ಪಿ.ಕೆ.ಎಸ್‌. ದಾಸ್‌ ನಿರ್ದೇಶನದ ಭೂಮಿಕ ಡಿ. 25ಕ್ಕೆ ಬಿಡುಗಡೆ

Kannadaprabha News   | Asianet News
Published : Dec 22, 2020, 09:03 AM IST
ಪಿ.ಕೆ.ಎಸ್‌. ದಾಸ್‌ ನಿರ್ದೇಶನದ ಭೂಮಿಕ ಡಿ. 25ಕ್ಕೆ ಬಿಡುಗಡೆ

ಸಾರಾಂಶ

ಛಾಯಾಗ್ರಹಣದಿಂದಲೇ ಹೆಸರು ಮಾಡಿರುವ ಪಿ.ಕೆ.ಎಸ್‌. ದಾಸ್‌ ‘ಭೂಮಿಕ’ ಎಂಬ ತುಳು ಮತ್ತು ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಡಿ. 25ಕ್ಕೆ ಬಿಡುಗಡೆ ಸನ್ನದ್ಧವಾಗಿದೆ.

ನಮ್ಮ ಫ್ಲಿಕ್ಸ್‌ ಒಟಟಿಯಲ್ಲಿ ತೆರೆಗೆ ಬರುತ್ತಿರುವ ‘ಭೂಮಿಕ’ ಕಮರ್ಷಿಯಲ್‌ ಚಿತ್ರಗಳ ಸಾಲಿಗೆ ಸೇರದೇ ಇದ್ದರೂ ಕರಾವಳಿ ಭಾಗದಲ್ಲಿ ನಡೆದ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ತಯಾರಾದದ್ದು. ‘ನನ್ನೊಳಗೆ ತುಂಬಾ ಸಮಯದಿಂದ ಕಾಡುತ್ತಿದ್ದ ಕತೆಯನ್ನು ಸಿನಿಮಾ ಮಾಡಿದ್ದೇನೆ. ಮಹಿಳಾ ಪ್ರಧಾನ ಚಿತ್ರ. ಬೆಸ್ತರ ಹೆಣ್ಣು ಮಗಳೊಬ್ಬಳ ನೋವಿನ ಕಥಾನಕ ಇದು. ನನ್ನ ಹೃದಯಕ್ಕೆ ಮುಟ್ಟಿದ ಕತೆ. ನಿಜವಾಗಿ ನಡೆದ ಘಟನೆಯನ್ನು ಆಧರಿಸಿ ಸಿನಿಮಾ ನಿರ್ದೇಶನ ಮಾಡಿದ್ದೇನೆ’ ಎಂದು ದಾಸ್‌ ಚಿತ್ರದ ಬಗ್ಗೆ ಹೇಳಿಕೊಂಡರು.

ಈ ಚಿತ್ರದಲ್ಲಿ ಅಲಿಶಾ ಕದ್ರಿ, ನವೀನ್‌ ಡಿ ಪಡೀಲ್‌ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರಜ್ವಲ್‌ ಪ್ರಕಾಶ್‌, ರವಿ, ಶೋಭಾ ರೈ, ಕವಿತಾ, ನಂದಿನಿ, ಭೂಮಿಕಾ ನಟಿಸಲಿದ್ದಾರೆ. ಸಾಗರ ಮೂಲದ ವೈದ್ಯ ದಂಪತಿಗಳಾದ ಡಾ. ನರೇಂದ್ರ ಪಿ. ನಾಯಕ್‌ ಮತ್ತು ಗಾಯತ್ರಿ ಚಿತ್ರದ ನಿರ್ಮಾಪಕರು.

'ಅಲೆಯಾಗಿ ಬಾ' ಕನ್ನಡ ಆಲ್ಬಂ ಸಾಂಗ್.. ರಥವೇರಿದ ಮೈಸೂರಿನ ಕಿರಣ !

‘ಚಿತ್ರ ದಾಸ್‌ ಅವರ ಕನಸಿನ ಕೂಸು. ಬೆಸ್ತರ ಹುಡುಗಿ ಲೈಫ್‌ನಲ್ಲಿ ಏನೇನು ಆಗುತ್ತದೆ ಎನ್ನುವ ಕತೆಯನ್ನು ಮನ ಮುಟ್ಟುವಂತೆ ಹೇಳಿದ್ದಾರೆ. ಇದು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ’ ಎನ್ನುವ ಭರವಸೆಯನ್ನು ನರೇಂದ್ರ ನಾಯಕ್‌ ಅವರು ವ್ಯಕ್ತಪಡಿಸಿದರು. ಈಗಾಗಲೇ ನಮ್ಮ ಫ್ಲಿಕ್ಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು ಮೆಚ್ಚುಗೆ ಗಳಿಸಿಕೊಂಡಿದೆ.

ನಮ್ಮ ಫ್ಲಿಕ್ಸ್‌ನ ವಿಜಯ ಪ್ರಕಾಶ್‌ ಮಾತನಾಡಿ ‘ಸಿನಿಮಾ ಕಂಟೆಂಟ್‌ ಚೆನ್ನಾಗಿದೆ. ವಿಭಿನ್ನವಾಗಿ ಕತೆ ಹೇಳಿದ್ದಾರೆ. ಇದು ಕಮರ್ಷಿಯಲ್‌ ಸಿನಿಮಾ ಅಲ್ಲ. ಕತೆಯೇ ಇಲ್ಲಿ ಪ್ರಧಾನ. ಈ ಸಿನಿಮಾಗಾಗಿಯೇ 90 ರುಪಾಯಿಯ ಹೊಸ ಸ್ಲಾಟ್‌ ಮಾಡಿದ್ದೇವೆ. ಇದು ನಮ್ಮ ಫ್ಲಿಕ್ಸ್‌ನಲ್ಲಿ ಬರುತ್ತಿರುವ ಮೊದಲ ತುಳು ಚಿತ್ರ’ ಎಂದು ಹೇಳಿಕೊಂಡರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?