ಸಿಎಂ ಬದಲಾವಣೆ ಸೇರಿದಂತೆ ಏನೇ ಇದ್ರೂ ಹೈಕಮಾಂಡ್‌ನದ್ದೇ ತೀರ್ಮಾನ: ಸಚಿವ ಕೆ.ಜೆ.ಜಾರ್ಜ್

Published : Jan 24, 2025, 03:38 PM IST
ಸಿಎಂ ಬದಲಾವಣೆ ಸೇರಿದಂತೆ ಏನೇ ಇದ್ರೂ ಹೈಕಮಾಂಡ್‌ನದ್ದೇ ತೀರ್ಮಾನ: ಸಚಿವ ಕೆ.ಜೆ.ಜಾರ್ಜ್

ಸಾರಾಂಶ

ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ಏನೆ ಇದ್ರೂ ಕಾಂಗ್ರೆಸ್ ಹೈಕಮಾಂಡದ್ದೆ ಅಂತಿಮ ತೀರ್ಮಾನ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ನುಡಿದರು. 

ಬೀದರ್ (ಜ.24): ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ಏನೆ ಇದ್ರೂ ಕಾಂಗ್ರೆಸ್ ಹೈಕಮಾಂಡದ್ದೆ ಅಂತಿಮ ತೀರ್ಮಾನ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ನುಡಿದರು. ಬೀದರ್‌ನಲ್ಲಿ ಅಧಿಕಾರ ಹಂಚಿಕೆ ವಿಚಾರ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ತ್ಯಾಗ ಮನೋಭಾವದ ಚರಿತ್ರೆ ಇದೆ. ತ್ಯಾಗ ಮಾಡಿ ಬಂದವರು ಕಾಂಗ್ರೆಸ‌ನಲ್ಲಿ ಹೆಚ್ಚಿದ್ದಾರೆ, ಅಂತಾ ಸಿಎಂ ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿ ಇಂದಿರಾಗಾಂಧಿ, ರಾಜೀವ್‌ಗಾಂಧಿ ಬಲಿದಾನ ಮಾಡಿದ್ದಾರೆ. ಸೋನಿಯಾ ಗಾಂಧಿ ಪ್ರಧಾನ ಮಂತ್ರಿ ಸ್ಥಾನವನ್ನೇ ತ್ಯಾಗ ಮಾಡಿದ್ದಾರೆ ಎಂದರು.

ಬಿಜೆಪಿಯಲ್ಲಿ ತಟ್ಟೆಯಲ್ಲಿ ಹೆಗ್ಗಣವೇ ಬಿದ್ದಿದೆ, ನಮ್ಮಲ್ಲಿ ನೊಣದ ವಿಚಾರ ಹೇಳ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಕುರಿತು ಹೈಕಮಾಂಡ, ಸಿಎಲ್‌ಪಿ ತಿರ್ಮಾನ ಮಾಡುತ್ತೆ. ಹಾಗೇನು ಇದ್ದರೆ ಎಐಸಿಸಿ ವಿಕ್ಷಕರನ್ನು ಕಳುಹಿಸುತ್ತಾರೆ. ಸಿಎಲ್‌ಪಿ ನಿರ್ಧಾರ ತೆಗದುಕೊಂಡು ಯಾರ ಬೇಕಾದ್ರೂ ಮುಖ್ಯಮಂತ್ರಿ ಆಗಬಹುದು. ನಾನು ಸಚಿವನಾಗಿದ್ದೆ ಹೆಚ್ಚು, ಮುಖ್ಯಮಂತ್ರಿ ಆಕಾಂಕ್ಷಿ ಅಲ್ಲಾ ಎಂದರು.

ಮುಡಾ ವಿಪಕ್ಷದ ಕೆಲಸ: ಮುಡಾ ಮುಡಾ ಅಂತಾ ಮುಖ್ಯಮಂತ್ರಿ ಮೇಲೆ ಅಪಾದನೆ ಹೊರಿಸುವ ಕೆಲಸ ವಿಪಕ್ಷ ಮಾಡ್ತಾ ಇದೆ. ಭೂಮಿಯನ್ನು ಮುಡಾ ನೊಟಿಪೈ ಮಾಡುತ್ತಾರೆ, ಆಗ ಬಾಲಸುಬ್ರಹ್ಮಣ್ಯ ಅಂತಾ ದಕ್ಷ ಅಧಿಕಾರಿ ಇದ್ರು. ಬಾಲಸುಬ್ರಹ್ಮಣ್ಯ ಅಧ್ಯಕ್ಷತೆಯಲ್ಲಿ ಒಂದು ಕಮಿಟಿ ಇತ್ತು, ಆ ಕಮಿಟಿ ಆ ಜಾಗವನ್ನು ಯಾರಿಗೆ ನೊಟೀಪೈ ಮಾಡಬೇಕು ಅಂತಾ ತಿರ್ಮಾನ ಮಾಡಿದ್ದರು. ಅದನ್ನ ಅಂದಿನ ಸಚಿವರಾಗಿದ್ದ ಬಚ್ಚೇಗೌಡ ಅವರಿಗೆ ಕಳಿಸಿದ್ರು. ಒಮ್ಮೆ ನೊಟಿಪೈ ಆದ ಜಾಗವನ್ನ ಮತ್ತೆ ನೋಟಿಪೈ ಮಾಡೋಕೆ ಆಗೊಲ್ಲ. 

ಯಾರೋ ಕೂಗಿದರೆ ರಾಜಕಾರಣದಲ್ಲಿ ಬದಲಾವಣೆ ಆಗಿಬಿಡುತ್ತಾ?: ಸಚಿವ ಕೆ.ಜೆ.ಜಾರ್ಜ್

ಹಾಗೇನಾದ್ರೂ ಮಾಡಬೇಕಾದ್ರೆ ಲ್ಯಾಂಡ್ ಓನರ್ ಒಪ್ಪಬೇಕು. ಡಿನೊಟಿಪೈ ಆದ 5 ವರ್ಷದ ಬಳಿಕ ಸಿಎಂ ಬಾಮೈದ ಅವರೂ ತೆಗೆದುಕೊಳ್ತಾರೆ. ಅದೂ ಆದ 5 ವರ್ಷದ ಬಳಿಕ ಅವರ ಸಹೋದರಿಗೆ ಗಿಪ್ಟ್ ಮಾಡ್ತಾರೆ. ಇದರಲ್ಲಿ ಆ ಲ್ಯಾಂಡ್ ಮುಡಾಗೆ ಬಂದೆ ಇಲ್ಲಾ. ಸುಮ್ನೆ ಮುಡಾ ಮುಡಾ ಅಂತಾ ಸಿಎಂ ಮೇಲೆ ಆಪಾದನೆ ಮಾಡ್ತಾ ಇದ್ದಾರೆ. ಅದು ಮುಡಾ ಲ್ಯಾಂಡ್ ಅಲ್ಲಾ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ