ಬೆಂಗಳೂರಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಅವಘಡ: ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಸ್ಪಷ್ಟನೆ

Published : Apr 27, 2022, 03:48 PM IST
ಬೆಂಗಳೂರಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಅವಘಡ: ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಸ್ಪಷ್ಟನೆ

ಸಾರಾಂಶ

ರನ್‌ವೇ ನಲ್ಲಿ ಪಲ್ಟಿಯಾದ ಅಗ್ನಿ ಏರೋಸ್ಪೇಸ್ 185 ಏರ್ ಕ್ರಾಫ್ಟ್ ಗಾಯಗೊಂಡ ಮಹಿಳಾ ಪೈಲೆಟ್ ಆಸ್ಪತ್ರೆ ದಾಖಲು ಘಟನೆ ಬಗ್ಗೆ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯಿಂದ ಸ್ಪಷ್ಟನೆ ಅಗ್ನಿ ಏರೋಸ್ಫೋರ್ಟ್ಸ್‌ ಅಡ್ವೆಂಚರ್ಸ್‌ ಅಕಾಡೆಮಿಯ ಏರ್‌ಕ್ರಾಫ್ಟ್‌ ಅವಘಡ

ಬೆಂಗಳೂರು(ಏ.27): ಬೆಂಗಳೂರಿನ ಜಕ್ಕೂರ್ ಏರೋಡ್ರಮ್‌ನಲ್ಲಿ ಅಗ್ನಿ ಏರೋಸ್ಪೇಸ್ 185 ಏರ್ ಕ್ರಾಫ್ಟ್ ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿ ಪಲ್ಟಿಯಾದ ಬಗ್ಗೆ ಸುವರ್ಣ ನ್ಯೂಸ್‌ ಡಾಟ್‌ ಕಾಮ್‌ ಹತ್ತು ದಿನಗಳ ಹಿಂದೆ ವರದಿ ಬಿತ್ತರಿಸಿದ್ದು, ಸದ್ಯ ಈ ವಿಚಾರವಾಗಿ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಮತ್ತಷ್ಟು ಸ್ಪಷ್ಟನೆ ನೀಡಿದೆ.

ಹೌದು ವರದಿಯಲ್ಲಿ ತರಬೇತಿಯಲ್ಲಿದ್ದ ಅಗ್ನಿ ಏರೋಸ್ಪೇಸ್ 185 ಏರ್ ಕ್ರಾಫ್ಟ್ ವಿಮಾನ ಜಕ್ಕೂರ್ ಏರೋಡ್ರಮ್‌ನಲ್ಲಿ ಲ್ಯಾಂಡಿಂಗ್ ಮಾಡಿತ್ತು. ಆದರೆ ನಿಯಂತ್ರಣ ತಪ್ಪಿದ ಕಾರಣ ವಿಮಾನ ರನ್‌ವೇನಲ್ಲಿ ಪಲ್ಟಿಯಾಗಿದೆ. ಮಹಿಳಾ ಪೈಲೆಟ್ ಚೆರ್ಲಿ ಆ್ಯನ್ ಸ್ಟಿಮ್ಸ್‌ಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. 

ಸದ್ಯ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಾರ ವೈಮಾನಿಕ ಶಾಲೆ ಸರಿ ಸೆಸ್ಕಾ C-185, VT-ETU ವಿಮಾನವು ಜಕ್ಕೂರು ಏರೋಡ್ರಂ ಆವರಣದಲ್ಲಿರುವ ಖಾಸಗಿ ಸಂಸ್ಥೆಯಾದ ಅಗ್ನಿ ಏರೋಸ್ಫೋರ್ಟ್ಸ್‌ ಅಡ್ವೆಂಚರ್ಸ್‌ ಅಕಾಡೆಮಿಯದ್ದಾಗಿದೆ. ಇದು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯದ್ದಲ್ಲ ಎಂದಿದೆ.

ಅಲ್ಲದೇ ಅಗ್ನಿ ಏರೋಸ್ಫೋರ್ಟ್ಸ್‌ ಅಡ್ವೆಂಚರ್ಸ್‌ ಅಕಾಡೆಮಿ ಸಂಸ್ಥೆಯು ಸಂಪೂರ್ಣವಾಗಿ ಖಾಸಗಿ ಸಂಸ್ಥೆಯಾಗಿದ್ದು, ಜಕ್ಕೂರು ಏರೋಡ್ರಂ ಆವರಣದಲ್ಲಿ ವಾರ್ಷಿಕ ಗುತ್ತಿಗೆ/ಬಾಡಿಗೆ ಆಧಾರದಲ್ಲಿ ಹ್ಯಾಂಗರ್ ಹೊಂದಿದ್ದು, ವಿಮಾನ ಹಾರಾಟ ಚಟುವಟಿಕೆಗಳನ್ನು ನಡೆಸುತ್ತಾರೆ. ಸದರಿ ಸಂಸ್ಥೆಯ ಹಾರಾಟ ಚಟುವಟಿಕೆಗಳು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ತರಬೇಟಿ ಚಟುವಟಿಕೆಗಳಿಗೆ ಯಾವುದೇ ಸಂಬಂಧ ಹೊಂದಿರುವುದಿಲ್ಲ ಎಂದಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್