ನಟ ದರ್ಶನ್ ಪುತ್ರ ವಿನೀಶ್ ಬರ್ತ್‌ಡೇ ಸಂಭ್ರಮ; ದರ್ಶನ್ ಜೊತೆಗಿನ ಫೋಟೋ ಫೋಸ್ಟ್‌ ಮಾಡಿದ ವಿಜಯಲಕ್ಷ್ಮೀ

Published : Oct 31, 2025, 11:36 AM IST
Vijayalakshmi Darshan Darshan Thoogudeepa Vineesh Thoogudeepa

ಸಾರಾಂಶ

ಪ್ರತಿವರ್ಷವೂ ಮಗನ ಹುಟ್ಟುಹಬ್ಬವನ್ನು ಗ್ರಾಂಡ್‌ ಆಗಿ ಆಚರಿಸುತ್ತಿದ್ದರು ವಿಜಯಲಕ್ಷ್ಮೀ ಹಾಗೂ ದರ್ಶನ್. ಆದರೆ, ಈ ಬಾರಿ ಈ ಅವಕಾಶ ವಿಜಯಲಕ್ಷ್ಮೀ ಪಾಲಿಗೆ ಹಾಗೂ ದರ್ಶನ್ ಪಾಲಿಗೆ ಮಿಸ್ ಆಗಿದೆ. ದರ್ಶನ್ ಇಲ್ಲದ ಮಗನ ಹುಟ್ಟುಹಬ್ಬವನ್ನು ಆಚರಿಸಿ ಪೋಸ್ಟ್ ಮಾಡಿದ್ದಾರೆ ವಿಜಯಲಕ್ಷ್ಮೀ.

ವಿನೀಶ್ ತೂಗುದೀಪ ಹುಟ್ಟಹಬ್ಬದ ಆಚರಣೆ

ಇಂದು ಕನ್ನಡದ ಸ್ಟಾರ್ ನಟ ದರ್ಶನ್ ತೂಗುದೀಪ (Darshan Thoogudeepa) ಅವರ ಏಕೈಕ ಪುತ್ರ ವಿನೀಶ್ (Vineesh Thoogudeepa) ಅವರ ಮಗನ ಹುಟ್ಟುಹಬ್ಬ. ಈ ಸಂಭ್ರಮದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ಅವರು ತಮ್ಮ ಪುತ್ರ ವಿನೀಶ್‌ಗೆ ಹೃದಯಪೂರ್ವಕವಾಗಿ ವಿಶ್ ಮಾಡಿದ್ದಾರೆ. ಜೊತೆಗೆ, ದರ್ಶನ್ ಜೊತೆಗಿನ ಫೋಟೋ ಫೋಸ್ಟ್‌ ಮಾಡಿ ಮಗನಿಗೆ ಧೈರ್ಯ ತುಂಬಿದ್ದಾರೆ ವಿಜಯಲಕ್ಷ್ಮಿ. ಅಷ್ಟೇ ಅಲ್ಲ, ವಿಜಯಲಕ್ಷ್ಮೀ ಅವರು ತಮ್ಮ ಮಗನಿಗೆ ಕೆಲವು ಕಿವಿಮಾತುಗಳನ್ನು ಹೇಳಿದ್ದಾರೆ. ಅದೇನು ನೋಡಿ..

'ನೀನು ಕೆಲ ಘಟನೆಗಳು, ಹಾಗೂ ಪರಿಸ್ಥಿತಿಯನ್ನ ಎದುರಿಸಿ ನಿಂತಿರುವುದು ನನಗೆ ಹೆಮ್ಮೆ ತಂದಿದೆ. ನಾನು‌, ನಿಮ್ಮ ಅಪ್ಪ ನಿನ್ನನ್ನು‌ ತುಂಬಾನೇ ಪ್ರೀತಿಸುತ್ತೇವೆ ಎಂಬುದನ್ನ ಮರೆಯಬೇಡ ಮಗನೇ' ಎಂದಿದ್ದಾರೆ ವಿಜಯಲಕ್ಷ್ಮಿ. ಈ ಮೂಲಕ ವಿನೀಶ್ ಅಪ್ಪ ನಟ ದರ್ಶನ್ ಅವರು ಸದ್ಯ ಜೈಲಿನಲ್ಲಿರುವ ಸಂಗತಿಯನ್ನು ನೆನಪಿಸಿಕೊಂಡು ಮಗನಿಗೆ ಸಮಾಧಾನ ಮಾಡುವ ಯತ್ನ ಮಾಡಿದ್ದಾರೆ ವಿಜಯಲಕ್ಷ್ಮೀ ಎನ್ನಬಹುದು.

ಈ ಬಾರಿ ಈ ಅವಕಾಶ ವಿಜಯಲಕ್ಷ್ಮೀ, ದರ್ಶನ್ ಪಾಲಿಗೆ ಮಿಸ್ ಆಗಿದೆ!

ಪ್ರತಿವರ್ಷವೂ ಮಗನ ಹುಟ್ಟುಹಬ್ಬವನ್ನು (Vineesh Darshan Birthday) ಗ್ರಾಂಡ್‌ ಆಗಿ ಆಚರಿಸುತ್ತಿದ್ದರು ವಿಜಯಲಕ್ಷ್ಮೀ ಹಾಗೂ ದರ್ಶನ್. ಆದರೆ, ಈ ಬಾರಿ ಈ ಅವಕಾಶ ವಿಜಯಲಕ್ಷ್ಮೀ ಪಾಲಿಗೆ ಹಾಗೂ ದರ್ಶನ್ ಪಾಲಿಗೆ ಮಿಸ್ ಆಗಿದೆ. ದರ್ಶನ್ ಇಲ್ಲದ ಮಗನ ಹುಟ್ಟುಹಬ್ಬವನ್ನು ಆಚರಿಸಿ ಪೋಸ್ಟ್ ಮಾಡಿದ್ದಾರೆ ವಿಜಯಲಕ್ಷ್ಮೀ. ಈ ಬಾರಿ ಅಪ್ಪನ Wishes & ಗಿಫ್ಟ್ ಮಿಸ್ ಮಾಡಿಕೊಂಡಿದ್ದಾರೆ ದರ್ಶನ್ ಪುತ್ರ ವಿನೀಶ್ ತೂಗುದೀಪ. ಅಪ್ಪನ ಸಮಸ್ಯೆಗೆ ಮಗನಿಗೆ ಶಿಕ್ಷೆ ಆಗುತ್ತಿದೆ ಎಂಬುದು ಹಲವರ ಬೇಸರಕ್ಕೆ ಕಾರಣ. ಆದರೆ, ಅದು ಸದ್ಯಕ್ಕೆ ಅನಿವಾರ್ಯದ ಸಂಗತಿ ಎಂಬುದು ಕೂಡ ಗಮನಿಸಬೇಕಾದ ಸಂಗತಿ.

ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್!

ಪ್ರತೀ ವರ್ಷ ವಿನೀಶ್ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸುತ್ತಿದ್ದ ದರ್ಶನ್ ಫ್ಯಾಮಿಲಿಗೆ ಈ ಸಾರಿ ಅಂತಹ ಅವಕಾಶವೇ ಇಲ್ಲ. ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಅವರು ಕೊಲೆ ಆರೋಪಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವುದು ಗೊತ್ತೇ ಇದೆ. ಸದ್ಯ ಆರೋಪಿ ಸ್ಥಾನದಲ್ಲಿರುವ ನಟ ದರ್ಶನ್ ಅವರು ಮುಂದೆ ಅಪರಾಧಿ ಎನ್ನಿಸಿಕೊಳ್ಳುತ್ತಾರೋ ಅಥವಾ ನಿರಪರಾಧಿ ಎನ್ನಿಸಿಕೊಂಡು ಹೊರಬರುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?