ನಿಮ್ಮ ಬಯೋಪಿಕ್​ಗೆ ನಟ ಯಾರಾಗ್ಬೇಕು ಎಂಬ ಪ್ರಶ್ನೆಗೆ ಶಿವರಾಜ್​ ಕುಮಾರ್​ ಕೊಟ್ಟ ಉತ್ತರ ನೋಡಿ...

Published : Nov 19, 2024, 12:41 PM IST
ನಿಮ್ಮ ಬಯೋಪಿಕ್​ಗೆ ನಟ ಯಾರಾಗ್ಬೇಕು ಎಂಬ ಪ್ರಶ್ನೆಗೆ ಶಿವರಾಜ್​ ಕುಮಾರ್​ ಕೊಟ್ಟ ಉತ್ತರ ನೋಡಿ...

ಸಾರಾಂಶ

ನಟ ಶಿವರಾಜ್​  ಕುಮಾರ್​ ಅವರ ಜೀವನ ಚರಿತ್ರೆಯ ಸಿನಿಮಾ ಮಾಡುವುದಾದ್ರೆ ಅವರ ಪಾತ್ರ ಯಾರು ಮಾಡಬೇಕು ಎನ್ನುವ ಪ್ರಶ್ನೆಗೆ ನಟ ಕೊಟ್ಟ ಉತ್ತರ ಏನು?  

ಈಗ ಸಾಮಾನ್ಯವಾಗಿ ಸೆಲೆಬ್ರಿಟಿಗಳ ಬಯೋಪಿಕ್ ಮಾಡುವುದು ಸಹಜ. ಇದಾಗಲೇ ಸಿನಿಮಾ, ಕ್ರಿಕೆಟ್, ರಾಜಕಾರಣ​ ಸೇರಿದಂತೆ ವಿಭಿನ್ನ ಕ್ಷೇತ್ರಗಳ ಸೆಲೆಬ್ರಿಟಿಗಳ ಬಯೋಪಿಕ್​ ಬಿಡುಗಡೆಗೊಂಡಿದ್ದು, ಇನ್ನೂ ​ಕೆಲವು ಬಿಡುಗಡೆಯ ಹಂತದಲ್ಲಿವೆ. ಹಾಗೆಂದು ಯಾವುದೇ ನಟ ಅಥವಾ ಸೆಲೆಬ್ರಿಟಿಯ ಪಾತ್ರವನ್ನು ಮಾಡುವ ನಟ-ನಟಿಯರು ಅವರನ್ನೇ ಅನುಕರಿಸುವುದು ಸುಲಭದ ಮಾತೇನೂ ಅಲ್ಲ. ಅವರ ಹಾವ-ಭಾವ, ನಡೆಯುವ ಸ್ಟೈಲ್​, ಅವರ ಮಾತು, ಅವರ ನಡೆ-ನುಡಿ ಎಲ್ಲವನ್ನೂ ಅನುಸರಿಸಬೇಕು. ಆದರೂ ಕೆಲವೊಂದು ನಟ-ನಟಿಯರು ಇದರಲ್ಲಿ   ಭೇಷ್​ ಎನ್ನಿಸಿಕೊಂಡದ್ದೂ ಇದೆ. ಇದರ ನಡುವೆಯೇ, ನಟ ಶಿವರಾಜ್​ ಕುಮಾರ್​ ಅವರ ಬಯೋಪಿಕ್​ ಮಾಡುವ ಯೋಚನೆಯೂ ಕೆಲವು ನಿರ್ದೇಶಕರಿಗೆ ಬಂದಿರಲಿಕ್ಕೆ ಸಾಕು. ಹಾಗಿದ್ದರೆ ಇವರ ಜೀವನ ಚರಿತ್ರೆಯ ಸಿನಿಮಾ ಏನಾದ್ರೂ ಆದ್ರೆ ಶಿವರಾಜ್​ ಕುಮಾರ್​ ಆಗಿ ಯಾವ ನಟ ನಟಿಸಬೇಕು ಎನ್ನುವ ಪ್ರಶ್ನೆಯನ್ನು ಖುದ್ದು ಶಿವಣ್ಣ ಅವರಿಗೇ ಕೇಳಲಾಗಿದೆ.

ಅಷ್ಟಕ್ಕೂ,  ಶಿವರಾಜ್‌ಕುಮಾರ್‌ ಅವರ ನಟನೆಯ ‘ಭೈರತಿ ರಣಗಲ್‌’ ಬಿಡುಗಡೆಯಾಗಿದ್ದು, ಚೆನ್ನಾಗಿ ಓಡುತ್ತಿದೆ.  ಮಫ್ತಿ ಚಿತ್ರದ ನಂತರದ ಭೈರತಿ ರಣಗಲ್ ಚಿತ್ರದ ಮೇಲೆ ಬಹು ನಿರೀಕ್ಷೆ ಹೊಂದಿರುವ ಅವರು, ಈ ಚಿತ್ರದ  ಮೂಲಕ ತಮ್ಮ 127 ಚಿತ್ರಗಳ ಮೈಲಿಗಲ್ಲನ್ನು ತಲುಪಿದ್ದಾರೆ. ಭೈರತಿ ರಣಗಲ್ ಚಿತ್ರವನ್ನು ನರ್ತನ್ ನಿರ್ದೇಶಿಸಿದ್ದಾರೆ.   ಇದು ಶಿವರಾಜ್‌ ಅವರ ಮಫ್ತಿ ಚಿತ್ರದ ಪ್ರೀಕ್ವೆಲ್ ಚಿತ್ರವಾಗಿದೆ.  ಭೈರತಿ ರಣಗಲ್ ಚಿತ್ರದಲ್ಲಿ ರುಕ್ಮಿಣಿ ವಸಂತ್ ಇದ್ದಾರೆ. ಅಮೃತಧಾರೆ ಖ್ಯಾತಿಯ ಭೂಮಿಕಾ ಅಂದರೆ ಛಾಯಾ ಸಿಂಗ್ ಕೂಡ ನಟಿಸಿದ್ದಾರೆ. ಇದರ ನಡುವೆಯೇ, ಶಿವರಾಜ್‌ ಕುಮಾರ್‌ ಅವರು ಜಾಹೀರಾತು, ರಿಯಾಲಿಟಿ ಷೋಗಳಲ್ಲಿಯೂ ಬ್ಯುಜಿ ಆಗಿದ್ದಾರೆ. ಇದಾಗಲೇ ಕೆಲವು ಜಾಹೀರಾತುಗಳಿಗೆ ಶಿವಣ್ಣ ರಾಯಭಾರಿಯಾಗಿದ್ದರೆ, ಡಾನ್ಸ್‌ ರಿಯಾಲಿಟಿ ಷೋನಲ್ಲಿ ತೀರ್ಪುಗಾರರಾಗಿದ್ದಾರೆ.  

ಅಪ್ಪಾಜಿಯನ್ನು ನಾನು ಎಂದಿಗೂ ಅನುಕರಿಸಲ್ಲ... ಆದರೆ... ಶಿವರಾಜ್​ಕುಮಾರ್​ ಓಪನ್​ ಮಾತು

ಇದರ ನಡುವೆ ಅವರು ಕೀರ್ತಿ ನಾರಾಯಣ್​ ಅವರ ಚಾಟ್​ ಷೋನಲ್ಲಿ ಕಾಣಿಸಿಕೊಂಡಿದ್ದು, ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಆಗ ಕೀರ್ತಿ ಅವರು ಶಿವರಾಜ್​  ಕುಮಾರ್​ ಅವರ ಬಯೋಪಿಕ್​ ಮಾಡುವುದಾದರೆ, ನಿಮ್ಮ ಪಾತ್ರದಲ್ಲಿ ಯಾರನ್ನು ನೋಡಲು ಇಷ್ಟಪಡುತ್ತೀರಿ ಎಂದು ಕೇಳಿದಾಗ, ಶಿವರಾಜ್​ ಕುಮಾರ್​ ಒಂದು ಸೆಕೆಂಡ್​ ಕೂಡ ಯೋಚಿಸಿದರೆ, ನಾನೇ ಮಾಡಬೇಕು ಎಂದು ಹೇಳಿ ನಕ್ಕಿದ್ದಾರೆ. ಅಂದರೆ, ತಮ್ಮ ಜೀವನ ಚರಿತ್ರೆ ಮಾಡುವುದಾದರೆ ಅದಕ್ಕೆ ತಾವೇ ಸರಿಸಾಟಿ ಎಂದು ಹೇಳಿದ್ದಾರೆ. ಅದೇ ವೇಳೆ ನಿಮಗೆ 24 ಗಂಟೆ ಸಾಲುವುದಿಲ್ಲ ಎಂದು ಕೆಲವರು ಹೇಳ್ತಾರೆ. ಅಪ್ಪಿ- ತಪ್ಪಿ ಒಂದು ದಿನಕ್ಕೆ ಇನ್ನಾರು ಗಂಟೆ ಹೆಚ್ಚಿಗೆ ಆದ್ರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದಾಗ ಶಿವರಾಜ್​ ಅವರು ಇನ್ನೊಂದು ಸಿನಿಮಾ ಮಾಡ್ತೀನಿ ಎಂದು ಹೇಳಿ ನಗಿಸಿದ್ದಾರೆ. ಶಿವರಾಜ್ ಕುಮಾರ್​ ಅವರ ಕೂದಲು ಮುಟ್ಟುವ ಅಧಿಕಾರ ಯಾರಿಗೆ ಇದೆ ಎಂದು ಪ್ರಶ್ನಿಸಿದಾಗ, ಅವರು ಉಪೇಂದ್ರ ಅವರ ಹೆಸರನ್ನು ಹೇಳಿದ್ದಾರೆ. 

ಇದಕ್ಕೂ ಮುನ್ನ ಇನ್ನೊಂದು ವಿಡಿಯೋದಲ್ಲಿ, ನಟ ಶಿವರಾಜ್​ ಅವರು, ತಮ್ಮ ತಂದೆ ಡಾ.ರಾಜ್​ಕುಮಾರ್​ ಅವರ ಆದರ್ಶ, ಅವರ ಜೀವನ ಶೈಲಿ ಇತ್ಯಾದಿಗಳ ಕುರಿತು ಹೇಳಿದ ಪ್ರಶ್ನೆಗಳಿಗೂ ಉತ್ತರಿಸಿದ್ದರು. ಅನುಕರಣೆಯ ವಿಷಯ ಬಂದಾಗ, ನಾನು ನನ್ನ ತಂದೆಯನ್ನು ಅನುಕರಿಸಲು ಸಾಧ್ಯವೇ ಇಲ್ಲ. ಅವರ ಜೀವನ ಕ್ರಮವನ್ನು ಅನುಸರಿಸಬಹುದು ಅಷ್ಟೇ. ಮಾತ್ರವಲ್ಲದೇ ಅವರಿಂದ ಜೀವನ ಮೌಲ್ಯಗಳನ್ನು ಕಲಿಯುತ್ತೇನೆ. ಆದರೆ ಅವರ ಉಡುವ ಪಂಚೆ... ಇತ್ಯಾದಿಗಳನ್ನು ನಾನು ಅನುಕರಿಸಲು ಸಾಧ್ಯವಿಲ್ಲ.  ಏಕೆಂದರೆ ಅದು ರಾಜ್​ಕುಮಾರ್​ ಅವರಿಗೆ ಮಾತ್ರ ಸೀಮಿತ. ನನ್ನನ್ನು ನೀವು ರಾಜ್​ಕುಮಾರ್​ ಮಾಡಬೇಡಿ. ಆದರೆ ಅವರ ಹೆಸರು ನನ್ನ ಜೊತೆ ಇದೆ. ಅದೇ ನನಗೆ ಸಾಕು ಎಂದು ಹೇಳಿದ್ದರು.   ಅಮಿತಾಭ್​ ಬಚ್ಚನ್​ ಮತ್ತು ಕಮಲ ಹಾಸನ್​ ಅವರ ಫ್ಯಾನ್​ ಕೂಡ ನಾನು. ಅವರ ನಟನೆ, ಸ್ಟೈಲ್​ಗೆ  ಫಿದಾ ಆಗಿದ್ದೇನೆ. ಹಾಗಂತ ಅವರನ್ನೂ ನಾನು ಅನುಕರಣೆ ಮಾಡಲು ಆಗುವುದಿಲ್ಲ.  ಏಕೆಂದ್ರೆ ಅವ್ರು ನನ್ನ ಬಾಸ್​​ ಅಷ್ಟೇ. ಅದಕ್ಕಾಗಿ ನನ್ನ ಸ್ಟೈಲೇ ಬೇರೆ. ನನ್ನ ಅಟಿಟ್ಯೂಡ್​ ಬೇರೆಯದ್ದೇ ಆಗಿರುತ್ತದೆ. ಆದ್ದರಿಂದ ಯಾರನ್ನೂ ನಾನು ಅನುಕರಿಸಲು ಆಗುವುದಿಲ್ಲ ಎಂದು ಹೇಳಿದ್ದರು. 

ನಾನೊಬ್ಬ ದೊಡ್ಡ ಕುಡುಕ ಎನ್ನುತ್ತಲೇ ಡ್ರಿಂಕ್ಸ್‌ ಮಿಕ್ಸಿಂಗ್‌ ಬಗ್ಗೆ ರಿವೀಲ್‌ ಮಾಡಿದ ಶಿವರಾಜ್‌ಕುಮಾರ್‌: ವಿಡಿಯೋ ವೈರಲ್‌!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?