PKL 2019: ಆರಂಭದಲ್ಲಿ ಅಬ್ಬರಿಸಿ ಅಂತ್ಯದಲ್ಲಿ ಪಂದ್ಯ ಕೈಚೆಲ್ಲಿದ ಬುಲ್ಸ್!

Published : Sep 12, 2019, 10:05 PM IST
PKL 2019: ಆರಂಭದಲ್ಲಿ ಅಬ್ಬರಿಸಿ ಅಂತ್ಯದಲ್ಲಿ ಪಂದ್ಯ ಕೈಚೆಲ್ಲಿದ ಬುಲ್ಸ್!

ಸಾರಾಂಶ

ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಮತ್ತೆ ಸೋಲಿಗೆ ಜಾರಿದೆ. ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಬೆಂಗಾಲ್ ವಾರಿಯರ್ಸ್ ವಿರುದ್ಧ ನಿರಾಸೆ ಅನುಭವಿಸಿದೆ.

ಕೋಲ್ಕತಾ(ಸೆ.12): ಆರಂಭದಿಂದ ಅಂತಿಮ ಹಂತದ ವರೆಗೆ ಮುನ್ನಡೆಯಲ್ಲಿದ್ದ ಬೆಂಗಳೂರು ಬುಲ್ಸ್ ಅಂತಿಮ 2 ನಿಮಿಷದಲ್ಲಿ ಪಂದ್ಯ ಕೈಚೆಲ್ಲಿದೆ. ಬೆಂಗಾಲ್ ವಾರಿಯರ್ಸ್ ವಿರುದ್ಧದ ನಡೆದ ರೋಟಕ ಹೋರಾಟದಲ್ಲಿ ಬೆಂಗಳೂರು ಬುಲ್ಸ್ ಸೋಲಿಗೆ ಶರಣಾಗಿದೆ. 40-42 ಅಂಕಗಳ ಮೂಲಕ ಬೆಂಗಳೂರು ಬುಲ್ಸ್ ಮುಗ್ಗರಿಸಿದೆ. 

ಇದನ್ನೂ ಓದಿ: ಸುವರ್ಣನ್ಯೂಸ್.ಕಾಂ ಜೊತೆ ಬೆಂಗಳೂರು ಬುಲ್ಸ್ ನಾಯಕನ Exclusive ಮಾತು!

ಮನೀಂದರ್ ಸಿಂಗ್ ಬೋನಸ್ ಪಾಯಿಂಟ್‌ನೊಂದಿಗೆ ಪಂದ್ಯ ಆರಂಭಿಸಿದ ಬೆಂಗಾಲ್ ವಾರಿಯರ್ಸ್‌ಗೆ ಬುಲ್ಸ್ ನಾಯಕ ರೋಹಿತ್ ಕುಮಾರ್ ತಿರುಗೇಟು ನೀಡಿದರು. ಮೊದಲ ರೈಡ್‌ನಲ್ಲೇ ಅಂಕ ತಂದು 1-1 ಅಂಕಗಳ ಮೂಲ ಸಮಬಲ ಮಾಡಿದರು. ರೋಹಿತ್‌ಗೆ ಪವನ್ ಶೆರಾವತ್ ಸಾಥ್ ನೀಡಿದರು. ಆದರೆ 3ನೇ ನಿಮಿಷದಲ್ಲಿ ಬೆಂಗಾಲ್ 3-3 ಅಂಕಗಳಿಂದ ಸಮಬಲಗೊಂಡಿತು. 7 ನಿಮಿಷದ ವರೆಗೆ ಮುನ್ನಡೆಯಲ್ಲಿದ್ದ ಬೆಂಗಾಲ್ ತಂಡಕ್ಕೆ ಬುಲ್ಸ್ ಶಾಕ್ ನೀಡಿತು.

ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ! 

ಮುನ್ನಡೆ ಕಾಯ್ದುಕೊಂಡಿದ್ದ ಬೆಂಗಳೂರು ಬುಲ್ಸ್ ಮೊದಲಾರ್ಧದ ಅಂತ್ಯದಲ್ಲಿ 15-16 ಅಂಕ ಗಳಿಸಿತು. ಈ ಮೂಲಕ ಒಂದು ಅಂಕಗಳ ಹಿನ್ನಡೆ ಕಂಡಿತು. ಸೆಕೆಂಡ್ ಹಾಫ್ ಆರಂಭದಲ್ಲಿ ಪವನ್ ಶೆರಾವತ್ ಸೂಪರ್ ರೈಡ್ ಹಾಗೂ ಬೋನಸ್ ಪಾಯಿಂಟ್ ಮೂಲಕ 18-16 ಅಂಕ ಪಡೆಯಿತು. ಶೆರಾವತ್ ಘರ್ಜನೆಗೆ ಬೆಂಗಾಲ್ ಹಿಡಿತ ಸಡಿಲಗೊಂಡಿತು. 6ನೇ ನಿಮಿಷಕ್ಕೆ 30-21 ಅಂಕಗಳ ಅಂತರ ಕಾಯ್ದುಕೊಂಡಿತು. 

ಭಾರಿ ಮುನ್ನಡೆಯಲ್ಲಿದ್ದ ಬೆಂಗಳೂರು ಬುಲ್ಸ್‌ ಅಂತಿಮ ಹಂತದಲ್ಲಿ ಹೆಚ್ಚಿನ ಅಂಕ ಬಿಟ್ಟುಕೊಟ್ಟಿತು. 17ನೇ ನಿಮಿಷದಲ್ಲಿ ಬೆಂಗಾಲ್ 35-35 ಅಂಕಗಳಿಂದ ಸಮಬಲ ಮಾಡಿಕೊಂಡಿತು. ಅಷ್ಟರಲ್ಲಿ ಪಂದ್ಯ ರೋಚಕ ತಿರುವು ಪಡೆದುಕೊಂಡಿತು. ಚಾಣಾಕ್ಷ ಆಟಕ್ಕೆ ಮುಂದಾದ ಬೆಂಗಾಲ್ 42-40 ಅಂಕಗಳಲ್ಲಿ ಬುಲ್ಸ್ ತಂಡವನ್ನು ಮಣಿಸಿತು. 

ಪಾಟ್ನಾ ಪೈರೇಟ್ಸ್‌ಗೆ ಗೆಲವು:
ಬೆಂಗಳೂರು ಬುಲ್ಸ್ ಪಂದ್ಯಕ್ಕೂ ಮೊದಲು ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಪಾಟ್ನಾ ಪೈರೇಟ್ಸ್ ಮುಖಾಮುಖಿಯಾಗಿತ್ತು. ಬಲಿಷ್ಠ ತಂಡಗಳ ಹೋರಾಟ  ಅಭಿಮಾನಿಗಳಿಗೆ ಮನರಂಜನೆ ನೀಡಿತು. ಮಹತ್ವದ ಪಂದ್ಯದಲ್ಲಿ ಪಾಟ್ನಾ 36-33 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಪಾಟ್ನಾ 9ನೇ ಸ್ಥಾನಕ್ಕೆ ಲಗ್ಗೆ ಇಟ್ಟರೆ, ಜೈಪುರ 6ನೇ ಸ್ಥಾನದಲ್ಲಿ ಮುಂದುವರಿದಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!