ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ; ಕನ್ನಡ ಹನುಮಾನ ಚಾಲೀಸ ಉಡುಗೊರೆ!

Published : Jan 09, 2024, 06:28 PM ISTUpdated : Jan 09, 2024, 06:35 PM IST
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ; ಕನ್ನಡ ಹನುಮಾನ ಚಾಲೀಸ ಉಡುಗೊರೆ!

ಸಾರಾಂಶ

ವೆಂಕಟೇಶ್ ಉತ್ತರಹಳ್ಳಿ ಅವರು ಈ ಹಾಡಿನ ಆಲ್ಬಂ ನಿರ್ಮಾಣ ಮಾಡುವ ಮೂಲಕ ತಮ್ಮ ಹನುಮನ ಭಕ್ತಿಯನ್ನು ಮೆರೆದಿದ್ದಾರೆ. ಇದಕ್ಕೆ ಸಂಗೀತದ ಸ್ಪರ್ಶ ನೀಡಿರುವವರು ಈಗಾಗಲೇ ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಹಲವು ಚಿತ್ರಗಳಿಗೆ ಸಂಗೀತ ನೀಡಿ ಜನ ಮನ್ನಣೆಗಳಿಸಿರುವ ಲೋಕಿ ತವಸ್ಯ. 

ದೇಶದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ಹೊಸ್ತಿಲಲ್ಲೇ ಕನ್ನಡದಲ್ಲೊಂದು ಹನುಮಾನ್ ಚಾಲಿಸ ಬಿಡುಗಡೆ ಆಗಿದೆ.  ಭಕ್ತಿ ಭಾವದ ಹೊನಲಿಗೆ ಹೃದಯಸ್ಪರ್ಶ ನೀಡುವ ಹೃತ್ಕಂಠ ಗಾಯಕ ನಮ್ಮ ಕನ್ನಡದ ಹೆಮ್ಮೆಯ ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಕನ್ನಡದಲ್ಲಿ ಮೊದಲನೇ ಹನುಮಾನ ಚಾಲಿಸಾ ಕಳೆದ ವಾರ ಲೋಕಾರ್ಪಣೆ ಆಗಿದೆ. ಇಷ್ಟು ಕಾಲವೂ ಸಂಸ್ಕೃತದ ಹನುಮಾನ ಚಾಲೀಸ ಪಠಿಸುತ್ತಿದ್ದ ಕನ್ನಡಿಗರಿಗೆ ಇದೀಗ ಕನ್ನಡಕ್ಕೆ ಅನುವಾದ ಮಾಡಿದ ಹನುಮಾನ ಚಾಲೀಸ ಲಭ್ಯವಿದೆ. 

ಕೋಟ್ಯಾಂತರ ಜನ ಭಾರತೀಯರು ಕಾತುರದಿಂದ ಕಾಯುತ್ತಿರುವ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠೆ ಸುಸಮಯ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಜಗತ್ತಿಗೆ ಭಕ್ತಿಯ ನಿಯಮ, ಭಕ್ತಿಯ ಪಾಲನೆ, ಪೋಷಣೆ ಏನೆಂದು ತೋರಿಸಿಕೊಟ್ಟ ರಾಮಭಕ್ತ ಹನುಮನ ಕುರಿತಾದ ಹನುಮಾನ್ ಚಾಲಿಸಾ ಬಿಡುಗಡೆಯಾಗಿದೆ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಮೂಡಿಬಂದಿರುವ ಹನುಮಾನ್ ಚಾಲಿಸಾ ವನ್ನು ಭಕ್ತಿ ಭಾವದ ಹೊನಲಿಗೆ ಹೃದಯಸ್ಪರ್ಶ ನೀಡುವ ಹೃತ್ಕಂಠ ಗಾಯಕ ನಮ್ಮ ಕನ್ನಡದ ಹೆಮ್ಮೆಯ ವಿಜಯ್ ಪ್ರಕಾಶ್ ಸುಶ್ರಾವ್ಯವಾಗಿ ಭಕ್ತಿಪರವಶರಾಗಿ ಹಾಡಿದ್ದಾರೆ. 

'ಮುತ್ತಣ್ಣ'ನ ಮಗನಾಗಲು ಹೊರಟೇಬಿಟ್ರು ಪ್ರಣಮ್; ಹರಸಿ ಕಳುಹಿಸಿದ ಕರುನಾಡ ಡೈನಾಮಿಕ್ ಸ್ಟಾರ್

ವೆಂಕಟೇಶ್ ಉತ್ತರಹಳ್ಳಿ ಅವರು ಈ ಹಾಡಿನ ಆಲ್ಬಂ ನಿರ್ಮಾಣ ಮಾಡುವ ಮೂಲಕ ತಮ್ಮ ಹನುಮನ ಭಕ್ತಿಯನ್ನು ಮೆರೆದಿದ್ದಾರೆ. ಇದಕ್ಕೆ ಸಂಗೀತದ ಸ್ಪರ್ಶ ನೀಡಿರುವವರು ಈಗಾಗಲೇ ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಹಲವು ಚಿತ್ರಗಳಿಗೆ ಸಂಗೀತ ನೀಡಿ ಜನ ಮನ್ನಣೆಗಳಿಸಿರುವ ಲೋಕಿ ತವಸ್ಯ ಅವರು.  ಹನುಮನ ಕುರಿತಾಗಿ ಹಲವು ಕೃತಿಗಳು, ಗೀತೆಗಳು, ಭಕ್ತಿಗೀತೆಗಳು ಬಂದಿವೆ. ಆದರೆ ಕನ್ನಡದಲ್ಲೇ ಪ್ರಪ್ರಥಮ ಬಾರಿಗೆ ಹನುಮಾನ್ ಚಾಲಿಸವನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಒಂದು ಆಲ್ಬಂ ತಯಾರಿಸಲಾಗಿದೆ. 

ಎಸ್ ನಾರಾಯಣ್-ಆದಿತ್ಯ ಜುಗಲ್ಬಂದಿ ಟೀಸರ್ ಔಟ್; ಲೇಟ್ ಆದ್ರೂ ಲೇಟೆಸ್ಟ್‌ ಅಂತಿದೆ ಟೀಮ್!

ಇಂತಹ ಒಂದು ಅದ್ಭುತ ಕೆಲಸವನ್ನು ಹನುಮನ ಅಪ್ರತಿಮ ಭಕ್ತರಾದ ಶ್ರೀ ವೆಂಕಟೇಶ್  ಉತ್ತರಹಳ್ಳಿ ರವರು ಬಹಳ ಆಸ್ಥೆ ವಹಿಸಿ ತನು ಮನ ಧನವನ್ನು ಸಮರ್ಪಿಸಿ ಲಕ್ಷ್ಮಿ ವೆಂಕಟೇಶ್ವರ RG510 ಉತ್ತರಹಳ್ಳಿ ಬ್ಯಾನರ್ ಅಡಿಯಲ್ಲಿ ಈ ಆಲ್ಬಂ ಅನ್ನು ನಿರ್ಮಿಸಿದ್ದಾರೆ. ಈ ಆಲ್ಬಂ ಲೋಕಾರ್ಪಣೆ ಆದ ಬಳಿಕ ಇದೀಗ ಅದನ್ನು ಮನೆಮನೆಯಲ್ಲಿ, ಮನಮನದಲ್ಲಿ ಕೇಳಿಸಿ ಕೃತಾರ್ಥರಾಗುವ ಕಾಯಕದತ್ತ ತಮ್ಮ ಚಿತ್ತ ನೆಟ್ಟಿದ್ದಾರೆ ಸೃಷ್ಟಿಕರ್ತರಾದ ವೆಂಕಟೇಶ್ ಉತ್ತರಹಳ್ಳಿ.  ಒಟ್ಟಿನಲ್ಲಿ, 'ಎಲ್ಲಿ ರಾಮನಿರುವನೋ ಅಲ್ಲಿ ಹನುಮನು' ಎಂಬ ಪ್ರಸಿದ್ಧ ಸಾಲು ಇಂದು ಸಾಕಾರಗೊಂಡಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್