ಮತ್ತುರಾಜ್‌ಗೆ ಸರಿಯಾಗಿಯೇ ಬಾರಿಸಿದ್ದ ಬಾಲಣ್ಣ, ಹೊಡೆತ ತಿಂದ ಡಾ ರಾಜ್‌ ಮಾಡಿದ್ದೇನು?

Published : Nov 13, 2024, 11:32 AM ISTUpdated : Nov 13, 2024, 12:20 PM IST
ಮತ್ತುರಾಜ್‌ಗೆ ಸರಿಯಾಗಿಯೇ ಬಾರಿಸಿದ್ದ ಬಾಲಣ್ಣ, ಹೊಡೆತ ತಿಂದ ಡಾ ರಾಜ್‌ ಮಾಡಿದ್ದೇನು?

ಸಾರಾಂಶ

ಮುತ್ತುರಾಜ್ ಅವರು ಚಿತ್ರರಂಗಕ್ಕೆ ಬಂದು ಡಾ ರಾಜ್‌ಕುಮಾರ್ ಆಗಿ ಬದಲಾದರು. ಹಿರಿಯ ನಟ ಬಾಲಣ್ಣ ಜೊತೆಗೆ ಡಾ ರಾಜ್‌ ಅವರು ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಬ್ಬರ ಸಂಬಂಧ...  ತಾವು ದೊಡ್ಡ ಸ್ಟಾರ್ ನಟರಾಗಿ ಬೆಳೆದ ಡಾ ರಾಜ್‌ಕುಮಾರ್ ಅವರು.. 

ಅದೊಂದು ದಿನ (ಮುತ್ತುರಾಜ್) ಡಾ ರಾಜ್‌ಕುಮಾರ್ (Dr Rajkumar) ಜ್ವರ ಬಂದು ಮಲಗಿಬಿಟ್ಟಿದ್ದರು. ಮುತ್ತುರಾಜ್ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಿಯವರು ವಿಚಾರಿಸಲಾಗಿ ಮುತ್ತುರಾಜ್ ಅವರ ಗುರುಗಳಾದ ಬಾಲಣ್ಣ (ಹಿರಿಯ ನಟ ಬಾಲಕೃಷ್ಣ) ಅವರಿಂದ ಹೊಡೆತ ತಿಂದಿದ್ದರು. ಕಾರಣ, ಪುಟ್ಟಸ್ವಾಮಿಯವರು ಮಗ ಮುತ್ತುರಾಜನಿಗೆ ಶಿಕ್ಷಣ ಕೊಡಿಸಲು ಬಾಲಣ್ಣ (Senior Actor Balakrishna) ಅವರನ್ನು ನಿಯಮಿಸಿದ್ದರು. ಆದರೆ, ಮುತ್ತುರಾಜನಿಗೆ ಶಾಲಾಶಿಕ್ಷಣ ತಲೆಗೆ ಹತ್ತುತ್ತಿರಲಿಲ್ಲ. ಹೀಗಾಗಿ ಬಾಲಣ್ಣ ಸರಿಯಾಗಿಯೇ ಭಾರಿಸಿದ್ದರು. 

ತಂದೆಯಾದ ಪುಟ್ಟಸ್ವಾಮಿಯವರು ಬಳಿಕ ಬಾಲಣ್ಣ ಅವರ ಬಳಿ ಬಂದು, 'ಮಗ ಮುತ್ತುರಾಜ್ ನಿಮ್ಮ ಹೊಡೆತ ತಾಳಲಾರದೇ ಜ್ವರ ಬಂದು ಮಲಗಿಬಿಟ್ಟಿದ್ದಾನೆ. ಚಿಕ್ಕ ಮಗು, ಹೊಡೆತ ತಾಳಲಾಗದು' ಎಂದು ಅಪ್ಪನ ಸಹಜ ಮಮತೆಯಿಂದ ಹೇಳಿಕೊಂಡಿದ್ದರು. ಆದರೆ, ಅಂದು ಎಲ್ಲಾ ಪೋಷಕರು ತಮ್ಮತಮ್ಮ ಮಕ್ಕಳ ಶಿಕ್ಷಣದ ಸಲುವಾಗಿ ಗುರುಗಳ ಬಳಿ 'ನೀವು ಅದೇನು ಶಿಕ್ಷೆ ಕೊಟ್ಟರೂ ಪರವಾಗಿಲ್ಲ, ನಮ್ಮ ಮಕ್ಕಳಿಗೆ ಶಿಕ್ಷಣ ಹೇಳಿಕೊಡಿ' ಎಂದೇ ಹೇಳುತ್ತಿದ್ದುದು ಎಲ್ಲರಿಗೂ ಗೊತ್ತು. ಅದೇ ರೀತಿ ಬಾಲಣ್ಣ-ಮುತ್ತುರಾಜ್ ವಿಷಯದಲ್ಲೂ ಆಗಿತ್ತು. 

ಡಾ ರಾಜ್‌ ವಿರುದ್ಧ ಪಾತ್ರ ಮಾಡಿದ್ದಕ್ಕೆ ನನ್ನ ಕೆರಿಯರ್‌ಗೇ ಏಟು ಬಿತ್ತು; ವಿಷ್ಣುಗೂ ಇದೇ ಗತಿಯಾಗಿತ್ತಾ?!

ಆದರೆ, ಬಳಿಕ ಮುತ್ತುರಾಜ್ ಅವರು ಚಿತ್ರರಂಗಕ್ಕೆ ಬಂದು ಡಾ ರಾಜ್‌ಕುಮಾರ್ ಆಗಿ ಬದಲಾದರು. ಹಿರಿಯ ನಟ ಹಾಗೂ ತಮ್ಮ ಗುರುಗಳಾದ ಬಾಲಣ್ಣ ಜೊತೆಗೆ ಡಾ ರಾಜ್‌ ಅವರು ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಬ್ಬರ ಗುರು-ಶಿಷ್ಯರ ಸಂಬಂಧ ಹಾಗೇ ಉಳಿದಿತ್ತು. ತಾವು ದೊಡ್ಡ ಸ್ಟಾರ್ ನಟರಾಗಿ ಬೆಳೆದರೂ ಕೂಡ ಡಾ ರಾಜ್‌ಕುಮಾರ್‌ ಅವರು ಬಾಲಣ್ಣನ ಬಗ್ಗೆ ಅದೇ ಗೌರವ ಹೊಂದಿದ್ದರು. ಹಾಗೇ, ಬಾಲಣ್ಣ ಕೂಡ ರಾಜ್ ಅವರನ್ನು ಕೊನೆಯವರೆಗೂ ಪ್ರೀತಿಆದರದಿಂದ ನೋಡಿಕೊಂಡಿರಂತೆ. 

ಡಾ ರಾಜ್‌ಕುಮಾರ್ ಹಾಗು ಬಾಲಣ್ಣ ಅವರ ಜೊತೆಗೆ ಅಂದು ವಜ್ರಮುನಿ, ತೂಗುದೀಪ ಶ್ರೀನಿವಾಸ್, ಶಿವರಾಮು, ಕೆ ಎಸ್ ಅಶ್ವಥ್ ಮುಂತಾದವರು ಸಹ ಜತೆಗಿದ್ದು ಒಳ್ಳೆಯ ಸ್ನೇಹಿತರಾಗಿದ್ದರು. ಡಾ ರಾಜ್‌ಕುಮಾರ್ ಅವರು ಬಾಲಣ್ಣನ ನಿರ್ಮಾಣ ಸಂಸ್ಥೆಯ ಮೂಲಕ ಮೊಟ್ಟಮೊದಲ 'ಮಾರ್ಗದರ್ಶಿ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಒಮ್ಮೆ ಬಾಲಣ್ಣ, ಡಾ ರಾಜ್‌ಕುಮಾರ್ ಹಾಗೂ ಉಳಿದ ಕೆಲವರು ಸೇರಿ ಚಿತ್ರವೊಂದಕ್ಕೆ ನಿರ್ಮಾಪಕರಾಗಿಯೂ ಜೊತೆಯಾಗಿದ್ದರು. 

ನಾನೂ ಕನ್ನಡದ ನಟನೇ, ಡಾ ರಾಜ್‌ಕುಮಾರ್ ಏನೆಂದು ನನಗೂ ಗೊತ್ತು: ಹೇಳಿದ್ರು ವಿಷ್ಣುವರ್ಧನ್!

ಬಾಲಣ್ಣ ಅವರು ನಿರ್ಮಾಪಕರಾಗಿ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾಗ ಡಾ ರಾಜ್ ಸಹಾಯ ಮಾಡಿದ್ದರು. ಅಂದು ತಮ್ಮ ನಿರ್ಮಾಣ ಸಂಸ್ಥೆಯನ್ನು ನಡೆಸುತ್ತಿದ್ದ ಪತ್ನಿ ಪಾರ್ವತಮ್ಮ ಬಳಿ ಹೇಳಿ ಡಾ ರಾಜ್‌ಕುಮಾರ್ ಅವರು ಬಾಲಣ್ಣನಿಗೆ ತಮ್ಮ ಚಿತ್ರಗಳಲ್ಲಿ ಪಾತ್ರ ಕೊಡಿಸುತ್ತಿದ್ದರಂತೆ. ಅವರಿಬ್ಬರ ಸಂಬಂಧ ಅದೆಷ್ಟು ಚೆನ್ನಾಗಿತ್ತು ಎಂದರೆ, ಬಾಲಣ್ಣನನ್ನು ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ ಡಾ ರಾಜ್‌ಕುಮಾರ್ ಅವರು ಸಿದ್ಧಲಿಂಗಯ್ಯ ಸೇರಿದಂತೆ ಹಲವರ ವಿರೋಧ ಕಟ್ಟಿಕೊಂಡ ಸಂದರ್ಭ ಕೂಡ ಒದಗಿಬಂದಿತ್ತು ಎನ್ನಲಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ