
ಬೆಂಗಳೂರು(ಅ.03): ರಾಜ್ಯದಲ್ಲಿ ಕರೋನಾರ್ಭಟ ಮುಂದುವರೆದಿದ್ದು, ಶುಕ್ರವಾರ 8,793 ಮಂದಿಗೆ ಸೋಂಕು ಧೃಢಪಟ್ಟಿದೆ. 125 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದೇ ವೇಳೆ 7,094 ಮಂದಿ ಸೋಂಕು ಮುಕ್ತರಾಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 1,11,986 ತಲುಪಿದೆ. ಇವರಲ್ಲಿ 827 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವರೆಗೆ ಒಟ್ಟು 6.20 ಲಕ್ಷ ಮಂದಿ ಕೊರೋನಾದಿಂದ ಬಾಧಿತರಾಗಿದ್ದಾರೆ. ಇದೇ ವೇಳೆ ಕೊರೋನಾದಿಂದ ಅಸು ನೀಗಿದವರ ಸಂಖ್ಯೆ 9 ಸಾವಿರದ ಗಡಿ ದಾಟಿದೆ. ರಾಜ್ಯದಲ್ಲಿ ಈವರೆಗೆ 9,119 ಮಂದಿ ಕೊರೋನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಸೆಪ್ಟೆಂಬರ್ 20ರಂದು ಸಾವಿನ ಸಂಖ್ಯೆ 8 ಸಾವಿರದ ಗಡಿ ದಾಟಿತ್ತು. ಇದರಿಂದ 12 ದಿನದಲ್ಲಿ ಮತ್ತೆ 1000 ಜನ ಸಾವನ್ನಪ್ಪಿದಂತಾಗಿದೆ. ಇನ್ನು, ಈವರೆಗೆ 4,99,504 ಮಂದಿ ಕೊರೋನಾ ಜಯಿಸಿದ್ದಾರೆ. ಶನಿವಾರ ಈ ಸಂಖ್ಯೆ 5 ಲಕ್ಷ ದಾಟುವುದು ಖಚಿತ. ಶುಕ್ರವಾರ 92,059 ಕೊರೋನಾ ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿನ ಒಟ್ಟು ಕೊರೋನಾ ಪರೀಕ್ಷೆ 50 ಲಕ್ಷದ ಗಡಿ ದಾಟಿದೆ.
ಬೆಂಗಳೂರಲ್ಲೇ ಅಧಿಕ:
ಬೆಂಗಳೂರು ನಗರ ಜಿಲ್ಲೆಯಲ್ಲಿ 47 ಮಂದಿ ಪ್ರಾಣ ಕಳೆದುಕೊಂಡಿದ್ದು ಉಳಿದಂತೆ ಮೈಸೂರು 18 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ 4,259 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ. ಉಳಿದಂತೆ ತುಮಕೂರು 405, ದಕ್ಷಿಣ ಕನ್ನಡ 322, ಹಾಸನ 315, ಶಿವಮೊಗ್ಗದಲ್ಲಿ 307 ಪ್ರಕರಣಗಳು ಪತ್ತೆಯಾಗಿವೆ.
ಕರ್ನಾಟಕದಲ್ಲಿ ಕೊರೋನಾ: ಇಲ್ಲಿದೆ ಶುಕ್ರವಾರದ ಅಂಕಿ-ಸಂಖ್ಯೆ
ದಕ್ಷಿಣ ಕನ್ನಡ 12, ತುಮಕೂರು 8, ಬೆಳಗಾವಿ 7, ಧಾರವಾಡ, ಹಾಸನ ತಲಾ 6, ಶಿವಮೊಗ್ಗ, ಕೊಪ್ಪಳ ತಲಾ 3, ಬಾಗಲಕೋಟೆ, ಬಳ್ಳಾರಿ, ಬೀದರ್, ಹಾವೇರಿ, ಮಂಡ್ಯ ತಲಾ 2, ವಿಜಯಪುರ, ಉಡುಪಿ, ಕಲಬುರಗಿ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ.
ಬೆಂಗಳೂರು ಗ್ರಾಮಾಂತರ 298, ಬಳ್ಳಾರಿ 262, ಮಂಡ್ಯ 257, ದಾವಣಗೆರೆ 225, ಉಡುಪಿ 212, ರಾಯಚೂರು 193, ಚಿತ್ರದುರ್ಗ 169, ಮೈಸೂರು 158, ರಾಮನಗರ 150, ವಿಜಯಪುರ 146, ಯಾದಗಿರಿ 145, ಚಿಕ್ಕಮಗಳೂರು 123, ಧಾರವಾಡ ಮತ್ತು ಕಲಬುರಗಿ 98, ಚಿಕ್ಕಬಳ್ಳಾಪುರ 91, ಕೊಪ್ಪಳ 89, ಉತ್ತರ ಕನ್ನಡ ಮತ್ತು ಗದಗ 80, ಬಾಗಲಕೋಟೆ 68, ಹಾವೇರಿ 61, ಬೀದರ್ 43, ಬೆಳಗಾವಿ, ಚಾಮರಾಜನಗರ 40, ಕೊಡಗು 30, ಕೋಲಾರ ಜಿಲ್ಲೆಯಲ್ಲಿ 29 ಹೊಸ ಪ್ರಕರಣ ಪತ್ತೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ