ವಿಜಯ್‌ ಹಜಾರೆ ಟ್ರೋಫಿ: ಕರ್ನಾ​ಟ​ಕಕ್ಕೆ ಮೊದಲ ಸೋಲು

Published : Oct 02, 2019, 09:40 AM IST
ವಿಜಯ್‌ ಹಜಾರೆ ಟ್ರೋಫಿ: ಕರ್ನಾ​ಟ​ಕಕ್ಕೆ ಮೊದಲ ಸೋಲು

ಸಾರಾಂಶ

ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕಕ್ಕೆ ಮೊದಲ ಸೋಲು ಎದುರಾಗಿದೆ. ಅಂಬಟಿ ರಾಯುಡು ನೇತೃತ್ವದ ಹೈದರಾಬಾದ್ ತಂಡದ ವಿರುದ್ಧ ಕರ್ನಾಟಕ 21 ರನ್‌ಗಳ ಸೋಲು ಅನುಭವಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ಬೆಂಗ​ಳೂ​ರು[ಅ.02]: 2019ರ ವಿಜಯ್‌ ಹಜಾರೆ ರಾಷ್ಟ್ರೀಯ ಏಕ​ದಿನ ಟೂರ್ನಿ​ಯಲ್ಲಿ ಕರ್ನಾ​ಟಕ ತಂಡ ಮೊದಲ ಸೋಲಿನ ರುಚಿ ಕಂಡಿತು. ಮಂಗಳವಾರ ಇಲ್ಲಿನ ಆಲೂರು ಮೈದಾನದಲ್ಲಿ ನಡೆದ ‘ಎ’ ಗುಂಪಿನ ಪಂದ್ಯ​ದಲ್ಲಿ ಆತಿ​ಥೇಯ ಕರ್ನಾಟಕ, ಹೈದ​ರಾಬಾದ್‌ ವಿರುದ್ಧ 21 ರನ್‌ ಸೋಲುಂಡಿತು. ಆಡಿರುವ 3 ಪಂದ್ಯಗಳಲ್ಲಿ ಕರ್ನಾಟಕ 2 ಗೆಲುವು 1 ಸೋಲಿನೊಂದಿಗೆ 8 ಅಂಕಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

4 ರನ್‌ಗೆ 2 ವಿಕೆಟ್‌ ಪತನ:

ಹೈದ್ರಾಬಾದ್‌ ನೀಡಿದ 199 ರನ್‌ಗಳ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿತು. ಕೇರಳ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರಾಹುಲ್‌, ಈ ಪಂದ್ಯದಲ್ಲಿ ಕೇವಲ 4 ರನ್‌ಗಳಿಗೆ ಔಟಾದರು. ಕರುಣ್‌ ನಾಯರ್‌ (0) ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದರು. ವೇಗಿ ಮೊಹಮದ್‌ ಸಿರಾಜ್‌ ಅವರ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಇಬ್ಬರು ಔಟಾಗಿದ್ದು ಮನೀಶ್‌ ಪಡೆಗೆ ದೊಡ್ಡ ಪೆಟ್ಟು ನೀಡಿತು. ಕೇವಲ 4 ರನ್‌ ಅಂತರದಲ್ಲಿ 2 ವಿಕೆಟ್‌ ಉರುಳಿದವು.

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಸುಲಭ ಜಯ

3ನೇ ವಿಕೆ​ಟ್‌ಗೆ ದೇವ​ದತ್‌್ತ ಹಾಗೂ ನಾಯಕ ಮನೀಶ್‌ ಪಾಂಡೆ 85 ರನ್‌ ಜೊತೆ​ಯಾಟ ಆಡಿ​ದರು. ಆದರೆ 48 ರನ್‌ ಮಾಡಿದ್ದ ಮನೀಶ್‌ ವಿಕೆಟ್‌ ಸಂದೀಪ್‌ ಕಿತ್ತರು. ದೇವ​ದ​ತ್‌್ತ 60 ರನ್‌ ಗಳಿಸಿದ್ದು, ಸಂದೀ​ಪ್‌ಗೆ ವಿಕೆಟ್‌ ಒಪ್ಪಿ​ಸಿ​ದರು. ಭಾರೀ ಕುಸಿತ ಕಂಡ ಕರ್ನಾ​ಟಕ 45.2 ಓವ​ರಲ್ಲೇ 177 ರನ್‌​ಗ​ಳಿಗೆ ಆಲೌ​ಟಾ​ಯಿ​ತು.

ವಿಜಯ್‌ ಹಜಾರೆ ಟ್ರೋಫಿ: ಜಾರ್ಖಂಡ್‌ ವಿರುದ್ಧ ಕರ್ನಾ​ಟಕ ಜಯ​ಭೇ​ರಿ!

ರಾಯುಡು ಆಸರೆ:

ಇದಕ್ಕೂ ಮುನ್ನ ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಹೈದ​ರಾ​ಬಾದ್‌ ನಿಗ​ದಿತ 50 ಓವ​ರಲ್ಲಿ 9 ವಿಕೆಟ್‌ ಕಳೆ​ದು​ಕೊಂಡು 198 ರನ್‌ ಪೇರಿ​ಸಿ​ತು. ಆಯ್ಕೆ​ಗಾ​ರರ ಗಮನ ಸೆಳೆ​ಯಲು ಯತ್ನಿ​ಸು​ತ್ತಿ​ರುವ ಅಂಬಾಟಿ ರಾಯುಡು ಅಜೇಯ 87 ರನ್‌ ಹೊಡೆ​ದರು. ಪ್ರಸಿದ್ಧ ಕೃಷ್ಣ ಎಸೆ​ತ​ವೊಂದು ಬಲ ಮೊಣ​ಕೈಗೆ ಬಡಿ​ದಿ​ದ್ದು, ಗಾಯ​ಗೊಂಡ ರಾಯುಡು ಕ್ರೀಸ್‌​ನಿಂದ ಹೊರ​ನ​ಡೆ​ದ​ರು. ಕರ್ನಾ​ಟಕ ಪರ ಬೌಲಿಂಗ್‌​ನಲ್ಲಿ ಅಭಿ​ಮನ್ಯು ಮಿಥುನ್‌, ಪ್ರಸಿದ್ಧ ಹಾಗೂ ಮೋರೆ ತಲಾ 2 ವಿಕೆಟ್‌ ಕಿತ್ತ​ರು.

ಸ್ಕೋರ್‌:

ಹೈದ​ರಾ​ಬಾದ್‌ 198/9 (50)

ಕರ್ನಾ​ಟಕ 177 (45.2)
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India’s top searches of 2025: ಭಾರತೀಯರು ಸದಾ ಯೋಚಿಸೋದು ಏನನ್ನು? ಗೂಗಲ್​ನಿಂದ A to Z ಬಹಿರಂಗ!
ಕಿವೀಸ್ ಸರಣಿ: ಶ್ರೇಯಸ್ ಅಯ್ಯರ್ ಕಮ್‌ಬ್ಯಾಕ್ ಮತ್ತಷ್ಟು ತಡ; ಈ ಆಟಗಾರನಿಗೆ ಚಾನ್ಸ್?