Euthanasia: 'ಶೀಘ್ರದಲ್ಲಿ ಭೇಟಿಯಾಗೋಣ': ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯ ಇಚ್ಛಾಮರಣ!

Published : Jan 09, 2022, 10:16 PM ISTUpdated : Jan 09, 2022, 10:20 PM IST
Euthanasia: 'ಶೀಘ್ರದಲ್ಲಿ ಭೇಟಿಯಾಗೋಣ': ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯ ಇಚ್ಛಾಮರಣ!

ಸಾರಾಂಶ

ಅಪರೂಪದ, ನೋವಿನ ಮತ್ತು ಗುಣಪಡಿಸಲಾಗದ ಕಾಯಿಲೆಯೊಂದಿಗೆ ಹೋರಾಡುತ್ತಿದ್ದ ವಿಕ್ಟರ್ ಎಸ್ಕೋಬಾರ್ ಶುಕ್ರವಾರ ಸಾಯಲು ನಿರ್ಧರಿಸಿದ್ದರು. ಅವರು ಸಾಯುವ ಕೆಲವು ಗಂಟೆಗಳ ಮೊದಲು, ಅವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆದರು

ಕೊಲಂಬಿಯಾ (ಜ. 9): 'ನನಗೆ ತುಂಬಾ ಸಮಾಧಾನವಿದೆ. ನನಗೆ ಏನಾಗುವುದೋ ಎಂಬ ಭಯ ನನಗಿಲ್ಲ. ನಿಧಾನವಾಗಿ ಯಾರದೋ ಸರದಿ. ಅದಕ್ಕಾಗಿಯೇ ನಾನು ವಿದಾಯ ಹೇಳುವುದಿಲ್ಲ, ಆದರೆ ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಹೇಳುತ್ತೇನೆ ...' ಇವು ಮಾರಣಾಂತಿಕ ಅನಾರೋಗ್ಯದ ಕಾರಣ ಶುಕ್ರವಾರದಂದು ದಯಾಮರಣವನ್ನು ಆಯ್ಕೆ ಮಾಡಿದ ಕೊಲಂಬಿಯಾದ 60 ವರ್ಷದ ವೃದ್ಧನ  ಮಾತುಗಳು. ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದ ಇಚ್ಛಾ ಮೃತ್ಯುವನ್ನು ಆಯ್ಕೆ ಮಾಡಲು ಸಾರ್ವಜನಿಕವಾಗಿ ನಿರ್ಧರಿಸಿದ್ದ ಕೋಲಂಬಿಯಾದ ವ್ಯಕ್ತಿ ಹೆಸರು ವಿಕ್ಟರ್ ಎಸ್ಕೋಬಾರ್ (Victor Escobar). 

ಅಪರೂಪದ, ನೋವಿನ ಮತ್ತು ಗುಣಪಡಿಸಲಾಗದ ಕಾಯಿಲೆಯೊಂದಿಗೆ ಹೋರಾಡುತ್ತಿದ್ದ ವಿಕ್ಟರ್ ಎಸ್ಕೋಬಾರ್ ಶುಕ್ರವಾರ ಸಾಯಲು ನಿರ್ಧರಿಸಿದ್ದರು. ಅವರು ಸಾಯುವ ಕೆಲವು ಗಂಟೆಗಳ ಮೊದಲು, ಅವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆದರು. ಅವರು ಸಾವಿನ ಸಮೀಪದಲ್ಲಿಲ್ಲದಿದ್ದರೂ ಸಹ ದಯಾಮರಣಕ್ಕೆ ಒಳಗಾದ ಮೊದಲ ಕೊಲಂಬಿಯಾದ ಪ್ರಜೆಯಾದರು. 

ನನಗೆ ಏನಾಗುವುದೋ ಎಂಬ ಭಯ ಇಲ್ಲ!

 'ನನಗೆ ತುಂಬಾ ಸಮಾಧಾನವಿದೆ. ನನಗೆ ಏನಾಗುವುದೋ ಎಂಬ ಭಯ ನನಗಿಲ್ಲ. ಮೊದಲು ನಾನು ಕ್ರಮೇಣ ಮೂರ್ಛೆ ಹೋಗುವಂತೆ ಮಾಡಲಾಗುವುದು, ನಂತರ ನನಗೆ ವಿದಾಯ ಹೇಳಲು ಸಮಯವಿದೆ ಎಂದು ವೈದುರು ಹೇಳಿದರು. ನಂತರ ದಯಾಮರಣ ಚುಚ್ಚುಮದ್ದನ್ನು ನೀಡಲಾಗುವುದು, ಅದು ನೋವುರಹಿತವಾಗಿರುತ್ತದೆ - ಅತ್ಯಂತ ಶಾಂತಿಯುತ ಸಾವು. ಎಲ್ಲವೂ ಹೀಗೇ ಆಗುತ್ತದೆ ಎಂಬ ನಂಬಿಕೆ ನನಗಿದೆ" ಎಂದು  ವಿಕ್ಟರ್ ಹೇಳಿದ್ದರು.

ಇದನ್ನೂ ಓದಿ: Switzerland approve Euthanasia: 1 ನಿಮಿಷದಲ್ಲಿ ನೋವು ರಹಿತ ಸಾವು, ಸ್ವಿಟ್ಜರ್‌ಲೆಂಡ್‌ನಲ್ಲಿ ದಯಾಮರಣ ಪೆಟ್ಟಿಗೆಗೆ ಅನುಮತಿ!

ಅವರ ವಕೀಲ ಲೂಯಿಸ್ ಗಿರಾಲ್ಡೊ ಶುಕ್ರವಾರ ಸಂಜೆ ಈ ಪ್ರಕ್ರಿಯೆ ಮುಗಿದಿದೆ ಮತ್ತು ಎಸ್ಕೋಬಾರ್ ನಿಧನರಾದರು ಎಂದು ಹೇಳಿದರು. ಕಳೆದ ವರ್ಷ ಜುಲೈನಲ್ಲಿ ಕೊಲಂಬಿಯಾದ ನ್ಯಾಯಾಲಯದ ತೀರ್ಪು ದಯಾಮರಣದ ನಿಯಮಗಳನ್ನು ಬದಲಾಯಿಸಿತ್ತು. ಗಂಭೀರ ಮತ್ತು ಗುಣಪಡಿಸಲಾಗದ ಅನಾರೋಗ್ಯದಿಂದ ತೀವ್ರ ದೈಹಿಕ ಮತ್ತು ಮಾನಸಿಕ  ಕಾಯಿಲೆಯಿಂದ ಬಳಲುತ್ತಿರುವವರಿಗೂ ದಯಾಮರಣದ ಬಾಗಿಲು ತೆರೆದೆತ್ತು. ಆದಾಗ್ಯೂ, ಕ್ಯಾಥೋಲಿಕ್ ಚರ್ಚ್ ಈ ನಿರ್ಧಾರವನ್ನು ವಿರೋಧಿಸುತ್ತದೆ.

 2008 ರಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಕ್ಟರ್!

"ನನ್ನಂತಹ ರೋಗಿಯು ಘನತೆಯಿಂದ ಸಾಯುವ ಅವಕಾಶವನ್ನು ಹೊಂದಲು ಬಾಗಿಲು ತೆರೆದಿದೆ" ಎಂದು ಎಸ್ಕೋಬಾರ್ ಕ್ಯಾಲಿಯಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಗುರುವಾರ ಹೇಳಿದರು.ಔಷಧಿಗಳು ಸಹ ಅವರ ದೇಹದ ಮೇಲೆ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಮದುವೆ ವಿಚಾರ ಇಷ್ಟು ಬೆಳೆಯಿತು : ಸಾವು ಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿತು ಕುಟುಂಬ

ಅವರು 2008 ರಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಎರಡು ಪಾರ್ಶ್ವವಾಯುಗಳಿಂದ ಅವರ ದೇಹದ ಅರ್ಧ ಭಾಗವು ಪಾರ್ಶ್ವವಾಯುವಿಗೆ ಒಳಗಾಯಿತು. ಕೆಲವು ಅಂಗಗಳು ನಂತರ ಕಾರ್ಯನಿರ್ವಹಿಸಲು ಪ್ರಾರಂಭಿಸಿದರೂ, ಉಸಿರಾಟಕ್ಕೆ ಅಡ್ಡಿಪಡಿಸುವ ಶ್ವಾಸಕೋಶದ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ, ತೀವ್ರ ಸಂಧಿವಾತ ಮತ್ತು ಪಕ್ಕೆಲುಬುಗಳು ಮೂಳೆಗೆ ಅಂಟಿಕೊಳ್ಳುವ ಅಪರೂಪದ ಕಾಯಿಲೆಯಂತಹ ಕಾಯಿಲೆಗಳಿಂದ ಅವರು ಇನ್ನಷ್ಟು ಸಂಕಟಕ್ಕೆ ಒಳಪಡಬೇಕಾಯಿತು.‌

ಕೊಲಂಬಿಯಾದ ವಿಕ್ಟರ್ ಎಸ್ಕೋಬಾರ್ ಅವರು ಜೀವಂತವಾಗಿರುವಾಗ ಮಾಡಿದ ಕೊನೆಯ ವೀಡಿಯೊದಲ್ಲಿ ನಗುತ್ತಿರುವುದನ್ನು ಕಾಣಬಹುದು. ಅವರೊಂದಿಗೆ ಅವನ ಕುಟುಂಬವಿದೆ. ಅವರಿಗೆ ದಯಾಮರಣಕ್ಕೆ ಮಾರಕ ಚುಚ್ಚುಮದ್ದು ನೀಡಲಾಯಿತು. ಅವರು ವೈದ್ಯರು ಮತ್ತು ಅವರ ವಕೀಲರ ಮುಂದೆ ನಿಧನರಾದರು.  'ನನ್ನಂತಹ ರೋಗಿಗಳಿಗೆ ವಿಶ್ರಾಂತಿಗಾಗಿ ತೆರೆದ ಬಾಗಿಲನ ನನ್ನ ಕಥೆಯನ್ನು ತಿಳಿಯಪಡಿಸಲು ನಾನು ಬಯಸುತ್ತೇನೆ." ಎಂದು ಅವರು ಹೇಳಿದ್ದರು. ಈ ಪ್ರಕ್ರಿಯೆಯು ಸಾಕಷ್ಟು ಜಟಿಲವಾಗಿದೆಯಾದರೂ ಇಲ್ಲಿಯವರೆಗೆ, ಯುರೋಪಿನ ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಲಕ್ಸೆಂಬರ್ಗ್ ಮತ್ತು ಸ್ಪೇನ್‌ನಲ್ಲಿ ಮಾತ್ರ ದಯಾಮರಣಕ್ಕೆ ಅವಕಾಶವಿತ್ತು. ಆದರೆ ಇದೀಗ ಈ ಪಟ್ಟಿಗೆ ಕೊಲಂಬಿಯಾ ಕೂಡ ಸೇರ್ಪಡೆಯಾಗಿದೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ