
ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮತ್ತು ರೋರಿಂಗ್ ಸ್ಟಾರ್ ಶ್ರೀ ಮುರಳಿ ಒಟ್ಟಾಗಿ ಕಾಣಿಸಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಳೆದ ತಿಂಗಳ ಸ್ನೇಹಿತರ ಜೊತೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದ ಶಿವಣ್ಣ ಈ ತಿಂಗಳು ಯಾತ್ರೆಗೆ ಹೊರಡಬೇಕಿತ್ತು. ಕೊರೋನಾ ವೈರಸ್ ಭೀತಿ ಹೆಚ್ಚಾದ ಕಾರಣ ಮನೆಯಲ್ಲೇ ಮಾಲೆ ತೆಗೆದು ಪೂಜೆ ಪುನಸ್ಕಾರಗಳನ್ನು ಮಾಡಲಾಗಿತ್ತು.
ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನಸಂತರ್ಪಣೆ ಮಾಡಿಸಿದ ಶಿವಣ್ಣ!
ಈ ವೇಳೆ ಪೂಜಾ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಪಾಲ್ಗೊಂಡಿದ್ದರು. ಅಯ್ಯಪ್ಪ ಸ್ವಾಮಿ ವಿಶೇಷ ಪೂಜೆಯಲ್ಲಿ ನಟ ಶ್ರೀ ಮುರಳಿ ಹಾಗೂ ಪತ್ನಿ ವಿದ್ಯಾ ಭಾಗಿಯಾಗಿದ್ದರು. ಊಟ ಮಾಡುತ್ತಿದ್ದ ವೇಳೆ ಮುರುಳಿ ಅವರನ್ನು ಮಾತನಾಡಿಸಲು ಶಿವರಾಜ್ಕುಮಾರ್ ಮುಂದಾದಾಗ ಶ್ರೀಮುರುಳಿ ದೋಸೆಯನ್ನು ಮುರಿದು ಮಗುವಿನಂತೆ ತಿನ್ನಿಸುತ್ತಾರೆ.
ಶಿವಣ್ಣ- ರೋರಿಂಗ್ ಬಾಯ್ಸ್ ಅಭಿಮಾನಿಗಳು ಈ ವಿಡಿಯೋ ನೋಡಿ ಫುಲ್ ಖುಷ್ ಆಗಿದ್ದಾರೆ. ವರಸೆಯಲ್ಲಿ ಶಿವರಾಜ್ಕುಮಾರ್ ಅವರು ಶ್ರೀಮುರಳಿಗೆ ಮಾವ ಆಗಬೇಕು!
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.