ಹೀರೋ ಆಗಿ ಎಂಟ್ರಿ ಕೊಟ್ಟ ನವೀನ್ ಸಜ್ಜು!

Suvarna News   | Asianet News
Published : Oct 24, 2020, 04:14 PM IST
ಹೀರೋ ಆಗಿ ಎಂಟ್ರಿ ಕೊಟ್ಟ ನವೀನ್ ಸಜ್ಜು!

ಸಾರಾಂಶ

ಗಾಯಕ ನವೀನ್ ಸಜ್ಜು ನಾಯಕ ನಟನಾಗಿ ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ. ನಿರ್ದೇಶಕರಾರು ಗೊತ್ತಾ?

ಬಿಗ್ ಬಾಸ್‌ ಸೀಸನ್‌ 6 ರನ್ನರ್‌ ಅಪ್‌ ನವೀನ್‌ ಸಜ್ಜು ಗಾಯಕನಾಗಿ ಮಾತ್ರವಲ್ಲ, ನಾಯಕನಾಗಿಯೂ ಗುರುತಿಸಿಕೊಳ್ಳಲು ಸಜ್ಜಾಗಿದ್ದಾರೆ ಎಂಬ ವಿಚಾರ ಹಲವು ವರ್ಷಗಳಿಂದ ಕೇಳುತ್ತಲೇ ಬಂದಿತ್ತು.  ನ್ಯೂ ಇಯರ್‌ಗೆ ಎಣ್ಣೆ ಬಿಟ್ಬುಡ್ತೀನಿ ಅಂತ ಹೇಳಿದ್ದವರು ಈಗ ಸೈಲೆಂಟ್ ಆಗಿ ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರೆ.

ರಮಿಸೋ ಹುಡುಗ, ಮುನಿಸೋ ಹುಡುಗಿ ನೋಡ್ಲೇಬೇಕಾದ ಸಾಂಗ್ ಇದು!

ಡಬಲ್ ಮೀನಿಂಗ್ ಕಾಮಿಡಿ ಇದ್ರೂ ಪಕ್ಕಾ, ಫ್ಯಾಮಿಲಿ ಓರಿಯಂಟೆಡ್‌ ಸಿನಿಮಾ 'ಕೆಮಿಸ್ಟ್ರಿ ಆಫ್‌ ಕರಿಯಪ್ಪ' ನಿರ್ದೇಶಕ ಕುಮಾರ್ ಈಗ ನವೀನ್ ಅವರ ಚಿತ್ರಕ್ಕೂ ಆ್ಯಕ್ಷನ್‌ ಕಟ್ ಹೇಳಲಿದ್ದಾರೆ. ಹಲವು ತಿಂಗಳ ಹಿಂದೆಯೇ ಈ ಚಿತ್ರಕಥೆ ಶುರುವಾಗಬೇಕಿತ್ತು ಆದರೆ ಕಾರಣಾಂತರಗಳಿಂದ ಮುಂದೆ ಹೋಗಿ ಈಗ ಒಳ್ಳೆ ಮುಹೂರ್ತ ಕೂಡಿ ಬಂದಿದೆ.

ಕೆಲವು ದಿನಗಳ ಹಿಂದೆ ಆದಿಚುಂಚನಗಿರಿ ಕ್ಷೇತ್ರದಲ್ಲಿ ಚಿತ್ರಕಥೆಗೆ ಪೂಜೆ ಮಾಡಿಸಲಾಗಿತ್ತು. ಚಿತ್ರ ತಂಡದ ಕೆಲ ಪ್ರಮುಖ ಕಲಾವಿದರು ಒಟ್ಟಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿತ್ರದ ಶೀರ್ಷಿಕೆ ಹಾಗೂ ಟೀಸರ್‌ ಬಗ್ಗೆ ಶೀಘ್ರದಲ್ಲಿ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

ನಾಳೆಯಿಂದ ಎಣ್ಣೆ ಬುಟ್ ಬುಡ್ತೀನಿ... ಒಳಿತು ಮಾಡು ಮನುಷ..ನವೀನ ಗಾನ 

ಇನ್ನು ಇತ್ತೀಚಿಗೆ ರಿಲೀಸ್ ಆದ ಐಪಿಎಲ್ ಬೆಟ್ಟಿಂಗ್ ಲವರ್ಸ್‌ ಲಿರಿಕಲ್ ಸಾಂಗ್ ಯುಟ್ಯೂಬ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಇದು ಕ್ರಿಟಿಕಲ್ ಕೀರ್ತನೆಗಳು ಚಿತ್ರದ ಹಾಡು ಎನ್ನಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ