
ಚೆನ್ನೈ(ಜ.07): ಮೂರೂ ಪ್ರಕಾರದ ಕ್ರಿಕೆಟ್'ನಲ್ಲಿ ಧೋನಿಯಂತೆ ಭಾರತ ತಂಡವನ್ನು ಯಶಸ್ಸಿನತ್ತ ಮುನ್ನಡೆಸುವುದು, ಈಗಷ್ಟೇ ಈ ಸವಾಲಿನ ಸಾರಥ್ಯ ವಹಿಸಿಕೊಂಡಿರುವ ವಿರಾಟ್ ಕೊಹ್ಲಿ ಸೇರಿದಂತೆ ಯಾರೊಬ್ಬರಿಗೂ ಸುಲಭಸಾಧ್ಯವಾದಂತ ಕೆಲಸವಲ್ಲ ಎಂದು ಭಾರತ ತಂಡದ ಸ್ಟಾರ್ ಸ್ಪಿನ್ನರ್ ಆರ್. ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
‘‘ಒಬ್ಬ ಅದ್ವಿತೀಯ ನಾಯಕನಾಗಿ ಧೋನಿ ಜಗತ್ಪ್ರಸಿದ್ಧಿ ಪಡೆದವರು. 2000ದ ವೇಳೆ ಸೌರವ್ ಗಂಗೂಲಿ ಕೂಡ ಇದೇರೀತಿ ಉತ್ಸಾಹಭರಿತರಾಗಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸಿದ್ದರು. ಆದರೆ, ಅವರನ್ನೂ ಹಿಂದಿಕ್ಕುವಷ್ಟು ಪ್ರಭಾವಶಾಲಿ ವೃತ್ತಿಬದುಕು ಧೋನಿ ಅವರದ್ದು. ಹೀಗಾಗಿ ವಿರಾಟ್ ಕೊಹ್ಲಿ ಮೇಲೆ ಈ ಹಿಂದಿಗಿಂತಲೂ ಹೆಚ್ಚಿನ ಜವಾಬ್ದಾರಿ ಹಾಗೂ ಸವಾಲು ಎದುರಾಗಿದೆ’’ ಎಂದು ತಮಿಳುನಾಡು ಮೂಲದ ಅಶ್ವಿನ್ ಹೇಳಿದ್ದಾರೆ.
ಧೋನಿ ಇನ್ನಷ್ಟು ದಿನ ಟೀಂ ಇಂಡಿಯಾದ ನಾಯಕನಾಗಿ ಮುಂದುವರಿಯಬೇಕಿತ್ತೇ ಎಂಬ ಪ್ರಶ್ನೆಗೆ ಇದು ಧೊನಿಯ ವೈಯುಕ್ತಿಕ ನಿರ್ಧಾರ. ಆ ಕುರಿತು ನಾನು ಪ್ರತಿಕ್ರಿಯಿಸುವುದರಿಂದೇನು ಬದಲಾಗುವುದಿಲ್ಲ ಎಂದು ಅಶ್ವಿನ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.