ಹುಂಬತನ ಬಿಡಿ, ಮಾಸ್ಕ್ ಧರಿಸಿ ಓಡಾಡಿ; ಜಗ್ಗೇಶ್ ಕಳಕಳಿಯ ಮನವಿ

Published : Jun 30, 2020, 06:41 PM IST
ಹುಂಬತನ ಬಿಡಿ, ಮಾಸ್ಕ್ ಧರಿಸಿ ಓಡಾಡಿ; ಜಗ್ಗೇಶ್ ಕಳಕಳಿಯ ಮನವಿ

ಸಾರಾಂಶ

ಕರೋನಾ ವಿರುದ್ಧ ಸಮರ/ ಸೋಶಿಯಲ್ ಮೀಡಿಯಾ ಮೂಲಕ ಮಾತನಾಡಿದ ಜಗ್ಗೇಶ್/ ಕೊರೋನಾ ಸಕಲ ಮುನ್ನೆಚ್ಚರಿಕೆ ತೆಗೆದುಕೊಳ್ಳಿ/ ನವರಸ ನಾಯಕನ ಮನವಿ

ಬೆಂಗಳೂರು(ಜೂ.  30)  ನವರಸ ನಾಯಕ ಜಗ್ಗೇಶ್ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮುಂದೆ ಬಂದು ಒಂದಿಷ್ಟು ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದಾರೆ.

ಕೊರೊನಾ ಲಾಕ್ ಡೌನ್ ದಿನಗಳು ನಮ್ಮನ್ನ ನಾವು ಅರ್ಥ ಮಾಡಿಕೊಳ್ಳಲು ದೇವರು ಕೊಟ್ಟ ದಿನ. ಸಕಾರಾತ್ಮಕವಾಗಿ ಚಿಂತಿಸಿ. ಇರೋದನ್ನ ಸೇವಿಸಿ ನನಗೆ ಏನೂ ಆಗೋಲ್ಲ ಅಂತ ಮಾಸ್ಕ್ ಧರಿಸದೇ ಹೊರಗೆ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಅಂತರ್ ಜಿಲ್ಲಾ ಸಂಚಾರಕ್ಕೆ ಬ್ರೇಕ್ ಬೀಳುತ್ತಾ?

ಸ್ಯಾನಿಟೈಸರ್ ಬಳಸೋದನ್ನ ಮರೀಲೇಬೇಡಿ. Don’t Risk Your Life ಎಂದು ಕೇಳಿಕೊಂಡಿದ್ದಾರೆ.  ರಾಹು ಮತ್ತು ಕೇತು ಕೆಟ್ಟ ಪರಸ್ಥಿತಿಯಲ್ಲಿದ್ದಾರೆ. ಇದೇ ರೀತಿ 30 ವರ್ಷದ ಹಿಂದೆ ಕಾವೇರಿ ಗಲಭೆ ಆಗಿತ್ತು. ಈಗ ಕೊರೊನಾ ಬಂದಿದೆ ಎಂದಿದ್ದಾರೆ.

ಚೀನಾ ಕೊಟ್ಟ ಕೊರೊನಾ ಮನುಕುಲವನ್ನೆ ಸರ್ವ ನಾಶ ಮಾಡುತ್ತಿದೆ. ಭಯ ಬೇಡ ಸುರಕ್ಷಿತವಾಗಿರೋಣ. ಚೀನಾ ವಸ್ತುಗಳನ್ನ ತ್ಯಜಿಸೋಣ. ಮುಂದಿನ ವರ್ಷ ಜನವರಿಯಿಂದ ಹೊಸ ಜೀವನ ಆರಂಭಿಸೋಣ, ಆಶಾ ಭಾವನೆ ಅಲ್ಲಿಯೇ ಇರೋಣ ಎಂದು ಕೇಳಿಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್