ಅಯ್ಯಯ್ಯೋ... ಏನಾಗೋಯ್ತು? ಸಂಯುಕ್ತಾ ಹೊರನಾಡು ಕಣ್ಣೀರಿಟ್ಟಿದ್ಯಾಕೆ?

Suvarna News   | Asianet News
Published : Jan 22, 2020, 04:14 PM ISTUpdated : Apr 12, 2020, 05:31 PM IST
ಅಯ್ಯಯ್ಯೋ... ಏನಾಗೋಯ್ತು? ಸಂಯುಕ್ತಾ ಹೊರನಾಡು ಕಣ್ಣೀರಿಟ್ಟಿದ್ಯಾಕೆ?

ಸಾರಾಂಶ

ಯಾವಾಗಲೂ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಟಿ ಸಂಯುಕ್ತಾ ಹೊರನಾಡು ಈ ವಿಚಾರಕ್ಕಾಗಿ ಕಣ್ಣೀರಿಟ್ಟಿದ್ದಾರೆ. ಅರೇ..! ಏನಾಗೋಯ್ತು ಸಂಯುಕ್ತಾಗೆ? ಈ ಸುದ್ದಿ ಓದಿ.. ! 

ನಟಿ ಸಂಯುಕ್ತಾ ಹೊರನಾಡು ಮುಂದೆ ಒಟ್ಟು ಏಳು ಚಿತ್ರಗಳು ಇವೆ. ಈ ಪೈಕಿ ಕನ್ನಡದಲ್ಲಿ ಎರಡು ಚಿತ್ರಗಳು ತೆರೆಗೆ ಸಿದ್ಧವಾಗಿವೆ. ತೆಲುಗು, ತಮಿಳಿನಲ್ಲಿ ಒಂದೊಂದು ಚಿತ್ರಕ್ಕೆ ಚಿತ್ರೀಕರಣ ಮುಗಿಸಿದ್ದಾರೆ. ಈ ವರ್ಷ ಇವರ ನಟನೆಯ ಕನಿಷ್ಠ ಐದು ಚಿತ್ರಗಳಾದರೂ ತೆರೆ ಮೇಲೆ ಮೂಡಲಿವೆ.

ಇದಕ್ಕೆ ಮೊದಲ ಆರಂಭ ಹೇಳುತ್ತಿರುವುದು ‘ನಾನು ಮತ್ತು ಗುಂಡ’. ಶ್ರೀನಿವಾಸ್ ತಮ್ಮಯ್ಯ ನಿರ್ದೇಶಿಸಿ, ಶಿವರಾಜ್ ಕೆ ಆರ್ ಪೇಟೆ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಸಂಯುಕ್ತಾ ನಾಯಕಿ. ಇದೇ ಫೆ. 24 ರಂದು ಸಿನಿಮಾ ತೆರೆಗೆ ಬರುತ್ತಿದೆ.

ಅಭಿನಯ ಚಕ್ರವರ್ತಿಗೆ ಮತ್ತೊಂದು ಗರಿ; ಕಿಚ್ಚ ಅಭಿಮಾನಿಗಳು ಖುಷ್‌ ಹುವಾ..!

ನನ್ನ ನಿಜ ಜೀವನ ನೆನಪಿಸಿದ ಚಿತ್ರ

ಒಂದಿನ ನಿರ್ದೇಶಕ ಶ್ರೀನಿವಾಸ್ ತಮ್ಮಯ್ಯ ಗುಂಡ ಎನ್ನುವ ನಾಯಿ ಬಗ್ಗೆ ಹೇಳಿದ್ರು. ಅವರು ಕತೆ ಹೇಳುತ್ತಿದ್ದಾಗಲೇ ನನಗೆ ಕಣ್ಣಲ್ಲಿ ನೀರು ಬಂತು. ಯಾಕೆಂದರೆ ನಾನು ಪ್ರೀತಿಯಿಂದ ಸಾಕಿದ ನಾಯಿ ಹೆಸರು ಗುಂಡ. ಅದು ತೀರಿಕೊಂಡಿತು. ನನ್ನ ಮನೆಯ ಸದಸ್ಯನ ಕತೆ ನನಗೆ ಯಾಕೆ ಹೇಳುತ್ತಿದ್ದಾರೆ ಎನಿಸಿತು. ನಾಯಿ ಮತ್ತು ಮನುಷ್ಯನ ನಡುವಿನ ಪ್ರೀತಿಯ ಕತೆ ಇದು ಎಂದು ಹೇಳಿದ ಕೂಡಲೇ ನಾನು  ಒಪ್ಪಿಕೊಂಡೆ. ಪ್ರಾಣಿಗಳನ್ನು ಪ್ರೀತಿಸುವ ಕತೆ ಆದರೆ ಏನೂ ಹೇಳದೆ ನಾನು ನಟಿಸುತ್ತೇನೆ.

ಶಿವರಾಜ್ ಮಾಡಿದ ಪಾತ್ರ ಮಾಡಬೇಕಿತ್ತು

ನಿಜ ಜೀವನದಲ್ಲಿ ನಾನು ಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತೇನೆ. ೧೫ಕ್ಕೂ ಹೆಚ್ಚು ಪ್ರಾಣಿಗಳನ್ನು ದತ್ತು ಪಡೆದುಕೊಂಡು ಸಾಕುತ್ತಿದ್ದೇನೆ. ಆದರೆ, ‘ನಾನು ಮತ್ತು ಗುಂಡ’ ಚಿತ್ರದಲ್ಲಿ ಅದೇ ಪ್ರಾಣಿಯನ್ನು ದ್ವೇಷಿಸುವ ಪಾತ್ರ ನನ್ನದು. ಕ್ಯಾಮೆರಾ ಹಿಂದೆ ಮುದ್ದು ಮಾಡುವ ಸಿಂಬಾ ಹೆಸರಿನ ನಾಯಿಯನ್ನು, ಕ್ಯಾಮೆರಾ ಮುಂದೆ ದ್ವೇಷಿಸುವ ಪಾತ್ರ ಮಾಡುತ್ತಿದ್ದಾಗ ತುಂಬಾ ಸವಾಲು ಅನಿಸಿತು. ಶಿವರಾಜ್ ಕೆ ಆರ್ ಪೇಟೆ ಅವರದ್ದು ನಾಯಿಯನ್ನು ಪ್ರೀತಿಸುವ ಪಾತ್ರ. ಹೀಗಾಗಿ ಶಿವರಾಜ್ ಮಾಡಿದ ಪಾತ್ರ ನನಗೆ ಸಿಗಬಾರದೇ ಅನ್ನಿಸಿತ್ತು.

7ನೇ ಕ್ಲಾಸಿನಲ್ಲೇ ನಿಖಿಲ್ ಬಳಿ ಇತ್ತು ಕಾರು; ಇಲ್ಲಿದೆ ಕುಮಾರಸ್ವಾಮಿ ಪುತ್ರನ 'ಕಾರುಬಾರು'!

ವಿವಿಧ ರೀತಿಯ ಪಾತ್ರಗಳು

ಹೊಂದಿಸಿ ಬರೆಯಿರಿ, ಆಮ್ಲೇಟ್, ಮೈಸೂರು ಮಸಾಲ, ಅರಿಷಡ್ವರ್ಗ, ತೆಲುಗಿನ ಲಾಕ್, ತಮಿಳಿನ ರೆಡ್ ರಾಮ್... ಇವು ನನ್ನ ಮುಂದಿರುವ ಚಿತ್ರಗಳು. ‘ಅರಿಷಡ್ವರ್ಗ’ ಚಿತ್ರಕ್ಕೂ ಶೂಟಿಂಗ್ ಮುಗಿದೆ. ಇದೇ ಫೆಬ್ರವರಿ ಕೊನೆಯ ವಾರದಲ್ಲಿ ತೆರೆಗೆ ಬರಲಿದೆ. ತೆಲುಗಿನಲ್ಲಿ ನಟ ಸತ್ಯ ದೇವ್ ಜತೆಗೆ ‘ಲಾಕ್’ ಹಾಗೂ ತಮಿಳಿನಲ್ಲಿ ಅಶೋಕ್ ಸೆಲ್ವನ್ ಜತೆಗೆ ‘ರೆಡ್ ರಾಮ್’ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ‘ಮೈಸೂರು ಮಸಾಲ’ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡುತ್ತಿದ್ದೇನೆ.

"


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?