ಮೆಟ್ಟು ಮೇಲ್ಗಡೆ ಇಟ್ಟು ಇಳೀರಿ, ಗಂಗಮ್ಮ ತಾಯಿಗ್ ಹಿಂಗೆಲ್ಲಾ ಮಾಡ್ಬಾರ್ದು; ಶಾಕ್ ಆಗಿದ್ರಂತೆ ಡಾ ರಾಜ್‌!

Published : Jun 16, 2024, 08:07 PM ISTUpdated : Jun 16, 2024, 08:18 PM IST
ಮೆಟ್ಟು ಮೇಲ್ಗಡೆ ಇಟ್ಟು ಇಳೀರಿ, ಗಂಗಮ್ಮ ತಾಯಿಗ್ ಹಿಂಗೆಲ್ಲಾ ಮಾಡ್ಬಾರ್ದು; ಶಾಕ್ ಆಗಿದ್ರಂತೆ ಡಾ ರಾಜ್‌!

ಸಾರಾಂಶ

ಇಂದು ಡಾ ರಾಜ್‌ಕುಮಾರ್ ಅವರು ನಮ್ಮೊಂದಿಗಿಲ್ಲ. ಆದರೆ, ಅವರ ಸರಳತನ, ವಿನಯವಂತಿಕೆ ಹಾಗೂ ಅವರು ಹಾಕಿ ಕೊಟ್ಟ ದಾರಿ ನಮ್ಮ ಜೊತೆಗಿದೆ. ರಂಗಭೂಮಿಯಿಂದ ಸಿನಿಮಾ ನಟನೆಗೆ ಬಂದು..

ಡಾ ರಾಜ್‌ಕುಮಾರ್ (Dr Rajkumar) ಹಾಗು ತಿಪಟೂರು ರಾಮಸ್ವಾಮಿ (Thipaturu Ramaswamy) ಅವರಿಬ್ಬರ ಸ್ನೇಹ ತುಂಬಾ ಚೆನ್ನಾಗಿತ್ತು. ಅವರಿಬ್ಬರೂ ಎಲ್ಲೋ ಹೋಗುತ್ತಿರುವಾಗ ಡಾ ರಾಜ್‌ಕುಮಾರ್ ಅವರಿಗೆ ಕುರಿ ಕಾಯುತ್ತಿರುವ ಹುಡುಗನೊಬ್ಬ ಗುರು ಆಗಿರುವ ಸಂದರ್ಭ ಬಂದಿದೆ. ಡಾ ರಾಜ್‌ಕುಮಾರ್ ಅವರಿಗೆ ತುಂಬಾ ಬಾಯಾರಿಕೆ ಆಗಿತ್ತಂತೆ. ದಾರಿಯಲ್ಲಿ ಇದ್ದ ಬಾವಿಯನ್ನು ಕಂಡು ಹೋಗುತ್ತಿದ್ದ ರಾಜ್‌ಕುಮಾರ್ ಅವರು ಕಾರು ನಿಲ್ಲಿಸಿ ಆ ಬಾವಿಯ ಬಳಿಗೆ ಹೋಗುತ್ತಾರೆ. ಆಗ ಇದ್ದಕ್ಕಿದ್ದಂತೆ ಆ ಕುರಿಕಾಯುವ ಹುಡುಗ ಡಾ ರಾಜ್‌ಕುಮಾರ್ ಅವರಿಗೆ ಬೈಯಲು ಶುರು ಮಾಡಿದನಂತೆ.

ಕುರಿ ಕಾಯುವ ಹುಡುಗ ಒಂದೇ ಸವನೆ ಬೈಯಲು ಶುರು ಮಾಡಲು, ಡಾ ರಾಜ್‌ಕುಮಾರ್ ಅವರು ಅವಾಕ್ಕಾದರಂತೆ. 'ನಿಮಗೇನೂ ಮೈಮೇಲೆ ಜ್ಞಾನವಿಲ್ವಾ? ಮೆಟ್ಟು (ಚಪ್ಪಲಿ) ಹಾಕ್ಕೊಂಡೇ ಬಾವಿ ಹತ್ತಿರ ಹೋಗ್ತಾ ಇದೀರ? ಯಾರಾದ್ರೂ ಮೆಟ್ಟು ಹಾಕ್ಕೊಂಡು ಬಾವಿ ಒಳಗೆ ಇಳಿತಾರಾ? ದೂರ, ಮೆಟ್ಟು ಮೇಲ್ಗಡೆ ಇಟ್ಟು, ಬಾವಿ ಒಳಗೆ ಹೋಗಿ ನೀರು ಕುಡಿರಿ' ಅಂದನಂತೆ. ಗಂಗಮ್ಮ ತಾಯಿಗ್ ಹಿಂಗೆಲ್ಲಾ ಮಾಡ್ಬಾರ್ದು' ಅಂದನಂತೆ. 

ಹತ್ತು ಎಕರೆ ಬೇಕಾ, ಜನಕ್ಕೆ ಉಪಯೋಗ ಆಗುತ್ತಾ, ನಾನೇ ಕೊಡ್ತೀನಿ; ರಾಕಿಂಗ್ ಸ್ಟಾರ್ ಯಶ್!

ಡಾ ರಾಜ್‌ಕುಮಾರ್ ಜೊತೆಯಲ್ಲಿದ್ದ ರಾಮಸ್ವಾಮಿಯವರು ನೀನು ಬೈದಿರೋದು ಡಾ ರಾಜ್‌ಕುಮಾರ್ ಅವ್ರಿಗೆ ಅಂತ ಹೇಳೋಕೆ ಹೋದರಂತೆ. ಆದ್ರೆ, ಅಣ್ಣಾವ್ರು ಅವ್ರನ್ನ ತಡೆದು ಬೇಡ ಅಂದರಂತೆ. ಜೊತೆಗೆ, ಆ ಕುರಿ ಕಾಯುವ ಹುಡಗನಿಗೆ 'ತಪ್ಪಾಯ್ತು ಕಂದಾ' ಎಂದು ಹೇಳಿದ್ದರಂತೆ. ಅಷ್ಟೇ ಅಲ್ಲ, ಜತೆಗಿದ್ದ ರಾಮಸ್ವಾಮಿ ಅವರಿಗೆ 'ಆ ಕುರಿ ಕಾಯೋ ಹುಡುಗ ನಂಗೆ ಗುರು ಆಗ್ಬಿಟ್ಟ' ಅಂತ ಹೇಳಿದ್ರಂತೆ. ಅಷ್ಟೇ ಅಲ್ಲ, ಆಗಾಗ ಆ ಘಟನೆ ನೆನಪಿಸಿಕೊಂಡು ಸಿಕ್ಕವರೆದುರು ಆ ಕುರಿಕಾಯುವ ಹುಡುಗ ತಮಗೆ ಗುರುವಾಗಿದ್ದರ ಬಗ್ಗೆ ಹೇಳುತ್ತಿದ್ದರಂತೆ. 

ಅಮ್ಮನಿಗೆ ಅಪ್ಪಂದಿರ ದಿನದ ಶುಭಾಶಯ ತಿಳಿಸಿದ ಪವಿತ್ರಾ ಗೌಡ ಮಗಳು

ಅಂದಹಾಗೆ, ಇಂದು ಡಾ ರಾಜ್‌ಕುಮಾರ್ ಅವರು ನಮ್ಮೊಂದಿಗಿಲ್ಲ. ಆದರೆ, ಅವರ ಸರಳತನ, ವಿನಯವಂತಿಕೆ ಹಾಗೂ ಅವರು ಹಾಕಿ ಕೊಟ್ಟ ದಾರಿ ನಮ್ಮ ಜೊತೆಗಿದೆ. ರಂಗಭೂಮಿಯಿಂದ ಸಿನಿಮಾ ನಟನೆಗೆ ಬಂದು ಅವರು ಎರಡು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡದ ಮೇರು ನಟ ಎನಿಸಿಕೊಂಡಿದ್ದೇ ಒಂದು ಅಚ್ಚರಿ. ಅವರು ಮಾಡಿದ ಸಿನಿಮಾಗಳೂ ಅಷ್ಟೇ, ಸಾಕಷ್ಟು ಜನರ ಜೀವನವನ್ನು ಒಳ್ಳೇ ದಾರಿಯಲ್ಲಿ ಸಾಗುವಂತೆ ಮಾಡಿದ್ದವು. ಬಂಗಾರದ ಮನುಷ್ಯ ಚಿತ್ರವು ಅದಕ್ಕೊಂದು ಅತ್ಯುತ್ತಮ ಉದಾಹರಣೆ. 

ಈ ಎರಡೇ ಸಂಗತಿಗಳು ನೀವೇನು ಎಂಬುದನ್ನು ಜಗತ್ತಿಗೆ ಹೇಳುತ್ತವೆ; ನಟ ದಳಪತಿ ವಿಜಯ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ