'ಮುಖ್ಯಮಂತ್ರಿಯಾಗಿ ತುಂಬಾ ಬುದ್ಧಿವಂತರಾಗುತ್ತಿದ್ದಾರೆ’: ನಿತೀಶ್ ಕುಮಾರ್‌ಗೆ Prashant Kishor ತಿರುಗೇಟು

By BK AshwinFirst Published Oct 5, 2022, 2:47 PM IST
Highlights

ನಿತೀಶ್ ಕುಮಾರ್ ಅವರು ತಮ್ಮ ಕುರ್ಚಿಯನ್ನು ಹಿಡಿದಿಟ್ಟುಕೊಳ್ಳಲು ಸಮರ್ಥರಾಗಿದ್ದಾರೆ ಮತ್ತು ಅವರು ತುಂಬಾ ಸ್ಮಾರ್ಟ್ ಎಂದು ಭಾವಿಸುತ್ತಾರೆ ಎಂದು ಪ್ರಶಾಂತ್ ಕಿಶೋರ್ ಬಿಹಾರ ಸಿಎಂ ವಿರುದ್ಧ ಲೇವಡಿ ಮಾಡಿದ್ದಾರೆ. 

ರಾಜಕೀಯ ತಂತ್ರಜ್ಞ (Political Strategist) ಪ್ರಶಾಂತ್ ಕಿಶೋರ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಮಂಗಳವಾರ (ಅಕ್ಟೋಬರ್ 4, 2022) ವಾಗ್ದಾಳಿ ನಡೆಸಿದರು ಮತ್ತು ಅವರು ತಮ್ಮ ಕುರ್ಚಿಯನ್ನು ಹಿಡಿದಿಟ್ಟುಕೊಳ್ಳಲು ಸಮರ್ಥರಾಗಿದ್ದಾರೆ ಮತ್ತು ಈ ಮೂಲಕ "ಅವರು ತುಂಬಾ ಬುದ್ಧಿವಂತರು" ಎಂದು ಭಾವಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಂತೆ (Bharat Jodo Yatra) ಅಕ್ಟೋಬರ್ 2 ರಂದು ತಮ್ಮ ಪಾದಯಾತ್ರೆ ಆರಂಭಿಸಿದ್ದ ಪ್ರಶಾಂತ್ ಕಿಶೋರ್, ಈ ವೇಳೆ ಅಕ್ಟೋಬರ್ 4 ರಂದು ಬಿಹಾರ ಸಿಎಂ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಬಿಹಾರದ ಮೂಲೆ ಮೂಲೆಗಳನ್ನು ಈ ಪಾದಯಾತ್ರೆ ಆವರಿಸಲಿದ್ದು, ಈ ವೇಳೆ ಮಾತನಾಡಿದ ಪ್ರಶಾಂತ್ ಕಿಶೋರ್‌, ತಮ್ಮ ಜನತಾ ದಳ (ಯುನೈಟೆಡ್‌) (Janata Dal (United)) ಪಕ್ಷದ ನೇತೃತ್ವ ವಹಿಸಲು ನಿತೀಶ್ ಕುಮಾರ್ ಅವರ ಇತ್ತೀಚಿನ ವಿನಂತಿಯನ್ನು ತಿರಸ್ಕರಿಸಿರುವುದಾಗಿಯೂ ಹೇಳಿದ್ದಾರೆ.

"ನಿತೀಶ್ ಕುಮಾರ್ ಅವರು ತಮ್ಮ ಕುರ್ಚಿಯನ್ನು (Chair) ಹಿಡಿದಿಟ್ಟುಕೊಳ್ಳಲು ಸಮರ್ಥರಾಗಿದ್ದಾರೆ ಮತ್ತು ಅವರು ತುಂಬಾ ಸ್ಮಾರ್ಟ್ ಎಂದು ಭಾವಿಸುತ್ತಾರೆ’’ ಎಂದು ಪ್ರಶಾಂತ್ ಕಿಶೋರ್ ಲೇವಡಿ ಮಾಡಿದ್ದಾರೆ. "2014 (ಲೋಕಸಭಾ) ಚುನಾವಣೆಯಲ್ಲಿ ಸೋತ ನಂತರ ಅವರು ದೆಹಲಿಯಲ್ಲಿ ನನ್ನನ್ನು ಭೇಟಿಯಾದರು, ಸಹಾಯಕ್ಕಾಗಿ ಬೇಡಿಕೊಂಡರು. 2015 ರ ವಿಧಾನಸಭಾ ಚುನಾವಣೆಯಲ್ಲಿ 'ಮಹಾಘಟಬಂಧನ'ದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅವರನ್ನು ಗೆಲ್ಲಿಸಲು ನಾನು ಅವರಿಗೆ ಸಹಾಯ ಮಾಡಿದ್ದೇನೆ. ಇಂದು ಅವರು ನನಗೆ ಬುದ್ಧಿವಂತಿಕೆ ನೀಡುವ ದೃಢತೆ ಹೊಂದಿದ್ದಾರೆ ಎಂದು ಪ್ರಶಾಂತ್‌ ಕಿಶೋರ್ ಹೇಳಿದ್ದಾರೆ.

ಇದನ್ನು ಓದಿ: ಪ್ರಶಾಂತ್‌ ಕಿಶೋರ್‌ ಗುಪ್ತವಾಗಿ ಬಿಜೆಪಿಗೆ ಸಹಾಯ ಮಾಡುತ್ತಿರಬಹುದು: ನಿತೀಶ್‌ ಕುಮಾರ್‌

"10-15 ದಿನಗಳ ಹಿಂದೆ ನಿತೀಶ್ ಕುಮಾರ್ ಅವರು ನನ್ನನ್ನು ಅವರ ನಿವಾಸಕ್ಕೆ ಕರೆದಿದ್ದರು ಎಂದು ಮಾಧ್ಯಮ ವರದಿಗಳ ಮೂಲಕ ನಿಮಗೆಲ್ಲ ತಿಳಿದಿರಬೇಕು. ಅವರು ತಮ್ಮ ಪಕ್ಷವನ್ನು ಮುನ್ನಡೆಸುವಂತೆ ನನ್ನನ್ನು ಕೇಳಿದರು. ಅದು ಸಾಧ್ಯವಿಲ್ಲ ಎಂದು ನಾನು ಹೇಳಿದೆ. ಯಾವುದೇ ಹುದ್ದೆಗೆ ಪ್ರತಿಯಾಗಿ, ನಾನು ಮಾಡಿದ ಬದ್ಧತೆಯಿಂದ ಹಿಂತಿರುಗಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ಕಳೆದ ವಾರ 'ಜನ್ ಸುರಾಜ್' ಎಂಬ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಪ್ರಶಾಂತ್‌ ಕಿಶೋರ್ ಪ್ರಾರಂಭಿಸಿದ್ದಾರೆ. ಅವರಿಗೆ ಬಿಹಾರ ರಾಜಕೀಯದ "ಎ, ಬಿ ಮತ್ತು ಸಿ ತಿಳಿದಿರಲಿಲ್ಲ" ಎಂದು ನಿತೀಶ್‌ ಕುಮಾರ್ ಅವರ ಅಸಮಾಧಾನವನ್ನು ರಾಜಕೀಯ ತಂತ್ರಜ್ಞ ಸ್ಪಷ್ಟವಾಗಿ ಉಲ್ಲೇಖಿಸುತ್ತಿದ್ದಾರೆ. "ನಾನು ವೈದ್ಯರ ಮಗ, ದೇಶಾದ್ಯಂತ ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ ನಂತರ ನನ್ನ ತವರು ರಾಜ್ಯದಲ್ಲಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇನೆ" ಎಂದು ಜೆಡಿಯು ಮಾಜಿ ರಾಷ್ಟ್ರೀಯ ಉಪಾಧ್ಯಕ್ಷರು ಹೇಳಿದರು.

ತಮ್ಮ 'ಪಾದಯಾತ್ರೆ'ಗೆ ಹಣದ ಮೂಲವನ್ನು ಪ್ರಶ್ನಿಸಿದ್ದ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ವಿರುದ್ಧವೂ ಅವರು ವಾಗ್ದಾಳಿ ನಡೆಸಿದರು. "ನಾನು ಹಣವನ್ನು ಎಲ್ಲಿಂದ ಪಡೆಯುತ್ತಿದ್ದೇನೆ ಎಂದು ತಿಳಿಯಲು ಬಯಸುವವರು ಅವರಂತೆ, ನಾನು ದಲ್ಲಾಳಿಯಲ್ಲಿ ತೊಡಗಿಲ್ಲ ಎಂದು ತಿಳಿದುಕೊಳ್ಳಬೇಕು" ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್  ಕಿಶೋರ್ ಹೇಳಿದರು.

ಇದನ್ನೂ ಓದಿ: ನಾನು ರಾಹುಲ್‌ ಗಾಂಧಿಗೆ ಸಮಾನ ವ್ಯಕ್ತಿ ಅಲ್ಲ: ಪ್ರಶಾಂತ್‌ ಕಿಶೋರ್‌

"ಚುನಾವಣೆಗಳನ್ನು ಹೇಗೆ ಗೆಲ್ಲಬೇಕು ಎಂಬುದರ ಕುರಿತು ರಾಜಕಾರಣಿಗಳು ಬಹಳ ಹಿಂದಿನಿಂದಲೂ ನನ್ನ ಸಲಹೆ ಕೇಳುತ್ತಿದ್ದಾರೆ. ರಾಜಕೀಯ ತಂತ್ರಗಾರನಾಗಿ ನನ್ನ ದಾಖಲೆಯ ಬಗ್ಗೆ ಮಾಧ್ಯಮಗಳು ಪ್ರಶಂಸೆಯಿಂದ ತುಂಬಿವೆ. ಆದರೆ ನಾನು ಹಿಂದೆಂದೂ ನನಗೆ ಸಾಲ ನೀಡುವಂತೆ ಯಾರನ್ನೂ ಕೇಳಿಲ್ಲ. ಆದರೆ ಇಂದು ನಾನು ದೇಣಿಗೆಯನ್ನು ಹುಡುಕುತ್ತಿದ್ದೇನೆ’’ ಎಂದು ಪ್ರಶಾಂತ್‌ ಕಿಶೋರ್ ಹೇಳಿದರು.

2018ರಲ್ಲಿ ಪಕ್ಷದ ನೇತೃತ್ವ ವಹಿಸಿದ್ದ ನಿತೀಶ್‌ ಕುಮಾರ್‌, ಪ್ರಶಾಂತ್‌ ಕಿಶೋರ್ ಅವರನ್ನು ಜೆಡಿ(ಯು)ಗೆ ಸೇರಿಸಿಕೊಂಡಿದ್ದು, ಕೆಲವೇ ವಾರಗಳಲ್ಲಿ ಅವರು ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕವಾಗಿದ್ದರು. ಆದರೆ ಪೌರತ್ವ (ತಿದ್ದುಪಡಿ) ಕಾಯಿದೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿಗೆ ಸಂಬಂಧಿಸಿದಂತೆ ನಿತೀಶ್‌ ಕುಮಾರ್ ಅವರೊಂದಿಗಿನ ಜಗಳವು ಒಂದೆರಡು ವರ್ಷಗಳ ನಂತರ ಅವರನ್ನು ಪಕ್ಷದಿಂದ ಹೊರಹಾಕಲು ಕಾರಣವಾಯಿತು. 

click me!