
ದರ್ಶನ್ ‘ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂಬ ರಸಋುಷಿ ಕುವೆಂಪು ಸಾಲಿನೊಂದಿಗೆ ಶುಭಾಶಯ ತಿಳಿಸಿದರೆ, ಸುದೀಪ್, ‘ಹೆತ್ತ ತಾಯಿ ಕನ್ನಡತಿಯಾದರೆ, ಹೊತ್ತ ತಾಯಿ ಕನ್ನಡ..’ ಎಂದು ಅಭಿಮಾನ ಮೆರೆದಿದ್ದಾರೆ. ಯಶ್, ‘ಈ ಮಣ್ಣಿನ ಪ್ರತಿ ಕಣವೂ ಬಂಗಾರ... ಕನ್ನಡಾಂಬೆ ನೀನೆ ಭಾರತ ಮಾತೆಯ ಸಿಂಧೂರ’ ಎಂದಿದ್ದಾರೆ. ಪುನೀತ್ ರಾಜ್ಕುಮಾರ್ ಕನ್ನಡವೇ ನಿತ್ಯ ಎಂದು ಹಾರೈಸಿದ್ದಾರೆ.
ಇನ್ನು 1 ವರ್ಷ ಕನ್ನಡ ಕಾಯಕ ವರ್ಷ: ಭಾಷೆ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಕ್ರಮ!
ರಮೇಶ್ ಅರವಿಂದ್ ಕೆಂಪು ಅಂಗಿ, ಹಳದಿ ಮಾಸ್ಕ್ನಲ್ಲಿ ಕನ್ನಾಡಾಭಿಮಾನ ಮೆರೆದರೆ, ಧ್ರುವ ಸರ್ಜಾ, ಕನ್ನಡಾಂಬೆಗೆ ಜೈ ಅಂದಿದ್ದಾರೆ. ‘ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯ… ಒಲಸಾಕಿದ್ರೂನು ಮೂಗ್ನಲ… ಕನ್ನಡ ಪದವಾಡ್ತೀನಿ..’ ಅಂತ ಅಬ್ಬರಿಸಿದ್ದು ಗಣೇಶ್. ‘ಎಲ್ಲಾ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯಗಳು’ ಎಂದು ರಮ್ಯಾ ಶುಭ ಕೋರಿದ್ದಾರೆ. ‘ನವೆಂಬರ್ 1 ಕನ್ನಡಿಗರಾಗದಿರಿ, ನಂಬರ್ 1 ಕನ್ನಡಿಗರಾಗಿ’ ಎಂದಿದ್ದು ರಚಿತಾ ರಾಮ್.
ಹುಬ್ಬಳ್ಳಿ: ನೈಋುತ್ಯ ರೈಲ್ವೆಯಲ್ಲಿ ಕನ್ನಡದ ಕಂಪು..!
ನಮ್ಮ ಭಾಷೆ, ನಮ್ಮ ಧ್ವನಿ, ನಮ್ಮ ಸಂಪತ್ತು ಕನ್ನಡ. ಇಂದು ನಮ್ಮ ಹಬ್ಬ, ಎಲ್ಲರೂ ಒಂದಾಗಿ ಸಂಭ್ರಮಿಸೊಣ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂಬುದು ಬಹುಭಾಷಾ ನಟ ಪ್ರಕಾಶ್ ರಾಜ್ ಹಾರೈಕೆ. ಉಪೇಂದ್ರ, ಜಗ್ಗೇಶ್ ಸೇರಿದಂತೆ ಹಲವು ನಟ ನಟಿಯರು ಕನ್ನಡ ಹಬ್ಬಕ್ಕೆ ಶುಭ ಕೋರಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.