ಶರಾವತಿ ಕಣಿವೆಯಲ್ಲಿ ಸಂಯುಕ್ತಾ ಹೊರನಾಡು..!

Published : Jul 07, 2021, 11:11 AM ISTUpdated : Jul 07, 2021, 12:36 PM IST
ಶರಾವತಿ ಕಣಿವೆಯಲ್ಲಿ ಸಂಯುಕ್ತಾ ಹೊರನಾಡು..!

ಸಾರಾಂಶ

ಶರಾವತಿ ಕಣಿವೆ ಪ್ರದೇಶದಲ್ಲಿ ನಟಿ ಸಂಯುಕ್ತಾ ಹೊರನಾಡು ಬೈಕಿಂಗ್ ಸಾಹಸದಲ್ಲಿ ತೊಡಗಿರೋ ನಟಿ

ಪಶ್ಚಿಮ ಘಟ್ಟದ ದಟ್ಟ ಕಾಡುಗಳ ಶರಾವತಿ ಕಣಿವೆ ಪ್ರದೇಶದಲ್ಲಿ ನಟಿ ಸಂಯುಕ್ತಾ ಹೊರನಾಡು ಬೈಕಿಂಗ್ ಸಾಹಸದಲ್ಲಿ ತೊಡಗಿದ್ದಾರೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಗಾಗಿ ‘ವೈಲ್ಡ್ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಡಾಕ್ಯುಮೆಂಟರಿಯೊಂದನ್ನು ಮಾಡುತ್ತಿದ್ದಾರೆ.

ಅದರಲ್ಲಿ ಸಂಯುಕ್ತಾ ಹೊರನಾಡು ಹಾಗೂ ಅಂಕಿತಾ ಕುಮಾರ್ ನಟಿಸುತ್ತಿದ್ದಾರೆ. ಇದರ ಶೂಟಿಂಗ್ ಜೋಗ, ಶರಾವತಿ ಕಣಿವೆ ಪ್ರದೇಶ ಮೊದಲಾದೆಡೆ ನಡೆಯುತ್ತಿದೆ.

ಈ ಬಗ್ಗೆ ಮಾತನಾಡಿದ ಸಂಯುಕ್ತಾ, ‘ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳ ನಡುವೆ ಮುಂಜಾನೆ ನಾಲ್ಕು ಗಂಟೆ ಹೊತ್ತಿಗೆ ಶೂಟಿಂಗ್ ಶುರುವಾದಾಗ ಎಲ್ಲೆಡೆ ಮಂಜು. ಈ ಚಿತ್ರಕ್ಕಾಗಿ ನಾನು ಬೈಕ್ ರೈಡಿಂಗ್ ಕಲಿತೆ. ಕಾಡಿನ ಮಧ್ಯ ಮಂಜಿನ ನಡುವೆ ರೈಡಿಂಗ್ ಅದ್ಭುತ ಅನುಭವ.

ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್, KGF 2 ರಿಲೀಸ್ ಸುಳಿವು ಕೊಟ್ಟ ನಿರ್ದೇಶಕ

ಈ ಚಿತ್ರದಲ್ಲಿ ನಾನು ಮತ್ತು ಅಂಕಿತಾ ಬೈಕ್ ಟ್ರಾವೆಲ್ ಕ್ರೇಜ್ ಇರುವ ಹುಡುಗಿಯರು. ಅಷ್ಟಾಗಿ ಪ್ರವಾಸಿಗರ ಗಮನಸೆಳೆಯದ ಪ್ರವಾಸೋದ್ಯಮ ಜಾಗಗಳಿಗೆ ನಾವು ಭೇಟಿ ನೀಡಿ ಅಲ್ಲಿನ ಸೌಲಭ್ಯ, ವಿಶೇಷತೆಗಳನ್ನು ಎಕ್‌ಸ್ಪ್ಲೋರ್ ಮಾಡುತ್ತೀವಿ. ಮುಂದಿನ ತಿಂಗಳು ಈ ವೀಡಿಯೋ ರಿಲೀಸ್ ಆಗಲಿದೆ’ ಎಂದರು.

ಈವರೆಗೆ ಹೆಚ್ಚಿನವರು ಎಕ್‌ಸ್ ಪ್ಲೋರ್ ಮಾಡಿರದ ಟೂರಿಸ್‌ಟ್ ಜಾಗಗಳ ಬಗ್ಗೆ ಪ್ರಚಾರ ಕೊಡುವುದು ಈ ವಿಡಿಯೋದ ಉದ್ದೇಶ. ವೈಲ್‌ಡ್ ಕರ್ನಾಟಕ ಚಿತ್ರದ ಅಮೋಘವರ್ಷ ಅವರ ಜೊತೆಗೆ ಕೆಲಸ ಮಾಡಿದ್ದು ಮರೆಯಲಾರದ ಅನುಭವ. ? ಸಂಯುಕ್ತಾ ಹೊರನಾಡು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!