ಗಲ್ಲಿಗೇರಬೇಕಾದವನು ಕಣ್ಣು ಮಿಟುಕಿಸಿ, ಮ್ಮು..ಎಂದನಂತೆ! ಜ್ಯೂಲಿ ಲಕ್ಷ್ಮೀ ಹೇಳಿದ ಕೈದಿ ಕಥೆ

Published : Aug 04, 2023, 05:29 PM IST
ಗಲ್ಲಿಗೇರಬೇಕಾದವನು ಕಣ್ಣು ಮಿಟುಕಿಸಿ, ಮ್ಮು..ಎಂದನಂತೆ! ಜ್ಯೂಲಿ ಲಕ್ಷ್ಮೀ ಹೇಳಿದ ಕೈದಿ ಕಥೆ

ಸಾರಾಂಶ

ಜ್ಯುಲಿ ಲಕ್ಷ್ಮಿ ಅಂದ್ರೆ ಚಂದನದ ಗೊಂಬೆ ಚಿತ್ರದೊಂದಿಗೆ ಹತ್ತು ಹಲವು ಚಿತ್ರಗಳು ಕಣ್ಣು ಮುಂದೆ ಹಾದು ಹೋಗುತ್ತದೆ. ಈ ನಟಿ ತಮ್ಮ ಜೀವನದ ವಿಶೇಷ ಘಟನೆಗಳನ್ನು ಮೆಲಕು ಹಾಕಿದ್ದಾರೆ. ಏನವು?

ಜೂಲಿ‌ ಲಕ್ಷ್ಮೀ.. ಹೆಸರು ಕೇಳಿದ್ರೆ ಸಾಕು 80-90ರ ದಶಕದ ಸಿನಿಮಾ‌ಪ್ರಿಯರು‌ ರೋಮಾಂಚನಗೊಳ್ತಾರೆ. ‌ಬ್ಯೂಟಿ‌ ವಿತ್ ಬ್ರೈನ್ ಇರುವ ಕೆಲವೇ ನಟಿಯರ‌ ಪೈಕಿ, ಲಕ್ಷ್ಮೀಗೆ ಅಗ್ರ ಸ್ಥಾನ. ತಮಿಳು, ‌ತೆಲುಗು, ಕನ್ನಡ,‌ ಮಲಯಾಳಂ ಚಿತ್ರರಂಗವನ್ನು ‌ಅಕ್ಷರಶಃ ಆಳಿದ ಲಕ್ಷ್ಮೀ, ‌ಜೂಲಿ ಚಿತ್ರದ‌ ಮೂಲಕ‌‌ ಬಾಲಿವುಡ್‌ನಲ್ಲೂ ‌ತಮ್ಮ ಛಾಪು ‌ಮೂಡಿಸಿದವರು.
 
ಲಕ್ಷ್ಮೀ ಹೆಸರಿಗೆ ತಕ್ಕಂತೆ ಮಹಾಲಕ್ಷ್ಮಿಯೇ.‌ ಲಕ್ಷ್ಮೀ ‌ಸೌಂದರ್ಯಕ್ಕೆ‌ ಬೆರಗಾಗದವರು, ಮರುಳಾಗದವರೇ ಇಲ್ಲ. ಇಂಥ ನಟಿ ಲಕ್ಷ್ಮೀಗೆ‌ ಗಲ್ಲು ಶಿಕ್ಷೆಗೆ ‌ಗುರಿಯಾಗಿದ್ದ‌ ಕೈದಿಯೂ ಕಣ್ಣು ಮಿಟುಕಿಸಿ, ಫ್ಲೈಯಿಂಗ್ ಕಿಸ್ ಕೊಟ್ಟ ಇಂಟರೆಸ್ಟಿಂಗ್ ವಿಷಯವನ್ನು ಸ್ವತಃ ‌ಲಕ್ಷ್ಮೀಯವರೇ ಹಂಚಿಕೊಂಡಿದ್ದಾರೆ. 
 

ತಾಯಿಯನ್ನೆ ಮೀರಿಸುವ ಲುಕ್; ಚಂದನವನದ ಸುಂದರಿಯರ ಮಕ್ಕಳಿವರು!

ಅದು ತಮಿಳು ಚಿತ್ರ. ಜೈಲು ಸನ್ನಿವೇಶದ‌ ‌ಚಿತ್ರೀಕರಣ ಸೇಲಂ ಜೈಲಿನಲ್ಲಿ ‌ನಡೆದಿತ್ತು. ಕೈದಿಯಾಗಿ ನಟಿಸಿದ್ದ‌ ಲಕ್ಷ್ಮೀ, ಸೇಲಂ‌ ಜೈಲಿನ ಸೆಲ್ ನಂಬರ್ 2ರಲ್ಲಿ ಬಂಧಿಯಾಗಬೇಕಿತ್ತು. ಶೂಟಿಂಗ್‌ಗೆ ರೆಡಿಯಾಗಿ‌ ಸೆಲ್‌ ಬಳಿ ಹೋಗುತ್ತಿದ್ದ ಲಕ್ಷ್ಮೀ ಅವರಿಗೆ ಸೆಲ್‌ ನಂಬರ್ 1ರಲ್ಲಿ ಬಂಧಿಯಾಗಿದ್ದ ಕೈದಿ, ಕಣ್ಣು ‌ಮಿಟುಕಿಸಿ, ಫ್ಲೈಯಿಂಗ್ ಕಿಸ್ ಕೊಟ್ಟು ಬಿಟ್ಟನಂತೆ! ಹುಬ್ಬು‌ ಕುಣಿಸಿ, 'ಹೆಂಗೆ?' ಎಂದು‌ ಕಣ್ಣಲ್ಲೇ ಪ್ರಶ್ನಿಸಿದ್ದನಂತೆ. ಇದನ್ನು ಗಮನಿಸಿದ‌ ಪೊಲೀಸರು, ಆತನನ್ನ‌ ಗದರಿಸಿಯೂ ಆಯಿತು. ಆತನ ಕಣ್ಣೇಟಿಗೆ ಕ್ಷಣ ಗಾಬರಿಯಾದ ಲಕ್ಷ್ಮೀ , ಯಾರು ಆ ಕೈದಿ? ಎಂದು ‌ಕೇಳಿದರಂತೆ.‌ ಅಲ್ಲೇ ಇದ್ದ ಪೊಲೀಸಪ್ಪ, ಅಯ್ಯೋ ಅವನೊಬ್ಬ‌ ಕೊಲೆಗಾರ. ಗಲ್ಲು ಶಿಕ್ಷೆ ಆಗಿದೆ. ‌ಸ್ವಲ್ಪ ದಿನದಲ್ಲೇ ನೇಣುಗಂಬರಕ್ಕೇರ್ತಾನೆ. ಇನ್ನೇನು ಸಾವು ಹತ್ತಿರದಲ್ಲಿದ್ದರೂ, ಕೊಬ್ಬು ಮಾತ್ರ ಕರಗಿಲ್ಲ ಎಂದು ಗೊಣಗಿದರಂತೆ. ಇದನ್ನು‌ ಕೇಳಿ ಲಕ್ಷ್ಮೀ ‌ಕ್ಷಣ ದಂಗಾಗಿದ್ದು ಸುಳ್ಳಲ್ಲ. ಯಾರಾಗಾದರೂ ಗಲ್ಲಿಗೇರುವವನ ಇಂಥ ಆಶ್ಚರ್ಯ ತಾರದೇ ಇರದು. ಆದರೆ, ನೇಣುಗಂಬಕ್ಕೇರುವವನ ಆ್ಯಟಿಟ್ಯುಡ್ ಲಕ್ಷ್ಮಿಗೆ ಇಷ್ಟ ಆಯ್ತಂತೆ. ಸಾಯೋದೇ ಹೌದಂತೆ! ಅಲ್ಲೀತನಕ ನನಗಿಷ್ಟ ಬಂದಂತೆ ಬದುಕ್ತೀನಿ ಅನ್ನೋ ಆತನ‌ attitude ಮನ ಸೆಳೆಯಿತು‌ ಎನ್ನುತ್ತಾರೆ ಲಕ್ಷ್ಮೀ. ‌

ಇಂಥದ್ದೇ ಇನ್ನೊಂದು ‌ಘಟನೆ ನೆನಪಿಸಿಕೊಂಡಿದ್ದಾರೆ ಲಕ್ಷ್ಮೀ.

ಟಾಯ್ಲೆಟ್ ಬೇಕಾದರೂ ತೊಳೆಯುತ್ತೇನೆ: ಜ್ಯೂಲಿ ಲಕ್ಷ್ಮಿ ಮಗಳು, ಅಂಥದ್ದೇನಾಯ್ತು ಈ ಸ್ಟಾರ್ ನಟಿಗೆ?

ಸೇಡಿನ ಹಕ್ಕಿ ಚಿತ್ರದ ಚಿತ್ರೀಕರಣ ‌ಬೆಂಗಳೂರು ಜೈಲಲ್ಲಿ ನಡೆದಿತ್ತು.  ಲಕ್ಷ್ಮೀ, ಜಯಮಾಲಿನಿ ಇಬ್ಬರೂ ಜೈಲಿನಲ್ಲಿ ಇರೋ ಶೂಟಿಂಗ್. ಮೇಕಪ್‌ ಹಾಕಿಕೊಂಡು ಜೈಲಿಗೆ ಎಂಟ್ರಿ ‌ಕೊಡೋ‌ ಸಮಯದಲ್ಲಿ, ಒಂದಷ್ಟು ಕೈದಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಲು ಕರೆತರುತ್ತಿದ್ದರಂತೆ. ವ್ಯಾನ್‌‌ನಿಂದ ಇಳಿಯುತ್ತಿದ್ದವರ ಪೈಕಿ ಒಬ್ಬ ಕೈದಿ, ಲಕ್ಷ್ಮೀ ಅವರನ್ನು‌ ನೋಡಿದವನೇ ಕಣ್ಣು‌ ಮಿಟುಕಿಸಿ, ಹೆಂಗೆ ‌ಮೇಡಂ ಎಂದು ತುಂಟ ನಗು ‌ಬೀರಿದನಂತೆ.‌ ಆತನ ತಕ್ಷಣದ ಕಿಡಿಗೇಡಿತನ‌ಕ್ಕೆ ಲಕ್ಷ್ಮೀ ಗಾಬರಿಯಾದ್ರೆ, ಪೊಲೀಸರು ‌ಆತನನ್ನು‌ ಗದರಿಸಿ‌ ಕರೆದೊಯ್ದರಂತೆ. ಆ ಕೈದಿಯ attitude ಸಹ ಲಕ್ಷ್ಮೀ ಸಖತ್‌ ಇಷ್ಟ ಆಯ್ತಂತೆ. ಕೊಲೆ, ಸುಲಿಗೆ, ಕಳ್ಳತನ ಏನೋ ಮಾಡಿ‌ ಜೈಲಿ ಸೇರಿದ ಕೈದಿಗೆ ಮುಂದಿನ ಶಿಕ್ಷೆಯ ಭಯವಿಲ್ಲ.‌ ತನಗೆ ಅನ್ನಿಸಿದ್ದನ್ನು ಆ ಕ್ಷಣ ‌ಮಾಡಿ, ಅದನ್ನು‌ ಅನುಭವಿಸುವುದೇ ಜೀವನ. ಪ್ರತಿ ಕ್ಷಣವನ್ನು ಎಂಜಾಯ್ ‌ಮಾಡುತ್ತಾ‌ ಬದುಕುವವರಿಗೆ‌ ಕಳೆದುಕೊಂಡಿದ್ದರ ಬಗ್ಗೆ ಬೇಸರವೂ, ವ್ಯಥೆಯೂ ಇರಲ್ಲವೆಂದು ಜೀವನದ ಸತ್ಯ ಹೇಳುತ್ತಾರೆ ನಟಿ ಲಕ್ಷ್ಮೀ.

ಭಾರತೀಯ ಚಿತ್ರರಂಗದ ದಂತಕಥೆ ಎನಿಸಿರೋ‌ ನಟಿ ಲಕ್ಷ್ಮೀ ಅವರ ಅನುಭವವೂ ಒಂದು ಕಥೆಯಂತಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

SM
About the Author

Shobha MC

ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಎಂಎ ಮುಗಿಸಿ, ಸೇರಿದ್ದು ವಿಜಯ ಕರ್ನಾಟಕ ಪತ್ರಿಕೆಗೆ. ಸೂರ್ಯೋದಯ ಸೇರಿ ಪತ್ರಿಕೆಗಳಲ್ಲಿ 7 ವರ್ಷಗಳ ಅನುಭವ. ನ್ಯೂಸ್ ಚಾನೆಲ್ಗಳಿನ್ನೂ ಸರಿಯಾಗಿ ಕಣ್ಬಿಡದ ಕಾಲದಲ್ಲೇ ದೃಶ್ಯ ಮಾಧ್ಯಮಕ್ಕೆ ಕಾಲಿಟ್ಟಿದ್ದು, ಟೆಲಿವಿಷನ್ ಪಟ್ಟುಗಳೆಲ್ಲ ಕರತಲಾಮಲಕ. ಉದಯ ಟಿವಿಯಲ್ಲಿ 2 ವರ್ಷ ಸೇವೆ. ಕಳೆದ 17 ವರ್ಷದಿಂದಲೂ ಸುವರ್ಣ ನ್ಯೂಸ್ ಇನ್ಪುಟ್, ಔಟ್ಪುಟ್ ಹೆಡ್ ಆಗಿ ಕಾರ್ಯ ನಿರ್ವಹಣೆ. ಪತ್ರಿಕೆ- ಟಿವಿ ಎರಡರ ಅಗಾಧ ಅನುಭವ ಇರುವ ಏಕೈಕ ಪತ್ರಕರ್ತೆ. ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಪತ್ರಕರ್ತರ ಸಂಘ, ಕೆಂಪೇಗೌಡ ಪ್ರಶಸ್ತಿ, ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾ, ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿಗಳು ಮುಡಿಗೇರಿವೆ. ಸದ್ಯ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯೆ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಸಿಲಬಸ್ ಕಮಿಟಿ ಸದಸ್ಯೆಯಾಗಿಯೂ ನೇಮಕ.Read More...
Read more Articles on
click me!

Recommended Stories

ನೀಲಿ ಗಾಗ್ರಾ ಚೋಲಿಯಲ್ಲಿ ಹುಡುಗರ ಹಾರ್ಟ್’ಗೆ ಲಗ್ಗೆ ಇಟ್ಟ ಆಶಿಕಾ ರಂಗನಾಥ್
ದಶಕಗಳ ಬಳಿಕ ಗೆಳೆಯ ದರ್ಶನ್ ಫೋಟೋ ಶೇರ್ ಮಾಡಿ, ವಿಶ್ ಮಾಡಿದ ಕಿಚ್ಚ ಸುದೀಪ್!