ತಿಪಟೂರಿನಲ್ಲಿ ನರಸಿಂಹರಾಜು ಸ್ಮಾರಕ: ನಟ ಜಗ್ಗೇಶ್ ಸಾಥ್!

Published : Jan 30, 2020, 03:18 PM IST
ತಿಪಟೂರಿನಲ್ಲಿ ನರಸಿಂಹರಾಜು ಸ್ಮಾರಕ:  ನಟ ಜಗ್ಗೇಶ್ ಸಾಥ್!

ಸಾರಾಂಶ

ಕನ್ನಡ ಚಿತ್ರರಂಗ ಮೀರು ಹಾಸ್ಯ ನಟರಲ್ಲಿ ಒಬ್ಬರಾದ ನರಸಿಂಹ ರಾಜು ಅವರ ಸ್ಮಾರಕ ನಿರ್ಮಿಸಲು ಕಾಮಿಡಿ ಕಿಂಗ್ ಜಗ್ಗೇಶ್‌ ಸಾಥ್‌ ನೀಡಲು ಇಚ್ಛಿಸಿದ್ದಾರೆ.  

250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ಕನ್ನಡ ಸಿನಿ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದ ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಅವರು ಜುಲೈ 11,1979ರಲ್ಲಿ ಹೃದಯಾಘಾತದಿಂದ ವಿಧಿವಶರಾದರು. 'ಮಾತು ತಪ್ಪದ ಮಗ' ,'ಕಿಲಾಡಿ ಕಿಟ್ಟಿ', 'ಕಿಟ್ಟು ಪುಟ್ಟು' ಹಾಗೇ ಅನೇಕ ಚಿತ್ರಗಳನ್ನು ನೋಡಿದಾಗ ಈಗಲೂ ಅವರು ಕಣ್ಣೆದುರು ಬಂದಂತಾಗುತ್ತದೆ. 

ವೈಕುಂಠ ಏಕಾದಶಿ ದಿನ ಅಮೇರಿಕನ್ ದುಬಾರಿ ನಾಯಿ ಮರಿ ಬರಮಾಡಿಕೊಂಡ ಜಗ್ಗೇಶ್!

ಹಿಂದೊಮ್ಮೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟ ಜಗ್ಗೇಶ್‌ ನರಸಿಂಹ ರಾಜು ಅವರ ಸ್ಮಾರಕ ನಿರ್ಮಾಣಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದರು. ಟ್ಟಿಟರ್ ಖಾತೆಯಲ್ಲಿ ಜಯಕುಮಾರ್‌ 'ಜಗ್ಗೇಶ್, ಕರ್ನಾಟಕ ಜನರ ಹೃದಯ ಗೆದ್ದ ಹಾಸ್ಯ ನಟ ದಿ.ನರಸಿಂಹ ರಾಜು ಅವರ ಹೆಸರಲ್ಲಿ ಅವರ ನೆನಪು ಉಳಿಸಲು ತಿಪಟೂರಿನಲ್ಲಿ ಸ್ಮಾರಕ ಮಾಡಲಾಗುವುದು, ಎಂದು ಒಂದು ಕಾರ್ಯಕ್ರಮದಲ್ಲಿ ಅವರ ಶ್ರೀಮತಿಯವರಿಗೆ ಆಶ್ವಾಸನೆ ನೀಡಿದ್ದ ನೆನಪು, ಅದೇನಾದರೂ ಕಾರ್ಯಗತ ಅಗ್ತಿದೆಯಾ? ಮಾನ್ಯ ಯಡಿಯೂರಪ್ಪರವರು ಮನಸ್ಸು ಮಾಡಿದ್ದಾರಾ?' ಎಂದು ಪ್ರಶ್ನಿಸಿದ್ದಾರೆ.

ಸ್ಯಾಂಡಲ್‌ವುಡ್‌ ಯಂಗ್ ಕಪಲ್‌ ಪರಿಮಳ-ಜಗ್ಗೇಶ್ ಇಂಟರೆಸ್ಟಿಂಗ್ ಲವ್ ಸ್ಟೋರಿ!

ಇದನ್ನು ರೀ-ಟ್ಟಿಟ್‌ ಮಾಡಿರುವ ಜಗ್ಗೇಶ್ ಉತ್ತರಿಸಿದ್ದಾರೆ. 'ಖಂಡಿತಾ ನಾನು ಹಾಗೂ ಸನ್ಮಾನ್ಯ ಶಾಸಕ ಮಿತ್ರ ನಾಗೇಶ್ ಅವರು ಈ ಕಾರ್ಯದ ಬಗ್ಗೆ ವಿಶೇಷ ಆಸಕ್ತಿವಹಿಸಿರುವೆವು. ಅದರ ಬಗ್ಗೆ ಸಂಪೂರ್ಣ ಮಾಹಿತಿ ಶ್ರೀಮತಿ ನರಸಿಂಹರಾಜುರವರ ಮಡದಿಗೆ ಕಳೆದ ವಾರ ನೀಡಿರುವೆ. ನಗಿಸಿದ ದೇವರಿಗೆ ಖಂಡಿತಾ ಸ್ಮಾರಕ ನಿರ್ಮಾಣವಾಗುತ್ತದೆ. ಧನ್ಯವಾದಗಳು' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕರ್ಲಿ ಹೇರ್, ಹಳದಿ ಡ್ರೆಸ್: ಸಂಗೀತಾ ಶೃಂಗೇರಿ ಹೊಸ ಅವತಾರ ನೋಡಿ ನೆಟ್ಟಿಗರು ಏನಂದ್ರು?
ಹಿಮವದ್ ಗೋಪಾಲಸ್ವಾಮಿ ದೇವರ ದರ್ಶನಕ್ಕೆ ಬಂದ ನಟ ಚಿಕ್ಕಣ್ಣ-ಪಾವನಾ: ಅಲ್ಲೇ ಸಿಕ್ತು ಸಿಹಿ ಸುದ್ದಿ!