ಶಿವಮೊಗ್ಗದಲ್ಲಿ ಧರಣಿಗೆ ಕುಳಿತ ಶಾಸಕ ಹರತಾಳು ಹಾಲಪ್ಪ

Published : Oct 21, 2019, 02:16 PM ISTUpdated : Oct 21, 2019, 02:22 PM IST
ಶಿವಮೊಗ್ಗದಲ್ಲಿ ಧರಣಿಗೆ ಕುಳಿತ ಶಾಸಕ ಹರತಾಳು ಹಾಲಪ್ಪ

ಸಾರಾಂಶ

ಹಲವು ರೈತರು ಕೃಷಿ ವಿಶ್ವವಿದ್ಯಾಲಯದ ಭೂ ಸ್ವಾಧೀನ ವಿರೋಧಿಸಿ ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. 

ಶಿವಮೊಗ್ಗ [ಅ.21]: ಸಾಗರ ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ಶಿವಮೊಗ್ಗದ ಎಸಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು. 

ಸಾಗರ ತಾಲೂಕಿನ ಇರುವಕ್ಕಿಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಸುತ್ತಮುತ್ತಲಿನ ಜಮೀನನ್ನು ಒತ್ತುವರಿ ನೆಪದಲ್ಲಿ ಹಾನಿ ಮಾಡಲಾಗಿದೆ ಎಂದು ಶಾಸಕರು ಆರೋಪಿಸಿದ್ದಾರೆ. 

ಇಲ್ಲಿನ ರೈತರ ಜಮೀನಿಗೆ ಕಳೆನಾಶಕ ಸಿಂಪಡಿಸಿ ಹಾನಿ ಮಾಡಲಾಗಿದ್ದು, ಈ ಬಗ್ಗೆ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಮೀನು ಹಾಳು ಮಾಡಿರುವ ಅಧಿಕಾರಿಗಳ ವಿರುದ್ಧ ರೈತರೊಂದಿಗೆ ಸೇರಿ ಎಸಿ ಕಚೇರಿ ಎದುರು ಪ್ರತಿಭಟನೆ ನಡೆಸುವ ಮೂಲಕ ಶಾಸಕ ಹಾಲಪ್ಪ ಅಸಮಾಧಾನ ಹೊರಹಾಕಿದ್ದಾರೆ.

PREV
click me!

Recommended Stories

ಕೆಎಸ್‌ಸಿಎ ಚುನಾವಣಾ ಅಖಾಡಕ್ಕೆ ಮಲೆನಾಡಿನ ಕ್ರಿಕೆಟಿಗ ನಾಗೇಂದ್ರ ಪಂಡಿತ್!
ಭದ್ರಾವತಿ: ಮದುವೆಯಾದ ಎರಡೇ ದಿನಕ್ಕೆ ವರ ಸಾವು!