ದರ್ಶನ್ ಭೇಟಿಯಾಗಿ ಗುರುರಾಯರ ಪ್ರಸಾದ ಕೊಟ್ಟ ರಚಿತಾ ರಾಮ್

Published : Aug 23, 2024, 07:19 AM IST
ದರ್ಶನ್ ಭೇಟಿಯಾಗಿ ಗುರುರಾಯರ ಪ್ರಸಾದ ಕೊಟ್ಟ ರಚಿತಾ ರಾಮ್

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ತೂಗುದೀಪ ಅವರನ್ನು ನಟಿ ರಚಿತಾ ರಾಮ್ ಭೇಟಿಯಾಗಿ ಗುರುವಾರ ಕುಶಲೋಪರಿ ವಿಚಾರಿಸಿದ್ದಾರೆ. ಇದೇ ವೇಳೆ ರಾಯರ ಆರಾಧನೆ ಇರುವ ಕಾರಣ ರಾಘವೇಂದ್ರ ಸ್ವಾಮಿಗಳ ಪ್ರಸಾದ ನೀಡಿದ್ದಾರೆ.

Rachita ram met actor Darshan ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ತೂಗುದೀಪ ಅವರನ್ನು ನಟಿ ರಚಿತಾ ರಾಮ್ ಭೇಟಿಯಾಗಿ ಗುರುವಾರ ಕುಶಲೋಪರಿ ವಿಚಾರಿಸಿದ್ದಾರೆ. ಇದೇ ವೇಳೆ ರಾಯರ ಆರಾಧನೆ ಇರುವ ಕಾರಣ ರಾಘವೇಂದ್ರ ಸ್ವಾಮಿಗಳ ಪ್ರಸಾದ ನೀಡಿದ್ದಾರೆ.

ದರ್ಶನ್‌(Actor darshan) ಭೇಟಿಗೆ ಜೈಲಧಿಕಾರಿಗಳ ಅನುಮತಿ ಪಡೆದಿದ್ದ ಅವರು, ಅಂತೆಯೇ ದರ್ಶನ್‌ ಆಪ್ತ, ಮಂಡ್ಯ ಜಿಲ್ಲೆ ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ ಜತೆ ಜೈಲಿಗೆ ತೆರಳಿ ತಮ್ಮ ಗುರುವನ್ನು ಭೇಟಿ ಆದರು.]

ಶ್ರೀನಗರ ಕಿಟ್ಟಿ ಮುಂದೆ ಲೇಡಿ ವಿಲನ್ ಆಗಿ ಅಬ್ಬರಿಸಲಿದ್ದಾರೆ ಹಾಟ್ ಬ್ಯೂಟಿ ರಾಗಿಣಿ: ರಚಿತಾ ರಾಮ್‌ಗೆ ಭಯ ಶುರುವಾಗುತ್ತಾ?

ಚಿತ್ರರಂಗಕ್ಕೆ ರಚಿತಾ(Actress rachita ram)ರನ್ನು ದರ್ಶನ್ ಪರಿಚಯಿಸಿದ್ದರು. ಈ ಹತ್ಯೆ ಪ್ರಕರಣದಲ್ಲಿ ಬಂಧನವಾದಾಗ ದರ್ಶನ್‌ ಬೆಂಬಲಕ್ಕೆ ನಿಂತಿದ್ದ ರಚಿತಾ ಅವರು, ದರ್ಶನ್‌ ಅವರನ್ನು ತಮ್ಮ ಗುರು ಎಂದು ಹೇಳಿದ್ದರು.

ಇನ್ನು ತಮ್ಮ ಗುರುವಿನ ಭೇಟಿಗೂ ಮುನ್ನ ರಾಯರ ಆರಾಧನೆ ನಿಮಿತ್ತ ಪೂರ್ಣಪ್ರಜ್ಞ ಲೇಔಟ್‌ನಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿದ್ದ ರಚಿತಾ ಅಲ್ಲಿ ಸ್ವೀಕರಿಸಿದ್ದ ಪ್ರಸಾದವನ್ನು ಜೈಲಲ್ಲಿ ದರ್ಶನ್‌ಗೆ ಕೊಟ್ಟರು ಎಂದು ತಿಳಿದು ಬಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?