ರಾಂಚಿಯಲ್ಲಿ ಪ್ರತ್ಯಕ್ಷರಾದ ಧೋನಿ; MLA ಜೊತೆ ಬಿಲಿಯರ್ಡ್ಸ್ ಮೋಡಿ!

By Web DeskFirst Published Sep 29, 2019, 11:17 AM IST
Highlights

ಟೀಂ ಇಂಡಿಯಾ ಕ್ರಿಕೆಟಿಗ  ಎಂ.ಎಸ್.ಧೋನಿ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಬಹರಗೋರಾ MLA ಹಾಗೂ ಜಾರ್ಖಂಡ್ ಪಿಚ್ ಕ್ಯೂರೇಟರ್ ಜೊತೆ ಧೋನಿ ಕಾಣಿಸಿಕೊಂಡಿದ್ದಾರೆ. 
 

ರಾಂಚಿ(ಸೆ.29): ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದಿದ್ದ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಇದೀಗ ಪ್ರತ್ಯಕ್ಷರಾಗಿದ್ದಾರೆ. ಬಹರಗೋರಾ MLA ಕುನಾಲ್ ಸಾರಂಗಿ ಜೊತೆ ಬಿಲಿಯರ್ಡ್ಸ್ ಆಡೋ ಮೂಲಕ  ಧೋನಿ ಮತ್ತೆ ಕ್ರೀಡೆಯತ್ತ ಮರಳಿದ್ದಾರೆ.

ಇದನ್ನೂ ಓದಿ: ಜನಮೆಚ್ಚಿದ ನಾಯಕರ ಸಮೀಕ್ಷೆ; ನಂ.1 ಮೋದಿ, ನಂತ್ರ ಧೋನಿ!

ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯಲ್ಲಿ ಅಭ್ಯಾಸ ಆರಂಭಿಸಿರುವ ಧೋನಿ, ಒಳಾಂಗಣ ಕ್ರೀಡಾಂಗಣದಲ್ಲಿ ಸಾರಂಗಿ ಹಾಗೂ ಜಾರ್ಖಂಡ್ ಹಿರಿಯ ಪಿಚ್ ಪಿಚ್ ಕ್ಯೂರೇಟರ್ ಬಸು ದಾ ಜೊತೆ ಬಿಲಿಯರ್ಡ್ಸ್ ಆಡಿದ್ದಾರೆ. ಬಲಿಕ, ಬಸು ದಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

 

ख़राब मौसम के कारण कुछ कार्यक्रम रद्द और मिल हए फुर्सत के पल और वो भी मेरी सबसे मनपसंद जगह अपने स्टेडियम में और एक तस्वीर हम सबके सुपर हीरो - दा के साथ जो JSCA मैदान के क्यूरेटर हैं और मेरे क्षेत्र के गाँव के ही निवासी हैं। pic.twitter.com/6n9fGP2IVI

— Kunal Sarangi 🇮🇳 (@KunalSarangi)

ಇದನ್ನೂ ಓದಿ: ಧೋನಿ ಅಲಭ್ಯತೆಗೆ ಕಾರಣ ಬಹಿರಂಗ; ಆತಂಕದಲ್ಲಿ ಫ್ಯಾನ್ಸ್!

ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿತ್ತು. ಆದರೆ ಧೋನಿ ವಿಂಡೀಸ್ ಪ್ರವಾಸದಿಂದ ಹಿಂದೆ ಸರಿದು, ಭಾರತೀಯ ಸೇನೆ ಸೇರಿಕೊಂಡಿದ್ದರು. 15 ದಿನಗಳ ಕಾಲ ಭಾರತೀಯ ಸೇನೆ ಜೊತೆ ಕಾಶ್ಮೀರದ ಗಡಿಯಲ್ಲಿ ಗಸ್ತು ತಿರುಗಿದ್ದರು. ದೇಶ ಸೇವೆಯಿಂದ ವಾಪಾಸ್ಸಾದ ಧೋನಿ, ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದಲೂ ಹಿಂದೆ ಸರಿದಿದ್ದರು.

ಇದನ್ನೂ ಓದಿ: ಧೋನಿ ನಿವೃತ್ತಿ ಒತ್ತಡ; ಯುವರಾಜ್ ಸಿಂಗ್ ಪ್ರತಿಕ್ರಿಯೆಗೆ ಎಲ್ಲರೂ ಗಪ್‌ಚುಪ್!

ಸದ್ಯ ಧೋನಿ ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿದ್ದ,ನವೆಂಬರ್ ವರೆಗೆ ವಿಶ್ರಾಂತಿ ಪಡೆಯಲಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೂ ಅಲಭ್ಯರಾಗಲಿದ್ದಾರೆ ಅನ್ನೋ ಮಾತು ಕೇಳಿಬಂದಿದೆ.

click me!