ಗ್ಯಾರಂಟಿ​ಗಳ ಅನು​ಷ್ಠಾ​ನದ ಬಗ್ಗೆ ಒಂದು ವಾರ ಕಾದು ನೋಡಿ: ಪರಮೇಶ್ವರ್‌

Published : May 31, 2023, 06:59 AM IST
ಗ್ಯಾರಂಟಿ​ಗಳ ಅನು​ಷ್ಠಾ​ನದ ಬಗ್ಗೆ ಒಂದು ವಾರ ಕಾದು ನೋಡಿ: ಪರಮೇಶ್ವರ್‌

ಸಾರಾಂಶ

ಭರ​ವ​ಸೆ​ಗಳು ನಮ್ಮ ಪಕ್ಷದ ಸುಳ್ಳು ಭರ​ವ​ಸೆ​ಗ​ಳಲ್ಲ. ನುಡಿ​ದಂತೆ ನಡೆ​ಯಲು ಘೋಷಣೆ ಮಾಡಿ​ದ್ದೇವೆ. ಮೊದಲ ಸಂಪುಟ ಸಭೆ​ಯ​ಲ್ಲಿಯೇ ಇವುಗಳ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ಜೂನ್‌ 1ರಂದು ಸಚಿವ ಸಂಪುಟ ಸಭೆ ಇದೆ. ಕಾದು ನೋಡಿ: ಜಿ.ಪ​ರ​ಮೇ​ಶ್ವರ್‌

ಮಾಗ​ಡಿ/ರಾಮ​ನ​ಗರ(ಮೇ.31): ಚುನಾ​ವಣೆ ಸಂದ​ರ್ಭ​ದಲ್ಲಿ 5 ಗ್ಯಾರಂಟಿಗಳನ್ನು ನಾವು ಕೊಟ್ಟಿ​ದ್ದೇವೆ. ಕಾಂಗ್ರೆಸ್‌ನ ಚುನಾ​ವಣಾ ಪ್ರಣಾ​ಳಿಕೆ ಕಮಿಟಿಗೆ ನಾನೇ ಅಧ್ಯ​ಕ್ಷ​ನಾ​ಗಿದ್ದೆ. ದೇವರ ಸನ್ನಿ​ಧಿ​ಯಲ್ಲಿ ನಿಂತು ಹೇಳು​ತ್ತಿ​ದ್ದೇನೆ. ಆ ಐದೂ ಭರ​ವ​ಸೆ​ಗ​ಳನ್ನು ಈಡೇ​ರಿ​ಸಿ ತೋರಿ​ಸು​ತ್ತೇವೆ. ಕೇವಲ ಒಂದು ವಾರ ಕಾದು ನೋಡಿ ಸಾಕು ಎಂದು ಗೃಹ ಸಚಿವ ಜಿ.ಪ​ರ​ಮೇ​ಶ್ವರ್‌ ಸ್ಪಷ್ಟಪಡಿಸಿದ್ದಾರೆ. 

ಮಾಗಡಿ ತಾಲೂ​ಕಿನ ಹೆಬ್ಬಾ​ಳಲು ಗ್ರಾಮ​ದಲ್ಲಿರುವ ತಮ್ಮ ಮನೆ ದೇವ​ರಾದ ಮುಳು​ಕ​ಟ್ಟಮ್ಮ ದೇವಿ ದೇವ​ಸ್ಥಾ​ನ​ಕ್ಕೆ ಕುಟುಂಬ ಸಮೇ​ತರಾಗಿ ಆಗ​ಮಿಸಿ, ಪೂಜೆ ಸಲ್ಲಿ​ಸಿದ ಬಳಿಕ, ಸುದ್ದಿ​ಗಾ​ರ​ರೊಂದಿಗೆ ಅವರು ಮಾತ​ನಾ​ಡಿ​ದ​ರು. ಆ ಭರ​ವ​ಸೆ​ಗಳು ನಮ್ಮ ಪಕ್ಷದ ಸುಳ್ಳು ಭರ​ವ​ಸೆ​ಗ​ಳಲ್ಲ. ನುಡಿ​ದಂತೆ ನಡೆ​ಯಲು ಘೋಷಣೆ ಮಾಡಿ​ದ್ದೇವೆ. ಮೊದಲ ಸಂಪುಟ ಸಭೆ​ಯ​ಲ್ಲಿಯೇ ಇವುಗಳ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ಜೂನ್‌ 1ರಂದು ಸಚಿವ ಸಂಪುಟ ಸಭೆ ಇದೆ. ಕಾದು ನೋಡಿ. ಈ ಭರ​ವಸೆಗಳನ್ನು ಈಡೇ​ರಿ​ಸಲು 40 ರಿಂದ 50 ಸಾವಿರ ಕೋಟಿ ರುಪಾಯಿ ಖರ್ಚಾ​ಗಲಿದೆ. ಆ ಹಣ​ವನ್ನು ಒದ​ಗಿ​ಸುವ ಬುದ್ಧಿ​ವಂತಿಕೆ ಕಾಂಗ್ರೆಸ್‌ ಪಕ್ಷ​ಕ್ಕಿದೆ ಎಂದರು.

Congress Guarantee: ಹಂತ ಹಂತವಾಗಿ ಗ್ಯಾರಂಟಿ ಜಾರಿ?

ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ ಹರಿಹಾಯ್ದ ಅವರು, ಹಿಂದಿನ ಬಿಜೆಪಿ ಸರ್ಕಾ​ರ ಭ್ರಷ್ಟಾ​ಚಾ​ರದಲ್ಲಿ ತೊಡ​ಗಿ​ ನಾವು ತಲೆತಗ್ಗಿಸುವಂತಹ ಕೆಲಸ ಮಾಡಿತು. ಈಗ ಅವ​ರು ನಮಗೆ ಪಾಠ ಹೇಳಿ​ಕೊ​ಡು​ವುದು ಬೇಡ. ಈ ಹಿಂದೆ ಜೆಡಿ​ಎಸ್‌ಗೂ ಅಧಿ​ಕಾರ ನಡೆ​ಸಲು ನಾಡಿನ ಜನ ಅವ​ಕಾಶ ನೀಡಿ​ದ್ದರು. ಕುಮಾ​ರ​ಸ್ವಾಮಿಯವರ ಕೈಗೆ ಅಧಿ​ಕಾರ ನೀಡಿ​ದಾಗ ಕೇವಲ 14 ತಿಂಗಳು ಆಡ​ಳಿತ ನಡೆಸಿ, ನಮ್ಮ ಕೈಯಲ್ಲಿ ಆಗ​ಲ್ಲ​ಎಂದು ಬಿಟ್ಟು ಹೋದರು. ಅವರ ಕೆಟ್ಟಆಡಳಿತ ನೋಡಿ ಜನರು ಬುದ್ದಿ ಕಲಿಸಿದ್ದಾರೆ. ಈಗ ಜನರನ್ನು ಎತ್ತಿಕಟ್ಟುವ ಕೆಲಸ ಮಾಡು​ತ್ತಿ​ದ್ದಾರೆ ಎಂದು ಆರೋಪಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ