ಗುಡ್ಡೇ​ಕೊಪ್ಪ ಬಳಿ ವಿಜಯನಗರ ಅರಸರ ಕಾಲದ ದಾನ ಶಾಸನ ಪತ್ತೆ!

Published : Jul 29, 2023, 06:06 AM IST
ಗುಡ್ಡೇ​ಕೊಪ್ಪ ಬಳಿ ವಿಜಯನಗರ ಅರಸರ ಕಾಲದ ದಾನ ಶಾಸನ ಪತ್ತೆ!

ಸಾರಾಂಶ

ಮಣ್ಣಿನೊಳಗೆ ಹೂತು ಹೋಗಿದ್ದ, ಚೌಡಿ ಕಲ್ಲೆಂದು ಗ್ರಾಮಸ್ಥರ ಭಯಭಕ್ತಿಗೆ ಕಾರಣವಾಗಿದ್ದ ಸುಮಾರು 500 ವರ್ಷಗಳ ಹಿಂದಿನ ವಿಜಯನಗರ ಅರಸರ ಕಾಲದ ದಾನ ಶಾಸನವೊಂದು ತೀರ್ಥ​ಹ​ಳ್ಳಿಯ ಗುಡ್ಡೇಕೊಪ್ಪ ಬಳಿ ದೊರೆತಿದೆ. ಸಂಶೋಧಕ ಎಲ್‌.ಎಸ್‌.ರಾಘವೇಂದ್ರ ಮತ್ತು ಪತ್ರಕರ್ತ ಜಿ.ಆರ್‌.ಸತ್ಯನಾರಾಯಣ ಈ ಕಲ್ಲನ್ನು ಸಂಶೋಧನೆ ಮಾಡಿದ್ದಾರೆ.

ತೀರ್ಥಹಳ್ಳಿ (ಜು.29).: ಮಣ್ಣಿನೊಳಗೆ ಹೂತು ಹೋಗಿದ್ದ, ಚೌಡಿ ಕಲ್ಲೆಂದು ಗ್ರಾಮಸ್ಥರ ಭಯಭಕ್ತಿಗೆ ಕಾರಣವಾಗಿದ್ದ ಸುಮಾರು 500 ವರ್ಷಗಳ ಹಿಂದಿನ ವಿಜಯನಗರ ಅರಸರ ಕಾಲದ ದಾನ ಶಾಸನವೊಂದು ತೀರ್ಥ​ಹ​ಳ್ಳಿಯ ಗುಡ್ಡೇಕೊಪ್ಪ ಬಳಿ ದೊರೆತಿದೆ. ಸಂಶೋಧಕ ಎಲ್‌.ಎಸ್‌.ರಾಘವೇಂದ್ರ ಮತ್ತು ಪತ್ರಕರ್ತ ಜಿ.ಆರ್‌.ಸತ್ಯನಾರಾಯಣ ಈ ಕಲ್ಲನ್ನು ಸಂಶೋಧನೆ ಮಾಡಿದ್ದಾರೆ.

ಗುಡ್ಡೇಕೊಪ್ಪದ ಕೃಷಿಕ ಹೊಸತೋಟ ವಿಶ್ವನಾಥ ಅವರ ತೋಟದ ಸಮೀಪದಲ್ಲಿ ಅರ್ಧ ಮಣ್ಣಿನೊಳಗೆ ಹೂತು ಹೋಗಿದ್ದ ದಾನ ಶಾಸನದ ಈ ಕಲ್ಲು ಮತ್ತೆ ಬೆಳಕಿಗೆ ಬರಲು ವಿಶ್ವನಾಥ ಎಂಬವರ ಆಸಕ್ತಿ ಕಾರಣವಾಗಿದ್ದು, ಆಸಕ್ತರ ಗಮನ ಸೆಳೆದಿದೆ. ಈ ಕಲ್ಲಿನಲ್ಲಿ ಅಲ್ಲಲ್ಲಿ ಅಕ್ಷರ ಅಳಿಸಿಹೋಗಿರುವ ಸಾಲುಗಳು, ಯಾವ ರಾಜರ ಕಾಲದಲ್ಲಿ ಎನ್ನುವುದು ತಿಳಿಯುವುದಿಲ್ಲ.

ಎಪಿಗ್ರಾಫಿಯಾ ಕರ್ನಾಟಕ ಗ್ರಂಥದ ಸಂಪುಟ 13ರ ಪುಟ 416ರಲ್ಲಿ ದಾಖಲಾಗಿರುವಂತೆ ಒಂದಿಷ್ಟುವಿವರಗಳಿವೆ. ಸುಮಾರು 14-15ನೇ ಶತಮಾನ ಎಂದು ಅಂದಾಜಿಸಿದೆ. ಸುಮಾರು 47 ಸಾಲುಗಳಿರುವ ದಾನ ಶಾಸನದ ವಿವರಗಳನ್ನು ಪತ್ತೆ​ಹ​ಚ್ಚ​ಲಾ​ಗಿ​ದೆ. ಭೂಮಿ ದಾನ ಕೊಟ್ಟಿರುವ ಬಗ್ಗೆ ಅಪೂರ್ವ ದಾನ ಶಿಲಾ ಶಾಸನ ಇದಾಗಿದೆ ಎಂದು ತಿಳಿ​ಸ​ಲಾ​ಗಿದೆ.

 

ತೆಲಂಗಾಣದಲ್ಲಿ 1000 ವರ್ಷ ಹಳೆಯ ಕನ್ನಡ ಶಿಲ್ಪ ಪತ್ತೆ: ಜೈನ ತೀರ್ಥಂಕರರ ಶಿಲ್ಪ, ಶಾಸನ ಹೊಂದಿರುವ ಕಂಬ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!