
ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಹೃದಯಾಘಾತಕ್ಕೆ ಒಳಗಾಗಿದ್ದ ಅರ್ಜುನ್ ಜನ್ಯಾ, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ಸಲೆ ಮೇರೆಗೆ ಒಂದು ತಿಂಗಳು ವಿಶ್ರಾಂತಿಯಲ್ಲಿದ್ದರು. ಹೀಗಾಗಿ ಅವರು ಒಪ್ಪಿಕೊಂಡಿದ್ದ ಬಹುತೇಕ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಿಂತೇ ಹೋಗಿದ್ದವು.
ಈಗ ಪುನಃ ಮ್ಯೂಸಿಕ್ ರೂಮ್ಗೆ ವಾಪಸ್ಸು ಆಗಿದ್ದು, ಸರದಿಯಲ್ಲಿ ಕಾಯುತ್ತಿರುವ ಚಿತ್ರಗಳಿಗೆ ರಾಗ ಸಂಯೋಜನೆ, ಹಿನ್ನೆಲೆ ಸಂಗೀತ ಕೂರಿಸುವ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಆರೋಗ್ಯದಿಂದ ಚೇತರಿಸಿಕೊಂಡ ಬಂದು ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ಸಂಗೀತ ಲೋಕಕ್ಕೆ ಮರಳಿದ ಅರ್ಜುನ, ಮತ್ತೆ ಸಿಗಲಿದೆ ರಸದೌತಣ
ಅದೇ ಉತ್ಸಾಹದಲ್ಲಿ ಮರಳಿರುವ ಅರ್ಜುನ್ ಜನ್ಯಾ ಅವರನ್ನು ಕಂಡು ಜೋಗಿ ಪ್ರೇಮ್ ಅವರು ‘ಮ್ಯೂಸಿಕ್ ಬೀಟ್ಸ್ ಇರೋವರೆರ್ಗೂ ನಮ… ಹಾರ್ಟ… ಬೀಟ್ ಯಾವತ್ತೂ ನಿಲ್ಲಲ್ಲ’ ಎಂದು ಅರ್ಜುನ್ ಜನ್ಯಾ ಅವರಿಗೆ ಶುಭ ಕೋರಿದ್ದಾರೆ. ‘ಕೋಟಿಗೊಬ್ಬ 3’ ಸೇರಿದಂತೆ ಅರ್ಜುನ್ ಜನ್ಯ ಕೈಯಲ್ಲಿ ಸಾಕಷ್ಟುಚಿತ್ರಗಳಿವೆ. ಅವರ ಸಂಗೀತ ನಿರ್ದೇಶನದ ಹಲವು ಚಿತ್ರಗಳು ಇದೀಗ ಬಿಡುಗಡೆಗೂ ರೆಡಿಯಾಗಿವೆ. ಈ ಪೈಕಿ ‘ರಾಬರ್ಟ್’ ಚಿತ್ರವೂ ಒಂದು. ಇನ್ನೂ ಅರ್ಧಕ್ಕೆ ನಿಂತಿದ್ದ ಸಣ್ಣಪುಟ್ಟಕೆಲಸಗಳನ್ನು ಈಗ ಪೂರ್ಣಗೊಳಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.