ಹಿಂದೂ ಮುಸ್ಲಿಂ ಭಾಯಿ ಭಾಯಿ ಅನ್ನಾವರನ್ನ ಚಪ್ಪಲಿಲೇ ಬಡಿಬೇಕು; ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಾಗ್ದಾಳಿ

Published : Nov 12, 2024, 10:00 PM IST
ಹಿಂದೂ ಮುಸ್ಲಿಂ ಭಾಯಿ ಭಾಯಿ ಅನ್ನಾವರನ್ನ ಚಪ್ಪಲಿಲೇ ಬಡಿಬೇಕು; ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಾಗ್ದಾಳಿ

ಸಾರಾಂಶ

ನಮ್ಮ ಭೂಮಿಯನ್ನು ನಾವು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಹಿಂದೂಗಳೆಲ್ಲರೂ ಒಂದಾದ್ರೆ ಅವರು ಹೆದರುತ್ತಾರೆ ಇಲ್ಲ ಅಂದ್ರೆ ಇಲ್ಲ. ವಕ್ಫ್ ಬೋರ್ಡ್‌ಗಾಗಿ ನಮ್ಮ ನಾಯಿಗಳನ್ನೇ ನಮಗೆ ಛೂ ಬಿಟ್ಟಿದ್ದಾರೆ. ವಕ್ಫ್ ಮಂಡಳಿಯವರು ಯಾರೂ ಮಾತನಾಡುತ್ತಿಲ್ಲ, ನಮ್ಮವೇ ನಾಯಿಗೋಳ ಬೊಗಳಾತಾವ್‌‌.ಎಂದು ಮಹಾರಾಷ್ಟ್ರ ಕನ್ಹೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಾಗ್ದಾಳಿ ನಡೆಸಿದರು.

ಬೆಳಗಾವಿ (ನ.12): ಮೊದಲಿಗೆ ಈ ವಕ್ಫ್ ವಿವಾದ ಕಾಂಗ್ರೆಸ್ ಬಿಜೆಪಿ ಮಧ್ಯೆ ಏನೋ ನಡೀತಿದೆ ಅಂದುಕೊಂಡಿದ್ರು ಆದ್ರೆ ಯಾವಾಗ ಕರ್ನಾಟಕದ ಸಚಿವರು ಜಿಲ್ಲೆ ಜಿಲ್ಲೆಗೆ ಭೇಟಿ ನೀಡಲು ಶುರು ಮಾಡಿದ್ರೋ ಆಗ ವಕ್ಫ್ ಜನರ ಜಮೀನು ಕಬಳಿಸಲು ಪ್ರಯತ್ನ ನಡೆದಿರೋದು ಗೊತ್ತಾಯ್ತು ವಕ್ಫ್ ಕಾಯಿದೆ ಮೊದಲು ತಂದವರು ಬ್ರಿಟಿಷರು ಅದನ್ನ ಸ್ಟ್ರಾಂಗ್ ಮಾಡಿದ್ದು ಕಾಂಗ್ರೆಸ್ ಎಂದು ಮಹಾರಾಷ್ಟ್ರ ಕನ್ಹೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಾಗ್ದಾಳಿ ನಡೆಸಿದರು.

ಬೆಳಗಾವಿಯ ಛತ್ರಪತಿ ಸಂಭಾಜಿ ಮಹಾರಾಜ ಮೈದಾನದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ನಡೆದ ವಕ್ಫ್ ಬೋರ್ಡ್ ಹಟಾವೋ, ದೇಶ ಬಚಾವೋ ಸಮಾವೇಶದಲ್ಲಿ ಮಾತನಾಡಿದ ಸ್ವಾಮೀಜಿ, ಬಂಗಾಳ ವಿಭಜನೆ ಆಯ್ತು, ದೇಶ ಒಡೆಯಲು ಬರ್ತೇತಿಲ್ಲೋ ಅಂತಾ ಸಣ್ಣ ಟ್ರಯಲ್ ಮಾಡಿ ವಕ್ಫ್ ಕಾಯ್ದೆ ತಂದ್ರು. ಮುಂದೆ ತಿದ್ದುಪಡಿ ಮಾಡ್ತಾ ನರಸಿಂಹರಾವ್ ಸರ್ಕಾರದಲ್ಲಿ ಸ್ಟ್ರಾಂಗ್ ಆಯಿತು. ಮಾಜಿ ಪ್ರಧಾನಿ ಮನಮೋಹನ ಸಿಂಗ್ ವಕ್ಫ ಬೋರ್ಡ್ ಗೆ ಕಳಶ ಇಟ್ರು. ವಕ್ಫ್ ಬೋರ್ಡ್ ಸದಸ್ಯರು ಯಾರಿರಬೇಕು ಅಂತಾ ಅವರು ಹೇಳಿದ್ದು ಒಬ್ಬ ಎಂಪಿ, ಎಂಎಲ್‌ಎ ಇದ್ರೂ ಅದು ಮುಸಲ್ಮಾನ ಇರಬೇಕು. ಸಿಟಿ ಸರ್ವೇಯರ್ ಇದ್ರು, ಮ್ಯಾನೇಜರ್ ಇದ್ರು, ವಕೀಲ ಇದ್ರು ಮುಸಲ್ಮಾನನೇ ಆಗಿರಬೇಕು. ಏಳು ಜನ ಎಲ್ಲಿ ನಿಂತು ಕೈ ತೋರಿಸುತ್ತಾರೆ, ಅದು ವಕ್ಫ್ ಜಾಗೆ ಅಂತಾ ತೋರಿಸಿದ್ರೆ ನೋಟಿಸ್ ಜಾರಿ ಮಾಡ್ತಾರೆ. ವಕ್ಫ್ ಬೋರ್ಡ್ ಯಾವುದೇ ದಾಖಲೆ ಕೊಡುವ ಅವಶ್ಯಕತೆ ಇಲ್ಲ, ಆದ್ರೆ ನೋಟಿಸ್ ಪಡೆದವರು ಎಲ್ಲ ದಾಖಲೆ ಕೊಡಬೇಕು! ತಕರಾರು ಮಾಡವ್ರು, ದಾಖಲೆ ಮಾಡವ್ರು ನಿರ್ಣಯ ಮಾಡವ್ರು ಅವರೇ. ಕುರಾನದಲ್ಲಿ ಎಲ್ಲಿಯೂ ವಕ್ಫ್ ಉಲ್ಲೇಖವಿಲ್ಲ, ವಕ್ಫ್ ಆಸ್ತಿ ಬಗ್ಗೆ ಉಲ್ಲೇಖವಿಲ್ಲ, ವಕ್ಫ್ ಶಬ್ದದ ಅರ್ಥ ದಾನ. ಇಸ್ಲಾಂನಲ್ಲಿ ಮೂರ್ತಿ ಪೂಜೆಗೆ ಅವಕಾಶ ಇಲ್ಲ ಈ ದರ್ಗಾದಲ್ಲಿರುವ ಮಜ್ಹಾರ್‌ಗಳೆಲ್ಲ ಇರಬಾರದು. ಈ ಪ್ರಕಾರ ಆದ್ರೆ ಎಲ್ಲಾ ದರ್ಗಾಗಳನ್ನು ಕೆಡವಿ ಹಾಕಬೇಕಲ್ವೇ? ಎಂದು ಪ್ರಶ್ನಿಸಿದರು.

ರೈತರನ್ನ ಎದುರು ಹಾಕಿಕೊಂಡ್ರೆ ನಿಮ್ಮ ಸರ್ಕಾರ ಉಳಿಯಲ್ಲ : ಸಿಎಂ ಸಿದ್ದರಾಮಯ್ಯಗೆ ವಿ ಕೋಡಿಹಳ್ಳಿ ಮತ್ತೆ ವಾರ್ನ್

ಹಿಂದೂ-ಮುಸ್ಲಿಂ ಭಾಯಿ ಭಾಯಿ ಅನ್ನವರನ್ನ ಚಪ್ಪಲಿಲೇ ಹೊಡಿಬೇಕು:

ಮೊದಲು ವಕ್ಫ್ ಬೋರ್ಡ್ ಬಳಿ 54 ಸಾವಿರ ಎಕರೆ ಜಮೀನು ಇತ್ತು. ಇಂದು 38 ಲಕ್ಷ ಎಕರೆ ಜಮೀನು, 9.4ಲಕ್ಷ ಪ್ರಾಪರ್ಟಿ ವಕ್ಫ್ ಬೋರ್ಡ್ ಹೆಸರಿನಲ್ಲಿದೆ. ಹಮ್ ದೋ ಹಮಾರೇ ಏಕ್ ಅನ್ನೋದು ನಮಗೆ ಅವರಿಗೆ ಹಮ್ ಪಾಂಚ್ ಹಮಾರಿ ಪಚ್ಚಿಸ್. ಹಂದಿ ತರಹ 25 25 ಜನರನ್ನು ತಗೆದು ಹೊರ ಬಿಡುತ್ತಾರೆ! ಎರಡು ಧರ್ಮದವರಿಗೆ ಎರಡು ದೇಶ, ಹಿಂದೂಗಳಿಗೆ ಹಿಂದೂಸ್ತಾನ್ ಮುಸ್ಲಿಂರಿಗೆ ಪಾಕಿಸ್ತಾನ ಅಂತಾ ಒಡಿಸಿದ್ರು. ಹಿಂದೂಗಳು ಎಚ್ಚರಗೊಳ್ಳದಿದ್ರೆ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಆದ ಸ್ಥಿತಿ ನಮಗೆ ಆಗುತ್ತೆ. ಹಿಂದೂ ಮುಸ್ಲಿಂ ಭಾಯಿ ಭಾಯಿ ಅನ್ನಾವರನ್ನ ಚಪ್ಪಲಿಲೇ ಬಡಿಬೇಕು. ಒಬ್ಬರು ಆಕಳಿಗೆ ರೊಟ್ಟಿ ಕೊಟ್ಟು ಊಟ ಮಾಡ್ತಾರೆ, ಮತ್ತೊಂದೆಡೆ  ಆಕಳು ತುಕಡಿ ಜೊತೆ ರೊಟ್ಟಿ ತಗೊಂಡು ತಿಂತಾರೆ, ಒಮ್ಮೆ ಮದುವೆ ಆದ್ರೆ ಏಳೇಳು ಜನ್ಮ ಜೊತೆಗೂ ಇರ್ತೀವಿ ಅಂತಾ ನಾವು ಹೇಳ್ತೀವಿ. ನಿಖಾ ಅಂದ್ರೆ ಕಾಂಟ್ರಾಕ್ಟ್ ಮ್ಯಾರೇಜ್ ಎಂದ ಸ್ವಾಮೀಜಿ.

ಅಲ್ಲಾನೇ ಹರಾಮಿ ಆಸ್ತಿ ತಗೋಬಾರ್ದು ಅಂದಿದ್ದಾರೆ; ಆದ್ರೆ ಜಮೀರ್ ಇಸ್ಲಾಂ ಧರ್ಮ ಕೆಡಿಸ್ತಾನೆ; ಅಯೂಫ್!

ನಮ್ಮ ಭೂಮಿಯನ್ನು ನಾವು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಹಿಂದೂಗಳೆಲ್ಲರೂ ಒಂದಾದ್ರೆ ಅವರು ಹೆದರುತ್ತಾರೆ ಇಲ್ಲ ಅಂದ್ರೆ ಇಲ್ಲ. ವಕ್ಫ್ ಬೋರ್ಡ್‌ಗಾಗಿ ನಮ್ಮ ನಾಯಿಗಳನ್ನೇ ನಮಗೆ ಛೂ ಬಿಟ್ಟಿದ್ದಾರೆ. ವಕ್ಫ್ ಮಂಡಳಿಯವರು ಯಾರೂ ಮಾತನಾಡುತ್ತಿಲ್ಲ, ನಮ್ಮವೇ ನಾಯಿಗೋಳ ಬೊಗಳಾತಾವ್‌‌. ನಮ್ಮ ಮಠಗಳ ಆಸ್ತಿ ಇರೋದು ಹಿಂದೂಗಳ ಆಸ್ತಿ. ನಮಗೂ ಸನಾತನ ಬೋರ್ಡ್ ಮಾಡಿ,ಸನಾತನ ಕಾನೂನು ಮಾಡಿ. ನಮ್ಮ ಜಮೀನನ್ನು ನಾವೂ ಶೋಧಿಸುವ ಕಾರ್ಯ ಮಾಡ್ತೀವಿ ಎಂದು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತೀವ್ರ ವಾಗ್ದಾಳಿ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌