ಕುಂದಾಪುರ ಕೆರಾಡಿಯ ಪ್ರಕೃತಿ ಮಡಿಲಲ್ಲಿ ಪುತ್ರ ರಣ್ವಿತ್‌ ಹುಟ್ಟು ಹಬ್ಬ ಆಚರಿಸಿದ ರಿಷಬ್‌!

By Kannadaprabha NewsFirst Published Apr 9, 2020, 8:49 AM IST
Highlights

ನನಗೆ ಮಾತ್ರವಲ್ಲ, ನನ್ನ ಮಗನಿಗೂ ಇದೊಂದು ಮರೆಯಲಾಗದ ಸಂಭ್ರಮ.

-ಹೀಗೆ ಹೇಳಿಕೊಂಡಿದ್ದು ನಟ ಕಂ ನಿರ್ದೇಶಕ ರಿಷಬ್‌ ಶೆಟ್ಟಿ.

ತಮ್ಮ ಪುತ್ರ ರಣ್ವಿತ್‌ ಶೆಟ್ಟಿಮೊದಲ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ ರೀತಿಯನ್ನು ಖುಷಿಯಿಂದ ಹೇಳಿಕೊಂಡರು. ಅವರ ಮಾತುಗಳಲ್ಲೇ ಹುಟ್ಟುಹಬ್ಬದ ಆಚರಣೆ ಹೇಗಿತ್ತು ಅನ್ನೋದು ಕೇಳಿ-

‘ ಸಾವಿರಾರು ರುಪಾಯಿ ವೆಚ್ಚ ಮಾಡಿದ್ದರೂ ಇಂಥದ್ದೊಂದು ಸಂಭ್ರಮ ಕಾಣಲು ಸಾಧ್ಯವಾಗುತ್ತಿರಲಿಲ್ಲ. ಕುಂದಾಪುರ ಬಳಿಯ ಕೆರಾಡಿ ಗ್ರಾಮ. ನಾನು ಹುಟ್ಟಿದ ಊರು. ಲಾಕ್‌ಡೌನ್‌ ಕಾರಣಕ್ಕೆ ಬೆಂಗಳೂರು ಬಿಟ್ಟು ಬಂದ ಮೇಲೆ ನನ್ನ ಮಗನ ಹುಟ್ಟುಹಬ್ಬಕ್ಕೆ ನನ್ನೂರಿನ ತೋಟವೇ ದೊಡ್ಡ ವೇದಿಕೆ ಆಯ್ತು. ಮನೆಯ ಕೆಲವೇ ಸದಸ್ಯರು, ಅಡಿಕೆ ಹಾಳೆಯ ಟೋಪಿ, ಹಲಸಿನ ಕಾಯಿ, ಪಪ್ಪಾಯಿ, ಎಳನೀರು, ತೆಂಗಿನ ಗರಿಗಳ ಚಪ್ಪರ, ಕಾಡಿನ ಹೂವುಗಳು, ಮಾವಿನ ಗಿಡಗಳ ನೆರಳು, ಸ್ವಚ್ಛ ಗಾಳಿ, ಹಳೆಯ ಪಾತ್ರೆಗಳು.

ಪುತ್ರ ರಣ್ವಿತ್‌ ಮೊದಲ ಬರ್ತಡೇಗೆ ಸ್ಪೆಷಲ್‌ ಗಿಫ್ಟ್‌ ನೀಡಿದ ರಿಷಬ್‌ ಶೆಟ್ಟಿ

 
 
 
 
 
 
 
 
 
 
 
 
 

ಮುದ್ದುಕಂದ ರಣ್ವಿತ್ ನ ಮೊದಲವರ್ಷದ ಹುಟ್ಟುಹಬ್ಬ ಕೋರೋನಾ ಕಾರಣದಿಂದ ಯಾವುದೇ ಆಡಂಬರ ಇಲ್ಲದೇ ನಾ ಹುಟ್ಟಿಬೆಳೆದ ಮನೆಯಲ್ಲಿ ಹಳ್ಳಿ ಸೊಗಡಿನ ಅಲಂಕಾರ ತೆಂಗು,ಅಡಿಕೆಯ ಹಿಂಗಾರ, ನಡುವೆ ಬಾಳೆಯ ಸಿಂಗಾರ.. ಅಲ್ಲಲ್ಲಿ ಕಾಡಿನ ಹೂ ಹಣ್ಣುಗಳ ಸುಗಂಧ,ಮೊದಲ ಮಳೆಯ ಸಂಭ್ರಮದಲ್ಲಿ ನಮ್ಮ ಕೆಲವೇ ಪ್ರೀತಿಪಾತ್ರರ ಜೊತೆ ಆಚರಿಸಲಾಯಿತು... ನಿಮ್ಮೆಲ್ಲರ ಪ್ರೀತಿ ತುಂಬಿದ ಹಾರೈಕೆ ನನ್ನ ಮುದ್ದುಮಗ ನ ಮೇಲಿರಲಿ 🙏😍😍❤️ #ranvit_shetty ❤️ thanks for the yammy cake by #Beena_Ranjith_shetty And set designed by #deep_Shetty and team

A post shared by Rishab Shetty Films (@rishabshettyfilms) on Apr 8, 2020 at 4:37am PDT

ಇಷ್ಟೆಲ್ಲವೂ ನನ್ನ ಪುತ್ರನ ಮೊದಲ ಹುಟ್ಟು ಹಬ್ಬದ ಸಂಭ್ರಮವನ್ನು ರಂಗೇರಿಸಿದವು. ಅವನು ಮುಂದೆ ಎಂದಾದರೂ ತನ್ನ ಮೊದಲ ಹುಟ್ಟುಹಬ್ಬ ಹೇಗಾಯಿತು ಎಂದು ಹಿಂತಿರುಗಿ ನೋಡಿದರೆ ಖಂಡಿತ ಬೆರಗಾಗುತ್ತಾನೆ, ಖುಷಿ ಪಡುತ್ತಾನೆ. ಹುಟ್ಟೂರಿನಲ್ಲಿ ನಡೆಯುವ ಪ್ರತಿ ಸಂಭ್ರಮವೂ ನಮಗೆ ಸದಾ ನೆನಪಿರುವುದು ಯಾಕೆ ಎಂಬುದು ನನ್ನ ಮಗನ ಹುಟ್ಟು ಹಬ್ಬ ನೋಡಿದ ಮೇಲೆ ಗೊತ್ತಾಯಿತು.

click me!