ಬ್ಯಾಟಿಂಗ್’ನಲ್ಲಿ ಫೇಲ್, ಪ್ರಾಮಾಣಿಕತೆಯಲ್ಲಿ ಪಾಸ್: ಇದು ಕನ್ನಡಿಗ ಖದರ್

Published : Jan 05, 2019, 08:13 PM IST
ಬ್ಯಾಟಿಂಗ್’ನಲ್ಲಿ ಫೇಲ್, ಪ್ರಾಮಾಣಿಕತೆಯಲ್ಲಿ ಪಾಸ್: ಇದು ಕನ್ನಡಿಗ ಖದರ್

ಸಾರಾಂಶ

ರವೀಂದ್ರ ಜಡೇಜಾ ಬೌಲಿಂಗ್’ನಲ್ಲಿ ಆಸಿಸ್ ಆರಂಭಿಕ ಬ್ಯಾಟ್ಸ್’ಮನ್ ಮಾರ್ಕಸ್ ಹ್ಯಾರಿಸ್ ಬೀಸಿ ಹೊಡೆಯುವ ಯತ್ನ ಮಾಡಿದರು. ಈ ವೇಳೆ ಮಿಡ್ ಆನ್’ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ರಾಹುಲ್ ಕ್ಯಾಚ್ ಹಿಡಿಯುವ ಯತ್ನ ನಡೆಸಿದರು. ಮೇಲ್ನೋಟಕ್ಕೆ ಎಲ್ಲರೂ ರಾಹುಲ್ ಕ್ಯಾಚ್ ಹಿಡಿದರು ಎಂದೇ ಭಾವಿಸಿದರು.

ಬೆಂಗಳೂರು[ಜ.05]: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್’ನಲ್ಲಿ ಪದೇ ಪದೇ ನಿರಾಸೆ ಅನುಭವಿಸುತ್ತಿರುವ ಕನ್ನಡಿಗ ಕೆ.ಎಲ್ ರಾಹುಲ್ ಸಿಡ್ನಿ ಟೆಸ್ಟ್’ನ ಮೂರನೇ ದಿನ ಕ್ರೀಡಾಸ್ಫೂರ್ತಿ ಮೆರೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೇಗಿತ್ತು..! ಹೇಗಾಯ್ತು..? ಆಸಿಸ್ ಕ್ರಿಕೆಟ್ ಕಾಲೆಳೆದ ಅಭಿಮಾನಿಗಳು

ರವೀಂದ್ರ ಜಡೇಜಾ ಬೌಲಿಂಗ್’ನಲ್ಲಿ ಆಸಿಸ್ ಆರಂಭಿಕ ಬ್ಯಾಟ್ಸ್’ಮನ್ ಮಾರ್ಕಸ್ ಹ್ಯಾರಿಸ್ ಬೀಸಿ ಹೊಡೆಯುವ ಯತ್ನ ಮಾಡಿದರು. ಈ ವೇಳೆ ಮಿಡ್ ಆನ್’ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ರಾಹುಲ್ ಕ್ಯಾಚ್ ಹಿಡಿಯುವ ಯತ್ನ ನಡೆಸಿದರು. ಮೇಲ್ನೋಟಕ್ಕೆ ಎಲ್ಲರೂ ರಾಹುಲ್ ಕ್ಯಾಚ್ ಹಿಡಿದರು ಎಂದೇ ಭಾವಿಸಿದರು. ಆದರೆ ಕೆ.ಎಲ್ ರಾಹುಲ್ ಸ್ವತಃ ಕ್ಯಾಚ್ ನೆಲಕ್ಕೆ ತಾಗಿದೆ ಎಂದು ಪ್ರಾಮಾಣಿಕವಾಗಿ ಹೇಳುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದರು. ರಾಹುಲ್ ಅವರ ಈ ನಡೆ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಯಾನ್ ಗೋಲ್ಡ್ ಅವರ ಮೆಚ್ಚುಗೆಗೂ ಪಾತ್ರವಾಯಿತು.

ಸಿಡ್ನಿ ಟೆಸ್ಟ್: ಸೋಲಿನ ಸುಳಿಗೆ ಸಿಲುಕಿದ ಆಸ್ಟ್ರೇಲಿಯಾಗೆ ಮಳೆ ಆಸರೆ!

ಹೀಗಿತ್ತು ನೋಡಿ ಆ ಕ್ಷಣ..

ಈ ಸಂದರ್ಭದಲ್ಲಿ ಮಾರ್ಕಸ್ ಹ್ಯಾರಿಸ್ 24 ರನ್ ಬಾರಿಸಿದ್ದರು. ಸಿಕ್ಕ ಜೀವದಾನವನ್ನು ಸರಿಯಾಗಿಯೇ ಉಪಯೋಗಿಸಿಕೊಂಡ ಹ್ಯಾರಿಸ್ 120 ಎಸೆತಗಳನ್ನು ಎದುರಿಸಿ 79 ರನ್ ಸಿಡಿಸಿದರು. ತಂಡದ ಮೊತ್ತ 122 ರನ್’ಗಳಾಗಿದ್ದಾಗ ರವೀಂದ್ರ ಜಡೇಜಾ, ಆಸಿಸ್ ಆರಂಭಿಕ ಬ್ಯಾಟ್ಸ್’ಮನ್ ಹ್ಯಾರಿಸ್ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಸಿಡ್ನಿ ಟೆಸ್ಟ್’ನ ಮೂರನೇ ದಿನದಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 236 ರನ್ ಬಾರಿಸಿದ್ದು, ಇನ್ನೂ 386 ರನ್’ಗಳ ಹಿನ್ನಡೆಯಲ್ಲಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?