
ನಿರ್ದೇಶಕ, ನಟ ನಾಗಶೇಖರ್ ಮತ್ತು ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಕಾಂಬಿನೇಷನ್ ನಲ್ಲಿ ಪಾದರಾಯ ಎನ್ನುವ ಸಿನಿಮಾ ಅನೌನ್ಸ ಆಗಿತ್ತು. ಈ ಸಿನಿಮಾ ಮೂಲಕ ತೆಲುಗು ಗಾಯಕಿ ಮಂಗ್ಲಿ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಆದರೆ ಈ ಸಿನಿಮಾ ಘೋಷಣೆಯಾದ ಬಳಿಕ ಯಾವುದೇ ಮಾಹಿತಿ ಇರಲಿಲ್ಲ. ಇದೀಗ ಪಾದರಾಯ ವಿವಾದದ ಮೂಲಕ ಸದ್ದು ಮಾಡುತ್ತಿದೆ. ಪಾದಯಾರ ಸಿನಿಮಾ ಹೆಸರಲ್ಲಿ ಹಣದ ದಂಧೆ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.
ಚಕ್ರವರ್ತಿ ಚಂದ್ರಚೂಡ್ ಪೋಸ್ಟ್
ನಾಲ್ಕು ತಿಂಗಳ ಹಿಂದೆ ಪಾದರಾಯ ಎಂಬ ಶೀರ್ಷಿಕೆ ಅಡಿ ಒಂದು ಸಿನಿಮಾ ಘೋಷಣೆಯಾಯ್ತು. ಇದು ಕೇವಲ ಘೋಷಣೆಯಾಗಿಯೇ ಉಳಿಯಿತು, ಛಾಯಾಗ್ರಹಣ ಶ್ರೀ ಸತ್ಯ ಹೆಗಡೆ ಸಂಗೀತ ಶ್ರೀ ಅಜನೀಶ್ ಲೋಕನಾಥ್ ಎಡಿಟರ್ ಆಂಟೋನಿ, ನಾಯಕಿಯಾಗಿ ತೆಲುಗಿನ ಗಾಯಕಿ ಮಂಗ್ಲಿ, ನಾಯಕ ನಟರಾಗಿ ನಿರ್ದೇಶಕ ನಟ ಶ್ರೀ ನಾಗಶೇಖರ್, ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಚಕ್ರವರ್ತಿ ಡಿಜೆ ಎಂಬ ನಾನು ಎಂದು ನಿಕ್ಕಿಯಾಗಿತ್ತು. ಇವಿಷ್ಟೂ ಘೋಷಣೆಯ ಹಂತದಲ್ಲೇ ಉಳಿದವು. ಮೇಲ್ಕಂಡ ಯಾರೊಬ್ಬರಿಗೂ ಈ ಸಿನಿಮಾ ಕುರಿತಂತೆ ಯಾವುದೇ ಒಪ್ಪಂದಗಳಾಗಲಿ. ಹಣಕಾಸಿನ ಮುಂಗಡವಾಗಲಿ ನಿರ್ದೇಶಕನಾದ ನನ್ನರಿವಿಗೆ ಬಂದಂತೆ ಆಗಿರುವುದಿಲ್ಲ. ಈ ನಡುವೆ ಶ್ರೀ ನಾಗಶೇಖರ್ ಶ್ರೀ ಜಾಕ್ ಮಂಜು ಅವರು ನಿರ್ಮಾಪಕರೆಂದು ಹೇಳಲಾಗಿತ್ತು. ಅಲ್ಲದೇ ಎರಡೂವರೆ ತಿಂಗಳ ಹಿಂದೆಯೇ ನಿರ್ಮಾಪಕರಾದ ಜಾಕ್ ಮಂಜು ಅವರು ನಾನು ಈ ಸಿನಿಮಾ ನಿರ್ಮಿಸುತ್ತಿಲ್ಲವೆಂದು ಮೌಖಿಕವಾಗಿ ಅವರ ಜೆಪಿ ನಗರದ ಕಚೇರಿಯಲ್ಲಿ ನನಗೂ ನಾಗಶೇಖರ್ ರವರಿಗೂ ವ್ಯವಹಾರಿಕ ಕಾರಣಗಳನ್ನು ನೀಡಿ ಸ್ಪಷ್ಟಪಡಿಸಿದರು.
ಈ ನಡುವೆ ನಿರ್ಮಾಪಕ - ನಿರ್ದೇಶಕರಾದ ಶ್ರೀ ಆರ್ ಚಂದ್ರು ಅವರು ನಿರ್ಮಾಣ ಮಾಡುತ್ತೇನೆಂದು ಮೌಖಿಕವಾಗಿ ಹೇಳಿದರಾದರೂ ಯಾವುದೇ ಒಪ್ಪಂದ ಮಾಡಿಕೊಂಡಿರುವುದಿಲ್ಲ. ರಚನೆಕಾರ ನಿರ್ದೇಶಕನಾದ ನನಗೆ ಈ ವರೆಗೂ ಈ ಮೇಲ್ಕಂಡ ಯಾವುದೇ ತಂತ್ರಜ್ಞರು ನಿರ್ಮಾಪಕರಿಂದ ಯಾವುದೇ ಒಪ್ಪಂದ ಪತ್ರ ಮುಂಗಡ ಹಣ ಸಿನಿಮಾ ತಯಾರಿ ಯಾವುದರ ಕುರಿತಾಗಿ ಯಾವೊಂದು ವಿಷಯವೂ ನಡೆದಿರುವುದಿಲ್ಲ.
ಈ ನಡುವೆ ಸಿನಿಮಾಗೆ ಸಂಬಂಧವಿಲ್ಲದ ವ್ಯಕ್ತಿಯೊಬ್ಬರು ನಾಗಶೇಖರ್ ಅವರಿಗೆ ಅವರ ವ್ಯಯಕ್ತಿಕವಾಗಿ ಎರಡೂ ಲಕ್ಷದ ನಲವತ್ತು ಸಾವಿರ ರುಪಾಯಿ ಹಣ ಕೊಟ್ಟಿರುವ ದಾಖಲಾತಿ ಹಿಡಿದುಕೊಂಡು ನಾನೇ ಇದರ ನಿರ್ಮಾಪಕ - ಆರ್ ಚಂದ್ರು ಅವರಿಂದ ನಾಗಶೇಖರ್ ಗೆ ಐದು ಕೋಟಿ ರುಪಾಯಿ ಹಣದ ಒಪ್ಪಂದ ಈ ಸಿನಿಮಾ ಕಥೆಯ ಮೇಲಾಗಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಅಲ್ಲದೇ ನಾಗಶೇಖರ್ ಅವರು ಆಡಿಯೋ ರೈಟ್ಸ್ ಮಾರಾಟ ಮಾಡಿದ್ದಾರೆ ಯಾರೂ ಈ ಸಿನಿಮಾ ಮಾಡಬೇಡಿ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಓರ್ವ ನಿರ್ದೇಶಕನ ಗಮನಕ್ಕೇ ಬಾರದೇ ಆಡಿಯೋ ರೈಟ್ಸ್ ಮಾರಾಟ ಐದು ಕೋಟಿ ಒಪ್ಪಂದ ಅಥವ ಯಾವುದೇ ಹಣದ ವ್ಯವಹಾರ ಮಾಡುವುದು ಅಕ್ಷಮ್ಯ ಅಪರಾಧ. ಈ ಕುರಿತು ವಿಚಾರಿಸಲಾಗಿ ಈ ಬಗೆಯ ಪ್ರಯತ್ನಗಳು ನಡೆಯಿತು ಆದರೆ ಸಫಲವಾಗಿಲ್ಲವೆಂದು ತಿಳಿದು ಬಂತು.
ಈ ಕಥೆಯನ್ನೂ ನಾನು ಚಿತ್ರಕಥೆಯ ಸಹಿತ 2019 ರಲ್ಲೇ the cinematograph act 1952 ಪ್ರಕಾರ ನೊಂದಾಯಿಸಿ ಸಮಸ್ತ ದಾಖಲಾತಿ ಮಾಡಿಟ್ಟಿದ್ದೆ. (ನನ್ನ ಪುಣ್ಯ ) ಈ ಕಥೆ ಅಂಜನಾದ್ರಿ ಸುತ್ತಮುತ್ತಲಿನ ಭಾಗದ ಚಪ್ಪಲಿ ಕಳ್ಳ ಮತ್ತವನ ಹೆಂಡತಿಯ ಕಥೆಯಾಗಿರುತ್ತದೆ. ಇದನ್ನು ರೂಪಿಸಲು ಮೂರೂವರೆ ವರುಷದಲ್ಲಿ ಏಳು ರಾಜ್ಯ ಸುತ್ತಿದ್ದೇನೆ. ಹಲವಾರು ಗ್ರಂಥ ಓದಿದ್ದೇನೆ. ನನ್ನ ಹಣ ಬೆವರು ಹಸಿವು ಕಟ್ಟಿ ಕನಸುಗಣ್ಣುಗಳಿಂದ ಬರೆದಿಟ್ಟುಕೊಂಡಿದ್ದೇನೆ. ಹೊಟ್ಟೆಗೆ ಸಿನಿಮಾ ಸೆಟ್ ನ ಇಡ್ಲಿಯೋ ಅನ್ನವನ್ನೊ ತಿಂದಿರುವ ಯಾವೊಬ್ಬ ವ್ಯಕ್ತಿಯೂ ಕಂಡವರ ಕಣ್ಣಿಂದ ಉದುರಿದ ಕನಸುಗಳನ್ನು ಕಣ್ಣೀರಾಗಿಸುವುದಿಲ್ಲ. ಈ ಕಥೆ ಮತ್ತು ಸಿನಿಮಾ ದ ಹಕ್ಕು ಸಂಪೂರ್ಣ ಡಿ ಜೆ ಚಕ್ರವರ್ತಿ (ಚಂದ್ರಚೂಡ್ ) ಎಂಬ ನನ್ನದೇ ಆಗಿರುತ್ತದೆ.ಯಾರಾದರೂ ಈ ವಿಷಯದಲ್ಲಿ ಯಾರಿಗೇ ಹಣಕೊಟ್ಟಿದ್ದರೂ ನಾನು ಹೊಣೆಯಲ್ಲ. ನಾನು ಮುಂದಿನ ದಿನಗಳಲ್ಲಿ ಪಾದರಾಯ ಎಂದು ನಾಮಕರಣ ಮಾಡಿದ ಈ ಚಿತ್ರವನ್ನು ನಾನೇ ನಟಿಸಿ ನಿರ್ದೇಶಿಸಲಿದ್ದೇನೆ. ಅಥವಾ ನನ್ನ ವಿವೇಚನೆಗೆ ತಕ್ಕಂತಹ ತಂಡದೊಂದಿಗೆ ಮಾಡಬಹುದು.
ಈ ಕುರಿತಾಗಿ ದೂರವಾಣಿ ಸಂಭಾಷಣೆಯ ಮುಖಾಂತರ ಶ್ರೀ ಆರ್ ಚಂದ್ರು ರವರಲ್ಲಿ ಚರ್ಚಿಸಲಾಗಿ ನಾನು ನಾಗಶೇಖರ್ ರವರಿಗೆ ಯಾವುದೇ ಮಾತುಕೊಟ್ಟಿಲ್ಲ ಐದು ಕೋಟಿ ಕೊಟ್ಟು ಸಿನಿಮಾ ಮಾಡುತ್ತೇನೆಂದು ಯಾವುದೇ ರೀತಿಯಲ್ಲಿ ಮುಂದಾಗಿಲ್ಲವೆಂದು ಸ್ಪಷ್ಟನೆ ಕೊಟ್ಟಿರುತ್ತಾರೆ. ಕೆಲವು ದುಷ್ಕರ್ಮಿಗಳು ವಿಕೃತರು ಈ ಕಥೆಯನ್ನೇ ಸೋಷಿಯಲ್ ಮೀಡಿಯಾ/ ಡಿಜಿಟಲ್ ಮೀಡಿಯಾ /ನಾನು ಕಥೆಯನ್ನು ನಾರ್ಮಾಪಕರಿಗೆ ತಂತ್ರಜ್ಝರಿಗೆ ಚರ್ಚೆಯಲ್ಲಿ ರಿಡಿಂಗ್ ಕೊಡುವ ಧ್ವನಿ ಮುದ್ರಿಸಿ ಹೊರತಂದು ಸಿನಿಮಾ -ಮಾನವೀಯತೆ ಗೇ ದ್ರೋಹ ಬಗೆಯುವ ಪ್ರಯತ್ನ ಪಡುವುದೂ ಗಮನಕ್ಕೆ ಬಂದಿದೆ,ಅಂಥದ್ದೇನಾದರೂ ಕಂಡು ಬಂದರೆ ಉಗ್ರ ಕಾನೂನು ಕ್ರಮಕ್ಕೂ ಮುಂದಾಗಲು ಈಗಾಗಲೇ ಸರ್ವ ತಯಾರಿ ನಡೆದಿದೆ. ಈ ಕುರಿತಾಗಿ ಯಾರೂ ಯಾವುದೇ ಹಣಕಾಸಿನ ವ್ಯವಹಾರಗಳನ್ನು ಮಾಡಿ ತೊಂದರೆಗೀಡಾಗಬಾರದೆಂದು ಮತ್ತು ಈ ಬಗೆಯ ಪ್ರಯತ್ನಗಳು ನಡೆದರೆ ನನ್ನ ಗಮನಕ್ಕೆ ತರಲು ವಿನಂತಿಸುತ್ತೇನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.