ಸಾಲ​ಮನ್ನಾ ಮಾಡಿದ ಕೈ-ಕಮಲ ಸಿಎಂ ತೋರಿಸಿ: ಎಚ್‌ಡಿ ದೇವೇಗೌಡ ಸವಾಲು!

Published : May 09, 2023, 03:27 AM IST
ಸಾಲ​ಮನ್ನಾ ಮಾಡಿದ ಕೈ-ಕಮಲ ಸಿಎಂ ತೋರಿಸಿ: ಎಚ್‌ಡಿ ದೇವೇಗೌಡ ಸವಾಲು!

ಸಾರಾಂಶ

ರೈತರ ಸಾಲ 26 ಸಾವಿರ ಕೋಟಿ ರುಪಾಯಿ ಮನ್ನಾ ಮಾಡಿರುವ ಒಬ್ಬನೇ ಒಬ್ಬ ಕಾಂಗ್ರೆಸ್‌ ಅಥವಾ ಬಿಜೆಪಿ ಮುಖ್ಯಮಂತ್ರಿಯನ್ನು ತೋರಿಸಿ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸವಾಲು ಹಾಕಿದರು.

ರಾಮ​ನ​ಗ​ರ (ಮೇ.9) : ರೈತರ ಸಾಲ 26 ಸಾವಿರ ಕೋಟಿ ರುಪಾಯಿ ಮನ್ನಾ ಮಾಡಿರುವ ಒಬ್ಬನೇ ಒಬ್ಬ ಕಾಂಗ್ರೆಸ್‌ ಅಥವಾ ಬಿಜೆಪಿ ಮುಖ್ಯಮಂತ್ರಿಯನ್ನು ತೋರಿಸಿ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸವಾಲು ಹಾಕಿದರು.

ನಗ​ರ​ದಲ್ಲಿ ಜೆಡಿ​ಎಸ್‌ ಅಭ್ಯರ್ಥಿ ನಿಖಿಲ್‌ ಕುಮಾ​ರ​ಸ್ವಾಮಿ(JDS Candidate) ಪರ​ವಾಗಿ ರೋಡ್‌ ಶೋ(Roadshow) ನಡೆಸಿ ಮತ​ಯಾ​ಚನೆ ಮಾಡಿದ ಅವರು, ರೈತರ ಸಾಲ ಮನ್ನಾ ಮಾಡಿರುವ ಕುಮಾರಸ್ವಾಮಿ ಈ ಬಾರಿ ಮುಖ್ಯಮಂತ್ರಿಯಾಗುವುದು ನಿಶ್ಚಿತ. ಸ್ತ್ರೀಶಕ್ತಿ ಸಂಘಗಳು, ಮಹಿಳಾ ಗುಂಪುಗಳು ಮಾಡಿರುವ ಸಾಲವನ್ನು ಮನ್ನಾ ಮಾಡಲು ತಿಳಿಸಿದ್ದೇನೆ. ನಮ್ಮದು ಕುಟುಂಬ ರಾಜಕಾರಣ ಅಲ್ಲ. ಬದಲಿಗೆ ರಾಜ್ಯದ ಜನರ ಹಿತದೃಷ್ಟಿಯಿಂದ ನಮ್ಮ ಕುಟುಂಬ​ದ​ವರು ಸ್ಪರ್ಧೆ ಮಾಡು​ತ್ತಿ​ದ್ದಾರೆ. ರಾಜಕೀಯವಾಗಿ ಹಾಸನದಲ್ಲಿ ತೊಂದರೆಯಾದಾಗ ಈ ಕ್ಷೇತ್ರದ ಜನರು ನನ್ನನ್ನು ಆಶೀರ್ವದಿಸಿ ಶಾಸ​ಕ​ರಾಗಿ, ಮುಖ್ಯ​ಮಂತ್ರಿ ಹಾಗೂ ಪ್ರಧಾನಿಯ ಮಟ್ಟಕ್ಕೆ ಬೆಳೆಸಿದಿರಿ. ಈಗ ನನ್ನ ಮೊಮ್ಮಗ ನಿಖಿಲ್‌ನನ್ನು ಮೇಲೆತ್ತುವ ಕೆಲಸಕ್ಕೆ ಜಾತಿ ಧರ್ಮ ಮರೆತು ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಜೆಡಿಎಸ್‌ ಅಧಿಕಾರಕ್ಕೆ ತರುವುದು ನನ್ನ ಕನಸು: ಎಚ್‌.ಡಿ.ದೇವೇಗೌಡ

ನಾನು ಪ್ರಧಾ​ನಿ​ಯಾ​ಗಿ​ದ್ದಾಗ ಅಲ್ಪಸಂಖ್ಯಾತ ಸಮುದಾಯದವರಿಗೆ, ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು, ಕಾಶ್ಮೀರಕ್ಕೆ 4 ಬಾರಿ ಹೋಗಿ ಬಂದಿ​ದ್ದೇನೆ. ಫಾರೂಕ್‌ ಅಬ್ದುಲ್ಲಾ ಅವರನ್ನು ಸಿಎಂ ಮಾಡಿದ್ದು, ಟಿಪ್ಪು ಹೆಸರಿನಲ್ಲಿ ವಸತಿ ಶಾಲೆ ಕೊಟ್ಟಿದ್ದೆ. ಅದನ್ನು ಕಾಂಗ್ರೆ​ಸ್ಸಿ​ಗರು ನಾಶ ಮಾಡಿದರು ಎಂದು ಕಿಡಿಕಾರಿದ ದೇವೇಗೌಡರು, ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗುತ್ತಾರೆ. ಅವರ ಮೇಲೆ ದ್ವೇಷ, ಅಸೂಯೆಯಿಂದ ಸೋಲಿಸಲು ವಿರೋಧಿಗಳ ತಂತ್ರ ನಡೆಯುತ್ತಿದೆ. ಆದರೆ ಅಲ್ಲಿಯೂ ಸಹ ಜಯಭೇರಿ ಬಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ​ಪ​ಡಿ​ಸಿ​ದರು.

ಜೆಡಿಎಸ್‌ ತಾಲೂ​ಕು ಅಧ್ಯಕ್ಷ ರಾಜಶೇಖರ್‌, ರಾಜ್ಯ ವಕ್ತಾರರಾದ ಬಿ.ಉಮೇಶ್‌, ನರಸಿಂಹಮೂರ್ತಿ, ಮುಖಂಡರಾದ ಕಂಟ್ರಾ​ಕ್ಟರ್‌ ಪ್ರಕಾಶ್‌, ಹನುಮಂತ, ಮಳವಳ್ಳಿರಾಜು, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಬಿಳಗುಂಬ ಮೋಹನ್‌, ಗೂಳಿಗೌಡ, ರೈಡ್‌ ನಾಗರಾಜು, ಆರೀಫ್‌ ಖುರೇಷಿ, ವಿಜಯ್‌ಕುಮಾರ್‌, ದೊರೆಸ್ವಾಮಿ, ಗೌಡಯ್ಯನದೊಡ್ಡಿ ಕೃಷ್ಣ, ಶಿವಸ್ವಾಮಿ ಮತ್ತಿತರರು ಹಾಜ​ರಿ​ದ್ದ​ರು.

ನಿಖಿಲ್‌ನನ್ನು ಕ್ಷೇತ್ರದ ಜನರ ಮಡಿಲಿಗೆ ಹಾಕಿರುವೆ

ನಾನು ಸುಳ್ಳು ಹೇಳಿ ಮತ ಕೇಳುವ ಅವಶ್ಯಕತೆ ಇಲ್ಲ. ಪಂಚರತ್ನ ಯೋಜನೆ ಮೂಲಕ ರಾಜ್ಯದ ಜನರ ಮನಸ್ಸು ಗೆದ್ದಿದ್ದೇನೆ ಎಂದು ಮಾಜಿ ಸಿಎಂ ಕುಮಾ​ರ​ಸ್ವಾಮಿ ಹೇಳಿ​ದ​ರು. ಕ್ಷೇತ್ರದ ಬಡವರಿಗೆ ಮನೆ ಕೊಡುವ ವಿಷಯದಲ್ಲಿ ನನಗೆ ನೋವಿದೆ. ಈ ವಿಷಯದಲ್ಲೂ ದೊಡ್ಡ ರಾಜಕಾರಣ ಮಾಡಿದರು. ಮುಂದಿನ ಯುಗಾದಿ ಒಳಗೆ ಬಡವರಿಗೆ ಮನೆ ಕಟ್ಟಿಕೊಡದಿದ್ದರೆ ಮತ ಕೇಳಲು ಬರುವುದಿಲ್ಲ ಎಂದರು.

ಕ್ಷೇತ್ರದ ಜನರ ಮಡಿ​ಲಿಗೆ ನಿಖಿಲ್‌ನನ್ನು ಹಾಕಿ​ದ್ದೇನೆ. ನನಗೆ ತೋರಿ​ಸಿ​ದಷ್ಟೇ ಪ್ರೀತಿ​ಯನ್ನು ನನ್ನ ಮಗ​ನಿಗೂ ಕೊಡು​ತ್ತೀರಿ ಎಂಬ ನಂಬಿಕೆ ಇದೆ. ನನ್ನ ಮೇಲೆ ಬೇಸರ ಮಾಡಿ​ಕೊ​ಳ್ಳ​ಬೇಡಿ. ನಾವು ಹೊರ​ಗಿ​ನ​ವ​ರಲ್ಲ, ಇದೇ ಜಿಲ್ಲೆಗೆ ಸೇರಿ​ದ​ವರು. ನನ್ನ ಜೀವ​ನದ ಕೊನೆ ಉಸಿರು ಇರು​ವ​ವ​ರೆಗೂ ನಿಮ್ಮ ಕೈ ಬಿಡು​ವು​ದಿಲ್ಲ ಎಂದು ಹೇಳಿ​ದ​ರು.

ಮನೆ ಕೊಡ​ದಿ​ದ್ದರೆ ಸ್ಪರ್ಧೆ ಮಾಡ​ಲ್ಲ

ಜೆಡಿ​ಎಸ್‌ ಅಭ್ಯರ್ಥಿ ನಿಖಿಲ್‌ ಕುಮಾ​ರ​ಸ್ವಾಮಿ(JDS Candidate Nikhil kumaraswamy) ಮಾತ​ನಾಡಿ, ದೇವೇಗೌಡರು (HD Devegowda)ರಾಮನಗರದಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದರು. ಅವರು ರಾಜ​ಕಾ​ರ​ಣ​ದಲ್ಲಿ ಹುಲಿ ರೀತಿ ಘರ್ಜನೆ ಮಾಡಿದ್ದಾರೆ. ದೇವೇಗೌಡ ಮತ್ತು ಕುಮಾ​ರ​ಸ್ವಾಮಿ(HD Kumaraswamy) ಅವ​ರನ್ನು ಆಶೀ​ರ್ವಾದ ಮಾಡಿ​ದ್ದೀರಿ. ತಮಗೂ ಆಶೀ​ರ್ವಾದ ಮಾಡು​ವಂತೆ ಕೋರಿ​ದರು.

ಜೆಡಿಎಸ್‌ ಅಧಿಕಾರಕ್ಕೆ ತಂದು ಕಣ್ಮುಚ್ಚುವ ಆಸೆ: ದೇವೇಗೌಡರ ಭಾವನಾತ್ಮಕ ಮಾತು

ಕುಮಾ​ರ​ಸ್ವಾ​ಮಿ​ ರಾಮ​ನ​ಗ​ರ​ವನ್ನು ಜಿಲ್ಲೆ​ಯ​ನ್ನಾಗಿ ಘೋಷಣೆ ಮಾಡಿ​ದರು. ಅಂದಿ​ನಿಂದ ಇಲ್ಲಿ​ವ​ರೆಗೂ ಜಿಲ್ಲೆ​ಯನ್ನು ಅಭಿ​ವೃದ್ಧಿ ಮಾಡು​ತ್ತಿ​ದ್ದಾರೆ. ಈಗ ಶಾಶ್ವ​ತ​ವಾದ ಕುಡಿ​ಯುವ ನೀರಿನ ಯೋಜನೆ ಪ್ರಾರಂಭ​ವಾ​ಗಿದೆ. ಕುಮಾ​ರ​ಸ್ವಾ​ಮಿ​ರವರ ಬಗ್ಗೆ ಏನೇನೊ ಮಾತ​ನಾ​ಡು​ತ್ತಾರೆ. ಅದ​ಕ್ಕೆಲ್ಲ ಉತ್ತರ ಕೊಡ​ಬೇ​ಕಿದೆ. ನಗ​ರ ಪ್ರದೇ​ಶ​ದಲ್ಲಿ 5100 ರುಪಾಯಿ ನೀಡಿ​ದ​ವ​ರಿಗೆ ಮನೆ ಕಟ್ಟಿಸಿ ಕೊಡು​ತ್ತೇನೆ. ಇಲ್ಲ​ದಿ​ದ್ದರೆ ನಾನು 2023ರ ಚುನಾ​ವ​ಣೆಯಲ್ಲಿ ಸ್ಪರ್ಧೆ ಮಾಡು​ವು​ದಿಲ್ಲ. ಇದು ನನ್ನ ಶಪಥ ಎಂದು ನಿಖಿಲ್‌ ಹೇಳಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!