ನಾನು ಇನ್ನೂ ಬೆಳೆಯುತ್ತಿರುವ ನಟ ನಿಮ್ಮ ಬ್ಯಾನರ್‌ನಲ್ಲಿ ಚಾನ್ಸ್‌ ಕೊಡಿ; ಧನಂಜಯ್‌ ಮುಂದೆ ದರ್ಶನ್ ಬೇಡಿಕೆ

Published : Oct 19, 2023, 10:09 AM IST
ನಾನು ಇನ್ನೂ ಬೆಳೆಯುತ್ತಿರುವ ನಟ ನಿಮ್ಮ ಬ್ಯಾನರ್‌ನಲ್ಲಿ ಚಾನ್ಸ್‌ ಕೊಡಿ; ಧನಂಜಯ್‌ ಮುಂದೆ ದರ್ಶನ್ ಬೇಡಿಕೆ

ಸಾರಾಂಶ

ಧನಂಜಯ್ ನಿರ್ಮಾಣಕ್ಕೆ ಸಾಥ್ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ದಾಸ ಸರಳತೆಗೆ ಅಭಿಮಾನಿಗಳು ಫಿದಾ...

ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ 'ಟಗರು ಪಲ್ಯ' ಚಿತ್ರದ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಡಾಲಿ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಸಿನಿಮಾ ತಯಾರಾಗುತ್ತಿದ್ದು ಅದ್ಧೂರಿಯಾಗಿ ಟ್ರೈಲರ್ ರಿಲೀಸ್ ಕಾರ್ಯಕ್ರಮ ನಡೆದಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಕೊಟ್ಟಿದ್ದಾರೆ. 

ವೇದಿಕೆ ಮೇಲೆ ಮಾತನಾಡಿದ ದರ್ಶನ್ ಚಿತ್ರತಂಡದ ಪ್ರತಿಯೊಬ್ಬ ಕಲಾವಿದರನ್ನು ಹೊಗಳಿದ್ದಾರೆ. ಈಗಾಗಲೆ ಟ್ರೈಲರ್ ನೋಡಿದ್ದೆ ಮತ್ತೊಮ್ಮೆ ನೋಡುತ್ತಿರುವೆ ನಮ್ಮ ನೆಲದ ಸೊಗಡು ಇದರಲ್ಲಿದೆ ಎಂದು ದರ್ಶನ್ ಹೊಗಳಿದ್ದರೆ. 

'ಟ್ರೈಲರ್ ನೋಡಿದ ಕ್ಷಣ ಖುಷಿ ಆಯ್ತು. ಮೊನ್ನೆ ಮತ್ತೆ ನೋಡಿದಾಗ ಇವರಿಗೆ ಹೇಳಿದೆ ಟಗರು ಪಲ್ಯ ಅಂತ ಯಾಕೆ ಸಿನಿಮಾಗೆ ಹೆಸರು ಇಟ್ಟಿದ್ದು ಎಂದು. ಟಗರು ಖಲಿಜಾ ಬೋಟಿ ಅಂತ ಏನಾದರೂ ಇಡಬೇಕಿತ್ತು ಅಲ್ವಾ ಎಂದೆ. ಆ ಮೇಲೆ ಸಿನಿಮಾ ಕಥೆಗೆ ತಕ್ಕಂತೆ ಇದೆ ಎಂದು ಸುಮ್ಮನಾದೆ. ಅಮೃತಾ ತುಂಬಾ ಚೆನ್ನಾಗಿ ನಟಿಸಿದ್ದೀಯ. ನಮ್ಮದು ಚಿಕ್ಕ ಚೊಕ್ಕ ನೀಟ್ ಆದ ಇಂಡಸ್ಟ್ರಿ. ಇಲ್ಲಿಗೆ ನಿನಗೆ ಆತ್ಮೀಯ ಸ್ವಾಗತ' ಎಂದು ದರ್ಶನ್ ಮಾತನಾಡಿದ್ದಾರೆ. 

ಸೀರೆಯ ಮಹಿಮೆಯೋ? ಮೊಗದ ಕಾಂತಿಯೋ ನಾ ಅರಿಯೆ ಸಖಿ; ನೆನಪಿರಲಿ ಪ್ರೇಮ್‌ ಮಗಳ ಫೋಟೋ ವೈರಲ್!

'ಟಗರು ಲಪ್ಯ ಸಿನಿಮಾದ ಬಗ್ಗೆ ನಮ್ಮ ಜನರಿಗೆ ಹೇಳಬೇಕಾ? ನಮ್ಮ ಸೋಗಡಿನ ಸಿನಿಮಾ ಇಲ್ಲ ಅಂತಾರೆ....ಆದರೆ ಅಂತ ಸಿನಿಮಾ ಮಾಡಿದರೆ ನೋಡಲ್ಲ. ಇದು ಎಲ್ಲಾಆ ಸೊಗಡು ತುಂಬಿರುವ ಸಿನಿಮಾ. ಅದು ಟ್ರೈಲರ್‌ನಲ್ಲಿ ಕಾಣಿಸುತ್ತದೆ. ಹೀರೋಗಳು ಏನ್ ಮಾಡ್ತಾರೆ ಅಂತ ಜನರು ಕೇಳುತ್ತಾರೆ ಅವರಿಗೆ ನಾನು ಇಂದು ಎದೆ ಮುಟ್ಟಿಕೊಂಡು ಹೇಳುತ್ತೀನಿ ...ಕೆಲವು ಹೀರೋಗಳು ಪ್ರೊಡ್ಯೂಸ್ ಮಾಡುತ್ತಾರೆ ಅಂತ. ಡಾಲಿ ಫಿಕ್ಚರ್ ದೊಡ್ಡ ಪ್ರೊಡಕ್ಷನ್ ಕಂಪನಿ ಆಗಲಿ ಇದು ಅವರ ಮೂರನೇ ಸಿನಿಮಾ. ಇದರಲ್ಲಿ ಎರಡು ವಿಧಗಳಿದೆ. ಹಠದಿಂದ ಬೆಳೆಯೋದು ಬೇರೆ ಛಲದಿಂದ ಬೆಳೆಯೋದು ಬೇರೆ. ಹಠದಿಂದ ಬೆಳೆಯುವುದಕ್ಕಿಂತ ಚಲದಿಂದ ಬೆಳೆಯಲಿ. ನಟನೆ ಕಲಿಯಲು ಎಲ್ಲೋ ಹೋಗಬೇಕಿಲ್ಲ ಎಂಜಿನಿಯರಿಂಗ್ ಮಾಡಿ ಇಲ್ಲಿಗೆ ಬಂದುಬಿಡಿ' ಎಂದು ದರ್ಶನ್ ಧನಂಜಯ್, ನಾಗಭೂಷಣ್ ಅಮೃತಾ ಕಾಲೆಳೆದಿದ್ದಾರೆ. 

ಒಂದು ಸಲವೂ ಕಟ್ ಮಾಡದೆ ಬೆಳೆಸಿದ ಕೂದಲನ್ನು ಕ್ಯಾನ್ಸರ್‌ ರೋಗಿಗಳಿಗೆ ದಾನ ಮಾಡಿ ಪ್ರೇಮ್ ಪುತ್ರಿ; ಫೋಟೋ ವೈರಲ್!

'ನಾವು ಚಿಕ್ಕ ನಟ ನಿಮ್ಮ ಬ್ಯಾನರ್‌ನಲ್ಲಿ ನನಗೂ ಅವಕಾಶ ಕೊಡಿ. ದಯವಿಟ್ಟು ನಿಮ್ಮ ಬ್ಯಾನರ್‌ನಲ್ಲಿ ಒಂದು ಚಾನ್ಸ್‌ ಕೊಡಿ ಖಂಡಿತ ಬಂದು ಸಿನಿಮಾ ಮಾಡ್ತೀನಿ. ನಮಗೆ ಅದು ಇಂದು ಅಂತಿಲ್ಲ ಕೆಲಸ ಮಾಡುತ್ತೇವೆ ನಾನು ಇನ್ನೂ ಬೆಳೆಯುತ್ತಿರುವ ನಟ' ಎಂದಿದ್ದಾರೆ ದರ್ಶನ್. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?