ನೆಲಮಂಗಲದ ಆಸ್ಪತ್ರೆಗೆ ನಟ ವಿನೋದ್ ರಾಜ್‌ ದಾಖಲು; ದಿಢೀರ್‌ ಆಪರೇಷನ್?

Published : Jun 12, 2024, 10:19 AM ISTUpdated : Jun 12, 2024, 10:46 AM IST
ನೆಲಮಂಗಲದ ಆಸ್ಪತ್ರೆಗೆ ನಟ ವಿನೋದ್ ರಾಜ್‌ ದಾಖಲು; ದಿಢೀರ್‌ ಆಪರೇಷನ್?

ಸಾರಾಂಶ

ಕರುಳಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ವಿನೋದ್ ರಾಜ್. ದಿಢೀರ್‌ ಆಪರೇಷನ್‌ ಮಾಡಲಾಗಿದೆ.....

ಕನ್ನಡ ಚಿತ್ರರಂಗದ ಸರಳ ನಟ ವಿನೋದ್‌ ರಾಜ್‌ ಅನಾರೋಗ್ಯದಿಂದ ನೆಲಮಂಗಲದಲ್ಲಿರುವ ಇರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ಚಿಕಿತ್ಸೆ ಮೇಲೆ ಕರುಳಿನ ಸಮಸ್ಯೆ ಎಂದು ತಿಳಿದು ಬಂದಿದೆ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಸದ್ಯ ವಿನೋದ್‌ ರಾಜ್‌ ಅವರಿಗೆ ಕರುಳಿನ ಆಪರೇಷನ್ ಮಾಡಲಾಗಿದೆ. 

59 ವರ್ಷದ ವಿನೋದ್‌ ರಾಜ್‌ ಹಲವು ವರ್ಷಗಳಿಂದ ನೆಲಮಂಗಲದಲ್ಲಿರುವ ತಮ್ಮ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ಸಿನಿಮಾ ಕ್ಷೇತ್ರಕ್ಕೆ ಗುಡ್‌ ಬೈ ಹೇಳಿ ತಮ್ಮ ತೋಟ ಹಾಗೂ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕೆಲವು ತಿಂಗಳ ಹಿಂದೆ ತಾಯಿ ಹಿರಿಯ ನಟಿ ಲೀಲಾವತಿ ಅಗಲಿದರು. ಆ ನೋವಿನಲ್ಲಿದ್ದ ವಿನೋರಾಜ್‌ ತಾಯಿಯ ಸಮಾಧಿಯನ್ನು ನಿರ್ಮಾಣ ಮಾಡುತ್ತಿದ್ದರು. 

ವಿನೋದ್ ರಾಜ್ ಪತ್ನಿ ಅನುಗೆ ಚೆನ್ನೈನಲ್ಲಿದೆ ಭಾರೀ ಗಿಫ್ಟ್; ಲೀಲಾವತಿ ಮಗ ಕೊಟ್ಟಿದ್ದೇನು ನೋಡ್ರಿ

 

ವಿನೋದ್ ರಾಜ್ ಹೆಂಡತಿಯ ಹೆಸರು ಅನು ಹಾಗೂ ಮಗನ ಹೆಸರು ಯುವರಾಜ್‌. ಮಗ ಯುವರಾಜ್ ಚೆನ್ನೈನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದು, ತಾಯಿಯೊಂದಿಗೆ ಆಗಾಗ ಬೆಂಗಳೂರಿನ ನೆಲಮಂಗಲದ ಮನೆಗೆ ಬಂದು ಹೋಗುತ್ತಿರುತ್ತಾರೆ. ವಿನೋದ್ ರಾಜ್‌ ಅಮ್ಮ, ಕನ್ನಡದ ಹಿರಿಯ ನಟಿ ಲೀಲಾವತಿ ಅಗಲಿದಾಗ ಸಹಜವಾಗಿಯೇ ವಿನೋದ್ ರಾಜ್ ಹೆಂಡತಿ ಹಾಗು ಮಗ ಬಂದಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?