ಕರ್ನಾಟಕದಲ್ಲಿ ಶನಿವಾರವೂ ಕೊರೋನಾ ಸೋಂಕಿತರಿಗಿಂತ ಗುಣಮುಖರಾವರ ಸಂಖ್ಯೆಯೇ ಜಾಸ್ತಿ

Published : Sep 12, 2020, 08:41 PM IST
ಕರ್ನಾಟಕದಲ್ಲಿ ಶನಿವಾರವೂ ಕೊರೋನಾ ಸೋಂಕಿತರಿಗಿಂತ ಗುಣಮುಖರಾವರ ಸಂಖ್ಯೆಯೇ ಜಾಸ್ತಿ

ಸಾರಾಂಶ

ಕರ್ನಾಟಕದಲ್ಲಿ ಶನಿವಾರವೂ ಕೊರೋನಾ ಸೋಂಕಿತರಿಗಿಂತ ಗುಣಮುಖರಾವರ ಸಂಖ್ಯೆಯೇ ಜಾಸ್ತಿಯಾಗಿರುವುದು ನೆಮ್ಮದಿಯ ಸಂಗತಿ. ಹಾಗಾದ್ರೆ ಕಳೆದ 24 ಗಂಟೆಗಳಲ್ಲಿ ಎಷ್ಟು ಹೊಸ ಕೇಸ್? ಎಷ್ಟು ಗುಣಮುಖ? ಎಲ್ಲಾ ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರು, (ಸೆ.12): ರಾಜ್ಯದಲ್ಲಿ ಇಂದು (ಶನಿವಾರ) 9,140 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಹಾಗೇ 9,557 ಮಂದಿ ಆಸ್ಪತ್ರೆಯಿಂದ ಡಿಸ್​​ಚಾರ್ಜ್​ ಆಗಿದ್ದು, 94 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ರಾಜ್ಯದ ಕೊರೋನಾ ಸೋಂಕಿತರ ಸಂಖ್ಯೆ 4,49,551ಕ್ಕೆ ಏರಿಕೆಯಾಗಿದ್ದು, ಗುಣಮುಖರಾದವರ​ ಸಂಖ್ಯೆ 3,44,556. ಇನ್ನು ಮೃತಪಟ್ಟವರ ಸಂಖ್ಯೆ 7161ಕ್ಕೇರಿದೆ.

ಸದ್ಯ  97,815 ಸಕ್ರಿಯ ಪ್ರಕರಣಗಳು ಇದ್ದು, ಈ ಪೈಕಿ 795 ಸೋಂಕಿತರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಕೊರೋನಾ ಕೇಸ್
ಬೆಂಗಳೂರು ನಗರ (3552) , ಮೈಸೂರು (636), ಬಳ್ಳಾರಿ (366), ದಾವಣಗೆರೆ (267), ಹಾಸನ (324), ಶಿವಮೊಗ್ಗ (155), ಬೆಳಗಾವಿ (201), ದಕ್ಷಿಣ ಕನ್ನಡ (401), ರಾಯಚೂರು (131), ಧಾರವಾಡ (239), ಕಲಬುರಗಿ (222), ಚಿಕ್ಕಮಗಳೂರು (159), ಉಡುಪಿ (169), ಮಂಡ್ಯ (193), ಚಿತ್ರದುರ್ಗ (227), ಉತ್ತರ ಕನ್ನಡ (130), ಕೊಪ್ಪಳ (183), ತುಮಕೂರು (304), ವಿಜಯಪುರ (58), ಬಾಗಲಕೋಟೆ (175), ಹಾವೇರಿ (213), ಗದಗ (49), ಬೆಂಗಳೂರು ಗ್ರಾಮಾಂತರ (211), ಚಿಕ್ಕಬಳ್ಳಾಪುರ (101), ಕೋಲಾರ (53), ರಾಮನಗರ (81), ಯಾದಗಿರಿ (151), ಬೀದರ್ (101), ಚಾಮರಾಜನಗರ (60) ಮತ್ತು ಕೊಡಗು (27)
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ