ಪಾಕಿಸ್ತಾನವನ್ನು ಬಗ್ಗು ಬಡಿತ ಭಾರತ :ಯಾದವ್, ಪಾಂಡ್ಯ ದಾಳಿಗೆ ಎದುರಾಳಿಗಳು ತತ್ತರ

Published : Jun 04, 2017, 11:54 PM ISTUpdated : Apr 11, 2018, 12:58 PM IST
ಪಾಕಿಸ್ತಾನವನ್ನು ಬಗ್ಗು ಬಡಿತ ಭಾರತ :ಯಾದವ್, ಪಾಂಡ್ಯ ದಾಳಿಗೆ ಎದುರಾಳಿಗಳು ತತ್ತರ

ಸಾರಾಂಶ

ಆರಂಭಿಕ ಆಟಗಾರ ಅಜರ್ ಅಲಿ(50: 65 ಎಸೆತ, 6 ಬೌಂಡರಿ) ಹಾಗೂ ಮಧ್ಯಮ ಕ್ರಮಾಂಕರ ಆಟಗಾರ ಮೊಹಮದ್ ಹಫೀಜ್(43 ಎಸೆತ,2 ಬೌಂಡರಿ) ಬಿಟ್ಟರೆ ಶೋಯಬ್ ಮಲಿಕ್ ಮತ್ತು ನಾಯಕ ಸರ್ಫ್ರಾಜ್ ಅಹ್ಮದ್ ಸೇರಿದಂತೆ ಯಾರೊಬ್ಬರು 29ರ ಗಡಿ ದಾಟಲಿಲ್ಲ. ಅಂತಿಮವಾಗಿ 9 ವಿಕೇಟ್ ನಷ್ಟಕ್ಕೆ 164 ರನ್'ಗಳಿಗೆ ಗಳಿಸಿದರು ಕೊನೆಯ ಕ್ರಮಾಂಕದ ಬ್ಯಾಟ್ಸ್'ಮೆನ್  ವಾಹಿಬ್ ರಿಯಾಜ್  ಗಾಯದಿಂದ ಆಟವಾಡದ ಕಾರಣ ಭಾರತಕ್ಕೆ ಗೆಲುವೆಂದು ಘೋಷಿಸಲಾಯಿತು.

ಬರ್ಮಿಂಗ್ಹ್ಯಾಮ್(ಜೂ.04): ಹರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಹಾಗೂ ಉಮೇಶ್ ಯಾದವ್ ದಾಳಿಗೆ ಪಾಕಿಸ್ತಾನ ತಂಡ 33.4 ಓವರ್'ಗಳಿಗೆ 164 ರನ್'ಗಳಿಗೆ ಸರ್ವ ಪತನ ಕಂಡಿತು. ಈ ಮೂಲಕ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯವನ್ನು ಡೆಕ್ವರ್ತ್ ಲೂಯಿಸ್ ಅನ್ವಯ 124 ಜಯಗಳಿಸಿದೆ.

ಬರ್ಮಿಂಗ್ಹ್ಯಾಮ್'ನ ಎಡ್ಜ್ಬಾಸ್ಟನ್'ನ ಕ್ರೀಡಾಂಗಣದಲ್ಲಿ ಐಸಿಸಿ ಚಾಂಪಿಯನಸ್ ಟ್ರೋಪಿಯ 4ನೇ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ 319 ರನ್'ಗುರಿಯನ್ನು ಬೆನ್ನಟ್ಟಿದ ಪಾಕ್ ತಂಡಕ್ಕೆ ಮಳೆ ಕಾಟ ನೀಡಿದ ಕಾರಣ ಡೆಕ್ವರ್ತ್ ಲೂಯಿಸ್ ನಿಯಮದನ್ವಯ 41 ಓವರ್'ಗಳಿಗೆ 289 ರನ್'ಗಳ ಗುರಿ ವಿಧಿಸಲಾಯಿತು.

ಆರಂಭಿಕ ಆಟಗಾರ ಅಜರ್ ಅಲಿ(50: 65 ಎಸೆತ, 6 ಬೌಂಡರಿ) ಹಾಗೂ ಮಧ್ಯಮ ಕ್ರಮಾಂಕರ ಆಟಗಾರ ಮೊಹಮದ್ ಹಫೀಜ್(43 ಎಸೆತ,2 ಬೌಂಡರಿ) ಬಿಟ್ಟರೆ ಶೋಯಬ್ ಮಲಿಕ್ ಮತ್ತು ನಾಯಕ ಸರ್ಫ್ರಾಜ್ ಅಹ್ಮದ್ ಸೇರಿದಂತೆ ಯಾರೊಬ್ಬರು 29ರ ಗಡಿ ದಾಟಲಿಲ್ಲ. ಅಂತಿಮವಾಗಿ 9 ವಿಕೇಟ್ ನಷ್ಟಕ್ಕೆ 164 ರನ್'ಗಳಿಗೆ ಗಳಿಸಿದರು ಕೊನೆಯ ಕ್ರಮಾಂಕದ ಬ್ಯಾಟ್ಸ್'ಮೆನ್  ವಾಹಿಬ್ ರಿಯಾಜ್  ಗಾಯದಿಂದ ಆಟವಾಡದ ಕಾರಣ ಭಾರತಕ್ಕೆ ಗೆಲುವೆಂದು ಘೋಷಿಸಲಾಯಿತು.

ಟೀಂ ಇಂಡಿಯಾ ಪರ ಉಮೇಶ್ ಯಾದವ್ 3/30, ಹರ್ದಿಕ್ ಪಾಂಡ್ಯ 2/43,ರವೀಂದ್ರ ಜಡೇಜಾ 2/43 ಹಾಗೂ ಭುವನೇಶ್ವರ್ ಕುಮಾರ್ 1/23 ವಿಕೇಟ್ ಪಡೆದು ಭಾರತದ ಗೆಲುವಿನಲ್ಲಿ ಕಾರಣ ಕರ್ತರಾದರು.

ರೋಹಿತ್, ಕೊಹ್ಲಿ, ಯುವಿ ಭರ್ಜರಿ ಆಟ       

ಇದಕ್ಕೂ ಮುನ್ನ ಟಾಸ್ ಸೋತ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ರಕ್ಷಣಾತ್ಮಕವಾಗಿ ಬ್ಯಾಟಿಂಗ್ ಪ್ರಾರಂಭಿಸಿದರು.  9.5 ಓವರ್'ನಲ್ಲಿ ಟೀಂ 52 ರನ್ ಗಳಿಸಿದ್ದಾಗ ಇರುವಾಗ ಮೊದಲ ಬಾರಿಗೆ ಮಳೆ ಬಂತು. ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದು ಮತ್ತೆ ಆಟ ಶುರುವಾಯಿತು.

24.3 ಓವರ್'ಗಳಿದ್ದಾಗ ಶಿಖರ್ ಧವನ್,  ಶದಾಬ್ ಖಾನ್ ಬೌಲಿಂಗ್'ನಲ್ಲಿ ಅಜರ್ ಅಲಿಗೆ ಕ್ಯಾಚಿತ್ತು ನಿರ್ಗಮಿಸಿದರು.65 ಎಸತಗಳಲ್ಲಿ ಸ್ಫೋಟಿಸಿದ ಇವರ 68 ರನ್'ಗಳಲ್ಲಿ 6 ಸಿಕ್ಸ್'ರ್ ಹಾಗೂ 1 ಬೌಂಡರಿಗಳಿದ್ದವು. ನಂತರ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಮೊದಮೊದಲು ನಿಧಾನಗತಿಯಲ್ಲಿ ಆಟವಾಡಿ, ಬ್ಯಾಟ್ ಬೀಸುತ್ತಿದ್ದ ರೋಹಿತ್ ಶರ್ಮಾಗೆ ನೆರವಾಗುತ್ತಿದ್ದರು.

91 ರನ್ ಗಳಿಸಿದ್ದಾಗ ಆಕಸ್ಮಿಕವಾಗಿ ರನ್ ಔಟ್ ರೋಹಿತ್ ಶರ್ಮಾ ರನ್ ಔಟ್ ಆದರು. 119 ಎಸತೆಗಳ ಇವರ ಖಾತೆಯಲ್ಲಿ 2 ಸಿಕ್ಸರ್ ಹಾಗೂ 7 ಬೌಂಡರಿಗಳಿದ್ದವು. ನಂತರ ಯುವರಾಜ್ ಸಿಂಗ್ ಬ್ಯಾಟಿಂಗ್ ಬಂದಾಗ ಪಂದ್ಯದ ಗತಿಯೇ ಬದಲಾಯಿತು. ಕೊಹ್ಲಿ ಮತ್ತು ಯುವರಾಜ್ ಮೂರನೇ ವಿಕೇಟ್ ನಷ್ಟಕ್ಕೆ 46.2 ಓವರ್'ಗಳಲ್ಲಿ 285 ರನ್ ಕಲೆ ಹಾಕಿದರು.  ಯುವರಾಜ್ ಸಿಂಗ್ ಔಟಾದಾಗ 49 ಎಸತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸ್'ರ್'ನೊಂದಿಗೆ 53 ರನ್ ಜಮೆಯಾಗಿತ್ತು.

ಕೊನೆಯ 10 ಎಸತಗಳಿದ್ದಾಗ ಕ್ರೀಸ್'ಗಿಳಿದ ಹರ್ದಿಕ್ ಪಾಂಡ್ಯ ಕೇವಲ 6 ಎಸತಗಳಲ್ಲಿ ಮೂರು ಹ್ಯಾಟ್ರಿಕ್ ಸಿಕ್ಸ್' ಸಿಡಿಸುವುದರೊಂದಿಗೆ 20 ರನ್ ಬಾರಿಸಿದರು. ಭರ್ಜರಿ ಆಟವಾಡಿ ಅಜೇಯರಾಗಿ ಉಳಿದ ನಾಯಕ ವಿರಾಟ್ ಕೊಹ್ಲಿ ಕೂಡ 68 ಎಸತಗಳಲ್ಲಿ 6 ಬೌಂಡರಿ 3 ಸ್ಫೋಟಕ ಸಿಕ್ಸ್'ರ್ ಬಾರಿಸಿದ್ದರು. ಅಂತಿಮವಾಗಿ ಭಾರತ 48 ಓವರ್'ಗಳಲ್ಲಿ 3 ವಿಕೇಟ್ ನಷ್ಟಕ್ಕೆ 319 ರನ್'ಗಳ ಬೃಹತ್ ರನ್ ಗಳಿಸಿತು. ಬ್ಯಾಟಿಂಗ್ ಮಾಡಿದ ಐವರು ಬ್ಯಾಟ್ಸ್'ಮೆನ್'ಗಳಲ್ಲಿ ನಾಲ್ವರು ಅರ್ಧ ಶತಕ ದಾಖಲಿಸಿದ್ದು ಕೂಡ ದಾಖಲೆಯೆ. 32 ಎಸತಗಳಲ್ಲಿ 53 ರನ್'ಗಳಿಸಿದ ಯುವರಾಜ್ ಸಿಂಗ್ ಪಂದ್ಯ ಶ್ರೇಷ್ಟರಾದರು

.

ಸ್ಕೋರ್

ಭಾರತ 48 ಓವರ್'ಗಳಲ್ಲಿ 3 ವಿಕೇಟ್ ನಷ್ಟಕ್ಕೆ 319

(ರೋಹಿತ್: 91, ಧವನ್:68, ಕೊಹ್ಲಿ:81, ಯುವರಾಜ್:53, ಪಾಂಡ್ಯ:20) 

ಪಾಕಿಸ್ತಾನ 33.4 ಓವರ್'ಗಳಲ್ಲಿ 9 ವಿಕೇಟ್ ನಷ್ಟಕ್ಕೆ 164(10ನೇ ಕ್ರಮಾಂಕದ ಆಟಗಾರ ಗಾಯಗೊಂಡು ನಿವೃತ್ತಿ)

ಭಾರತಕ್ಕೆ ಡೆಕ್ವರ್ತ್ ಲೂಯಿಸ್ ನಿಯಮದನ್ವಯ 124 ರನ್'ಗಳ ಗೆಲುವು

ಪಂದ್ಯ ಶ್ರೇಷ್ಠ : ಯುವ'ರಾಜ್ ಸಿಂಗ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!
20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!