ಸ್ಯಾಂಡಲ್‌ವುಡ್‌ನಲ್ಲಿ ಶುರುವಾಯ್ತು 'ತ್ರಿವಿಕ್ರಮ'ನ ಆಟ; ವಿಶೇಷತೆಗಳು ಇಲ್ಲಿವೆ!

Suvarna News   | Asianet News
Published : Dec 15, 2019, 01:00 PM IST
ಸ್ಯಾಂಡಲ್‌ವುಡ್‌ನಲ್ಲಿ ಶುರುವಾಯ್ತು 'ತ್ರಿವಿಕ್ರಮ'ನ ಆಟ; ವಿಶೇಷತೆಗಳು ಇಲ್ಲಿವೆ!

ಸಾರಾಂಶ

ಸ್ಯಾಂಡಲ್‌ವುಡ್ ಕ್ರೇಜಿ ಸ್ಟಾರ್ ರವಿಚಂದ್ರನ್‌ ಪುತ್ರ ವಿಕ್ರಮ್‌ ಚೊಚ್ಚಲ ಸಿನಿಮಾ 'ತ್ರಿವಿಕ್ರಮ' ತನ್ನ ವಿಭಿನ್ನತೆಗೆ  ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.  ಸಿನಿರಸಿಕರಿಗೆ ನಿರೀಕ್ಷೆ ಹೆಚ್ಚಾಗಲು ಕಾರಣವೇನು ಗೊತ್ತಾ?

ಸ್ಯಾಂಡಲ್​ವುಡ್​ ಕ್ರೇಜಿಸ್ಟಾರ್​ ರವಿಚಂದ್ರನ್​ ಅವರ ಎರಡನೇ ಪುತ್ರ ವಿಕ್ರಮ್​ ರವಿಚಂದ್ರನ್​ ಅವರ ಚೊಚ್ಚಲ ಚಿತ್ರ 'ತ್ರಿವಿಕ್ರಮ' ಸದ್ಯ ಸ್ಯಾಂಡಲ್​ವುಡ್​ನಲ್ಲಿ ತೆರೆಗೆ ಬರೋ ಮುನ್ನವೇ  ಸಾಕಷ್ಟು ವಿಶೇಷತೆಗಳೊಂದಿಗೆ ಸದ್ದು ಮಾಡುತ್ತಿದೆ.  ಸ್ಟಾರ್​ ಕಾಸ್ಟ್, ಸಾಹಸ ದೃಶ್ಯಗಳ ಶೂಟಿಂಗ್​ ​ಸೇರಿದಂತೆ ಅನೇಕ ವಿಚಾರದಲ್ಲಿ ಚಿತ್ರೀಕರಣದ ಹಂತದಲ್ಲೇ ಸಿನಿರಸಿಕರಲ್ಲಿ ನಿರೀಕ್ಷೆಗಳ ಬೆಟ್ಟವನ್ನೆ ಕಟ್ಟುವಂತೆ ಮಾಡಿದೆ.

ರಾಜಸ್ಥಾನದ ಮರುಳುಗಾಡಿನಲ್ಲಿ ತ್ರಿವಿಕ್ರಮನ ಸಂಚಾರ

ಸಹನಾ ಮೂರ್ತಿ ಆ್ಯಕ್ಷನ್‌ ಕಟ್‌ನಲ್ಲಿ ಮೂಡಿ ಬರುತ್ತಿರುವ  'ತ್ರಿವಿಕ್ರಮ' ಚಿತ್ರಕ್ಕೆ ಆಕಾಂಕ್ಷಾ ಶರ್ಮಾ ಜೋಡಿಯಾಗಿ ಮಿಂಚಲಿದ್ದಾರೆ. ಕರ್ನಾಟಕದ ಸುಂದರ ಸ್ಥಳಗಳಾದ ಬೆಂಗಳೂರು, ಉಡುಪಿ, ಕೊಡಚಾದ್ರಿ, ತೀರ್ಥಹಳ್ಳಿ, ಸಾಗರದಲ್ಲಿ ಮೂರನೇ ಹಂತದ ಶೂಟಿಂಗ್​ ನಡೆದಿದ್ದು ನಾಲ್ಕನೇ ಹಂತದ ಚಿತ್ರೀಕರಣಕ್ಕಾಗಿ ರಾಜಸ್ಥಾನ ಹಾಗೂ ಜೋಧ್​ಪುರದಲ್ಲಿ  10 ದಿನಗಳಿಂದ ಸಾಂಗ್ ಹಾಗೂ ಕೆಲ ಸನ್ನಿವೇಶಗಳ ಶೂಟಿಂಗ್ ನಡೆಯುತ್ತಿದೆ. ನಾಯಕ ವಿಕ್ರಂ, ಬಾಲಿವುಡ್​ ನಟ ರೋಹಿತ್​ ರಾಯ್​, ನಟಿ ಆಕಾಂಕ್ಷ ಹಾಗೂ ಸಾಧುಕೋಕಿಲ ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದರು. ಇದಾದ ನಂತರ ಮುಖ್ಯ ಸನ್ನಿವೇಶಗಳ ಚಿತ್ರೀಕರಣವನ್ನು ಕಾಶ್ಮೀರದಲ್ಲಿ ಮಾಡಲಾಗುತ್ತದೆ.

ರವಿಚಂದ್ರನ್‌ ಪುತ್ರ ವಿಕ್ರಮ್‌ ಚಿತ್ರದ ಫಸ್ಟ್‌ಲುಕ್‌!

ಸಾಧುಕೋಕಿಲ- ಚಿಕ್ಕಣ್ಣ ಕಾಮಿಡಿ ಕಾಂಬಿನೇಷನ್

'ತ್ರಿವಿಕ್ರಮ'  ಪಕ್ಕಾ ಕಮರ್ಷಿಯಲ್ ಲವ್​ ಸ್ಟೋರಿ ಆಗಿದ್ದು ಪ್ರೇಕ್ಷಕರನ್ನು ನಕ್ಕು ನಗಿಸಲು ಸ್ಯಾಂಡಲ್​ವುಡ್​ ಕಾಮಿಡಿ ಕಿಂಗ್‌ಗಳಾದ  ಸಾಧುಕೋಕಿಲ ಹಾಗೂ ಯಂಗ್​ ಅಂಡ್​ ಎನರ್ಜಿಟಿಕ್​ ಚಿಕ್ಕಣ್ಣ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮೊದಲ ಭಾಗದಲ್ಲಿ  ಚಿಕ್ಕಣ್ಣ ಕಾಮಿಡಿ ಕಮಾಲ್​ ಮಾಡಿದ್ರೆ ಎರಡನೇ ಭಾಗದಲ್ಲಿ ಸಾಧು ಕೋಕಿಲ  ಮೋಡಿ ಮಾಡಲಿದ್ದಾರೆ.

'ತ್ರಿವಿಕ್ರಮ' ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್‌ಗೆ ಬಾಲಿವುಡ್ ನಟ ರೋಹಿತ್ ರಾಯ್ ವಿಲನ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?