಂಬಿಕೊಂಡು ಹೋಗುತ್ತಿದ್ದ ಎತ್ತಿನಗಾಡಿ ಪಲ್ಟಿಯಾಗಿ ಎತ್ತು ಮೃತಪಟ್ಟಘಟನೆ ಪಾಂಡವಪುರ ತಾಲೂಕಿನ ಜಯಂತಿ ನಗರದ ಸಮೀಪ ನಡೆದಿದೆ.

ತಾಲೂಕಿನ ಡಾಮಡಹಳ್ಳಿ ಗ್ರಾಮದ ಮಹದೇವು, ಕಾಂತರಾಜು ಅವರು ಜಯಂತಿ ನಗರದ ಶ್ರೀ ಶಂಭುಲಿಂಗೇಶ್ವರ ವಿದ್ಯಾಸಂಸ್ಥೆಯ ಹಿಂಭಾಗದಲ್ಲಿರುವ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಭತ್ತವನ್ನು ಕಟಾವು ಮಾಡಿಕೊಂಡು ಎತ್ತಿನಗಾಡಿಯಲ್ಲಿ ತುಂಬಿಕೊಂಡು ವಿಸಿ ನಾಲೆಯ ಏರಿಯ ಮೇಲೆ ತೆರಳುತ್ತಿದ್ದರು. ಏರಿಯ ಮೇಲೆ ಕೋಳಿ ಕಸವನ್ನು ಚೀಲದಲ್ಲಿ ಇಟ್ಟಿದ್ದನ್ನು ಕಂಡು ಬೆದರಿದ ಎತ್ತುಗಳು ಗಾಡಿಯ ಸಮೇತ ವಿ.ಸಿ. ನಾಲೆಗೆ ಉರುಳಿಬಿದ್ದಿವೆ.

ಮಹದೇವು, ಕಾಂತರಾಜು, ಸಹ ವಿಸಿ ನಾಲೆಗೆ ಉರುಳಿದ್ದು, ಈಜಿಕೊಂಡು ಹೊರಬಂದಿದ್ದಾರೆ. ಎತ್ತು ನಾಲೆಯಲ್ಲಿ ಮುಳುಗಿ ಮೃತಪಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅನುದಾನಿತ ಶಾಲೆಯಲ್ಲಿ 9ನೇ ಕ್ಲಾಸ್ ಹುಡ್ಗೀರ ಎಣ್ಣೆ ಪಾರ್ಟಿ; ವೈರಲ್ ವಿಡಿಯೋ ಆಧರಿಸಿ 6 ವಿದ್ಯಾರ್ಥಿನಿಯರು ಅಮಾನತು!
ವಿಶ್ವ ಕನ್ನಡ ಹಬ್ಬ' ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಆರೋಪ: ಮಹಿಳೆಯರಿಗೆ ಪದವಿ ಆಮಿಷ; ಸರ್ಕಾರದ ₹40 ಲಕ್ಷ ದುರ್ಬಳಕೆ!