ದೇಶ ಭಕ್ತಿ ಸಾರುವ ಸಿನಿಮಾ ನಮೋ ಭಾರತ್: ರಮೇಶ್ ಪರವಿನಾಯ್ಕರ್

By Vaishnavi ChandrashekarFirst Published Mar 1, 2024, 12:53 PM IST
Highlights

ಗಾಂಧೀಜಿ ಕನಸು ಆದ್ಮೇಲೆ ಮತ್ತೊಮ್ಮೆ ಸೂಪರ್ ಹಿಟ್ ಕೊಡಲು ಮುಂದಾದ ರಮೇಶ್ ಪರವಿನಾಯ್ಕರ್. ಅದೇ ನಮೋ ಭಾರತ....

ಬೆಳಗಾವಿ ಮೂಲಕ ರಮೇಶ್ ಪರವಿನಾಯ್ಕರ್ ನಟನೆ, ನಿರ್ದೇಶನ, ನಿರ್ಮಾಣದ ‘ನಮೋ ಭಾರತ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕುರಿತು ಅವರ ಮಾತುಗಳು ಇಲ್ಲಿವೆ-

- ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಜನರಿಗೆ ತಲುಪಿಸಲು ‘ಗಾಂಧೀಜಿ ಕನಸು’ ಸಿನಿಮಾ ಮಾಡಿದ್ದೆ. ಇದೀಗ ಸೈನಿಕನ ಕಷ್ಟಗಳು, ಗ್ರಾಮೀಣ ಪ್ರದೇಶದ ತೊಂದರೆಗಳು ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಲು ಈ ಸಿನಿಮಾ ಮಾಡಿದ್ದೇನೆ.

- ರೈತನ ಮಗನೊಬ್ಬ ಸೈನಿಕನಾಗಿ ಕಾಶ್ಮೀರಕ್ಕೆ ಹೋಗುವ ಕತೆ ಹೊಂದಿರುವ ಸಿನಿಮಾ ಇದು. ಮೊದಲಾರ್ಧದಲ್ಲಿ ಕಾಶ್ಮೀರದ ಸ್ಥಿತಿಗತಿ ಬಗ್ಗೆ ತೋರಿಸಲಾಗುತ್ತದೆ. ದ್ವಿತೀಯಾರ್ಧದಲ್ಲಿ ಉತ್ತರ ಕರ್ನಾಟಕದ ಹಳ್ಳಿಯ ತಾಪತ್ರಯಗಳನ್ನು ಹೇಳಿದ್ದೇನೆ. ಜನ ನೋಡಿ ಮೆಚ್ಚುತ್ತಾರೆಂಬ ನಂಬಿಕೆ ಇದೆ.

ಆ ಸಿನಿಮಾ ಶೂಟಿಂಗ್‌ ಅಷ್ಟೂ ದಿನ ಅತ್ತುಕೊಂಡೇ ಹೋಗಿದ್ದೆ ಅಷ್ಟು ನೋಯಿಸಿದ್ದಾರೆ: ಸಂಯುಕ್ತ ಹೆಗ್ಡೆ

- ಎಲ್ಲವನ್ನೂ ಕಮರ್ಷಿಯಲ್ ಸಿನಿಮಾ ರೀತಿಯಲ್ಲಿ ತೋರಿಸಿದ್ದೇನೆ. ಒಟ್ಟಾರೆ ಇದೊಂದು ದೇಶಭಕ್ತಿ ಸಾರುವ ಸಿನಿಮಾ.

- ಈ ಹಿಂದೆ ಧಾರವಾಡ ರಂಗಾಯಣದ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದೇನೆ. ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿ ದುಡಿದಿದ್ದೇನೆ. ಈ ಸಿನಿಮಾ ಮೂಲಕ ಜನರ ಮುಂದೆ ಬಂದಿದ್ದೇನೆ. ಸಿನಿಮಾದಲ್ಲಿ ದೊಡ್ಡರಂಗೇಗೌಡ, ಸೋನಾಲಿ ಪಂಡಿತ್, ಸುಷ್ಮಾ ರಾಜ್‍, ಭವ್ಯಾ, ಮೈಕೋ ನಾಗರಾಜ್, ಬಿರಾದಾರ್, ಶಂಕರ್ ಭಟ್, ಮಾಸ್ಟರ್ ಯುವರಾಜ್ ಪರವಿನಾಯ್ಕರ್ ನಟಿಸಿದ್ದಾರೆ.

click me!