ಯುವಕರಿಗೆ ನಾಲ್ಕೈದು ಅವಕಾಶಗಳಷ್ಟೇ..!

Published : Sep 16, 2019, 12:33 PM IST
ಯುವಕರಿಗೆ ನಾಲ್ಕೈದು ಅವಕಾಶಗಳಷ್ಟೇ..!

ಸಾರಾಂಶ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯುವ ಕ್ರಿಕೆಟಿಗರಿಗೆ ಕಿವಿ ಮಾತೊಂದನ್ನು ಹೇಳಿದ್ದು, ಸಿಕ್ಕ ನಾಲ್ಕೈದು ಅವಕಾಶಗಳಲ್ಲೇ ತಮ್ಮ ಪ್ರತಿಭೆಗಳನ್ನು ಸಾಬೀತು ಪಡಿಸಬೇಕು ಎಂದು ಹೇಳಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ಧರ್ಮ​ಶಾ​ಲಾ[ಸೆ.16]: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, 2020ರ ಟಿ20 ವಿಶ್ವ​ಕಪ್‌ಗೆ ತಂಡದ ಯೋಜನೆಗಳ ಬಗ್ಗೆ ಸುಳಿವು ನೀಡಿದ್ದು, ವಿಶ್ವ​ಕಪ್‌ ತಂಡ​ದಲ್ಲಿ ಸ್ಥಾನ ಪಡೆ​ಯ​ಬೇ​ಕಿ​ದ್ದರೆ ಸಿಗುವ 4ರಿಂದ 5 ಅವ​ಕಾ​ಶಗಳಲ್ಲಿ ಗಮನ ಸೆಳೆ​ಯ​ಬೇಕು ಎಂದಿ​ದ್ದಾರೆ.

ಕೋಟ್ಲಾ ಈಗ ಜೇಟ್ಲಿ ಕ್ರೀಡಾಂಗಣ; ಸಮಾರಂಭದಲ್ಲಿ ಕೊಹ್ಲಿ, ಅಮಿತ್ ಶಾ!

ತಮ್ಮದೇ ಉದಾ​ಹ​ರಣೆ ನೀಡಿ​ರುವ ಕೊಹ್ಲಿ, ತಾವು 2008ರಲ್ಲಿ ಭಾರತ ತಂಡಕ್ಕೆ ಕಾಲಿ​ಟ್ಟಾಗ ಹೆಚ್ಚಿನ ಅವ​ಕಾಶಗಳನ್ನು ನಿರೀಕ್ಷೆ ಮಾಡಿರ​ಲಿಲ್ಲ. ಅದೇ ಮನ​ಸ್ಥಿ​ತಿ​ಯನ್ನು ಯುವ ಆಟ​ಗಾ​ರರೂ ಹೊಂದಿ​ರ​ಬೇಕು ಎಂದಿ​ದ್ದಾರೆ. ‘ಟಿ20 ವಿಶ್ವ​ಕಪ್‌ಗೂ ಮುನ್ನ ಹೆಚ್ಚೆಂದೆರೆ ನಮಗೆ 30 ಪಂದ್ಯ​ಗಳು ಸಿಗ​ಲಿವೆ. ತಂಡ ತನ್ನ ಉದ್ದೇಶಗಳ ಬಗ್ಗೆ ಸ್ಪಷ್ಟ ನಿಲುವು ಹೊಂದಿದೆ. ಆಟ​ಗಾ​ರ​ರಿಗೆ 4ರಿಂದ 5 ಅವ​ಕಾಶಗಳು ಸಿಗ​ಲಿದ್ದು, ಅದರ ಸದ್ಬ​ಳಕೆ ಮಾಡಿ​ಕೊ​ಳ್ಳ​ಬೇ​ಕಿದೆ. ಆ ಮಟ್ಟದ ಆಟವನ್ನು ನಾವು ಆಡು​ತ್ತಿ​ದ್ದೇವೆ’ ಎಂದು ಕೊಹ್ಲಿ ಹೇಳಿ​ದ್ದಾರೆ.

ಕೊಹ್ಲಿ-ಸ್ಮಿತ್ ಇಬ್ಬರಲ್ಲಿ ಯಾರು ಬೆಸ್ಟ್..?

‘ತಂಡದಲ್ಲಿ ಸ್ಥಾನ ಪಡೆ​ಯುವ ಆಟ​ಗಾ​ರರ ಮನ​ಸ್ಥಿತಿ ಸದೃಢ​ವಾ​ಗಿ​ರ​ಬೇ​ಕಿದೆ. ಯಾರು ಅವ​ಕಾಶಗಳನ್ನು ಸರಿ​ಯಾಗಿ ಉಪ​ಯೋ​ಗಿ​ಸಿ​ಕೊ​ಳ್ಳು​ತ್ತಾರೋ ಅವರು ತಂಡ​ದಲ್ಲಿ ಮುಂದು​ವ​ರಿ​ಯು​ತ್ತಾರೆ. ಏಕೆಂದರೆ ನಮಗೆ ಹೆಚ್ಚಿನ ಸಮ​ಯ​ವಿ​ಲ್ಲ’ ಎಂದು ಕೊಹ್ಲಿ ಆಟ​ಗಾ​ರ​ರಿಗೆ ಸಂದೇಶ ರವಾ​ನಿ​ಸಿ​ದ್ದಾರೆ. ಟಿ20 ವಿಶ್ವ​ಕಪ್‌ ಜತೆಗೆ ಭಾರತ ತಂಡ ವಿಶ್ವ ಟೆಸ್ಟ್‌ ಚಾಂಪಿ​ಯನ್‌ಶಿಪ್‌ ಕಡೆಗೂ ಗಮನ ಹರಿ​ಸು​ತ್ತಿ​ರು​ವು​ದಾಗಿ ಕೊಹ್ಲಿ ಹೇಳಿ​ದ್ದಾರೆ.

ವೆಸ್ಟ್‌ಇಂಡೀಸ್‌ ಪ್ರವಾಸದಿಂದಲೇ ಭಾರತ ತಂಡ ಹಲವು ಪ್ರಯೋಗಗಳನ್ನು ಮಾಡು​ತ್ತಿದೆ. ಕೆಲ ಹೊಸ ಪ್ರತಿಭೆಗಳಿಗೆ ತಂಡ​ದಲ್ಲಿ ಸ್ಥಾನ ನೀಡ​ಲಾ​ಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಪ್‌ ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!