
ಆಗ್ರ(ಆ.29): ಬದ್ಧವೈರಿ ಪಾಕಿಸ್ತಾನ ವಿರುದ್ದದ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ಯಾವ ಭಾರತೀಯನೂ ಮರೆತಿಲ್ಲ. ಶತ್ರು ಸೈನ್ಯನವನ್ನು ಹಿಮ್ಮೆಟ್ಟಿಸಿದ ಭಾರತೀಯ ವೀರ ಯೋಧರು ನಮ್ಮ ನೆಲವನ್ನು ಕಾಪಾಡಿದರು. ಇದೇ ಯುದ್ದದಲ್ಲಿ ಸೈನಿಕನಾಗಿ ಹೋರಾಡಿದ ನೇಮ್ ಸಿಂಗ್ ಜುರೆಲ್ 2008ರಲ್ಲಿ ಭಾರತೀಯ ಸೇನೆಯಿಂದ ನಿವೃತ್ತಿಯಾದರು. ಅಪ್ಪ ದೇಶ ಸೇವೆ ಬಳಿಕ ಇದೀಗ ಮಗ ದೇಶ ಸೇವೆಗೆ ಸಜ್ಜಾಗಿದ್ದಾರೆ. ಆದರೆ ಪುತ್ರ ಧ್ರುವ ಜುರೆಲ್ ಕ್ರಿಕೆಟ್ ಮೂಲಕ ದೇಶ ಸೇವೆಗೆ ಮಾಡುತ್ತಿದ್ದಾನೆ.
ಇದನ್ನೂ ಓದಿ: ಭಾರತ ಎ, ಅಂಡರ್-19 ಕೋಚ್ ಸ್ಥಾನಕ್ಕೆ ದ್ರಾವಿಡ್ ಗುಡ್ಬೈ; ಹೊಸಬರಿಗೆ ಮಣೆ!
ಧ್ರುವ ಜುರೆಲ್ ಭಾರತ ಅಂಡರ್ 19 ತಂಡದ ನಾಯಕ. ಕೊಲೊಂಬೊದಲ್ಲಿ ನಡೆಯಲಿರುವ ಯೂಥ್ ಅಂಡರ್ 19 ಏಷ್ಯಾಕಪ್ ಟೂರ್ನಿಯಲ್ಲಿ ಧ್ರುವ ಜುರೆಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ, ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ನಡುವಿನ ತ್ರಿಕೋನ ಸರಣಿ ಗೆಲುವಿನಲ್ಲಿ ಧ್ರುವ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಫೈನಲ್ ಪಂದ್ಯದಲ್ಲಿ 59 ರನ್ ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.
ಇದನ್ನೂ ಓದಿ: MS ಧೋನಿ ಭವಿಷ್ಯ ಇನ್ನೂ ಸಸ್ಪೆನ್ಸ್!
ಮಗ ಕ್ರಿಕೆಟ್ ಆಟಗಾರನಾಗುವುದು ನಿವೃತ್ತ ಸೈನಿಕ ನೇಮ್ ಸಿಂಗ್ ಜುರೆಲ್ಗೆ ಇಷ್ಟವಿರಲಿಲ್ಲ. ಸೈನ್ಯ ಸೇರಿಕೊಳ್ಳುವಂತೆ ಧ್ರುವಗೆ ಹಲವು ಬಾರಿ ಸೂಚಿಸಿದ್ದರು. ಇಷ್ಟೇ ಅಲ್ಲ ಕ್ರಿಕೆಟ್ನಲ್ಲಿ ಧ್ರುವ ಸಾಧನೆ ಮಾಡಬಲ್ಲ ಅನ್ನೋ ನಂಬಿಕೆ ತಂದೆಗೆ ಇರಲಿಲ್ಲ. ಆದರೆ ಸದ್ಯ ಧ್ರುವ ಪ್ರದರ್ಶನ ಗಮನಿಸಿರುವ ತಂದೆ ಹೆಚ್ಚು ಖುಷಿಯಲ್ಲಿದ್ದಾರೆ. ನಾನು ದೇಶ ಸೇವೆಗಾಗಿ ಸೈನ್ಯ ಸೇರಿಕೊಂಡೆ, ಮಗ ದೇಶಸೇವೆಗಾಗಿ ಕ್ರಿಕೆಟ್ ಆರಿಸಿಕೊಂಡಿದ್ದಾನೆ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.